ಬಸ್​ ಇಲ್ಲದೆ, ಪ್ರತಿನಿತ್ಯಾ 14 ಕಿ.ಮೀ ಕಾಲು ನಡಿಗೆಯಲ್ಲಿ: SSLC ಯಲ್ಲಿ 615 ಅಂಕ ಪಡೆದ ಶಿರಸಿಯ ಮಾನಸ ಸಾಧನೆ ಮಾಡಿದ್ದಾರೆ.

ಬಸ್​ ಇಲ್ಲದೆ, ಪ್ರತಿನಿತ್ಯಾ 14 ಕಿ.ಮೀ ಕಾಲು ನಡಿಗೆಯಲ್ಲಿ: SSLC ಯಲ್ಲಿ 615 ಅಂಕ ಪಡೆದ ಶಿರಸಿಯ ಮಾನಸ ಸಾಧನೆ ಮಾಡಿದ್ದಾರೆ.

ಬಸ್​ ವ್ಯವಸ್ಥೆ ಇಲ್ಲದೇ ದಿನನಿತ್ಯ ಮನೆಯಿಂದ ಶಾಲೆಗೆ 7 ಕಿ.ಮೀ. ನಡೆದುಕೊಂಡೇ ಹೋಗಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿ ಎಸ್​ಎಸ್​ಎಲ್​​​ಸಿಯಲ್ಲಿ 625ಕ್ಕೆ 615 ಅಂಕ ಪಡೆದು ಸಾಧನೆ ಮಾಡಿದ್ದಾಳೆ.

ಕಾರವಾರ: ಬೆಳಾಕಾಗುತಿದಂತೆ ಮನೆ ಬಿಟ್ಟು ಶಾಲೆಗೆ ಹೋಗಿ, ಮತ್ತೆ ರಾತ್ರಿ ವೇಳೆಯೇ ಮನೆ ಸೇರುತ್ತಿದ್ದ ವಿದ್ಯಾರ್ಥಿನಿ ಒಬ್ಬಳು ನಿತ್ಯವೂ 14 ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಿ, ಸಮಯ ವ್ಯರ್ಥ ಮಾಡಿಕೊಂಡರೂ ಹತ್ತನೆ ತರಬೇತಿಯ ಪರೀಕ್ಷೆಯಲ್ಲಿ 615 ಅಂಕ ಪಡೆಯುವ ಮೂಲಕ ರಾಜ್ಯವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾಳೆ.

ಶಿರಸಿ ತಾಲೂಕಿನ ಸಾಲ್ಕಣಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ನೀಲ್ಕಣಿ ಗ್ರಾಮದ ಮಾನಸ ನಾಗೇಶ ಗೌಡ ರವರು SSLC ಪರೀಕ್ಷೆಯಲ್ಲಿ 625ಕ್ಕೆ 615 ಅಂಕ ಗಳಿಸಿ ಎಲ್ಲರ ಗಮನ ಸೆಳೆದ ವಿದ್ಯಾರ್ಥಿನಿ. ಲಕ್ಷ್ಮಿನರಸಿಂಹ ಮಾಧ್ಯಮಿಕ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿನಿ ಕನ್ನಡ ಮತ್ತು ಹಿಂದಿ ವಿಷಯಕ್ಕೆ ಸಂಪೂರ್ಣವಾದ ಅಂಕ ಪಡೆದಿದ್ದಾರೆ, ಇಂಗ್ಲಿಷ್​ನಲ್ಲಿ 2 ಅಂಕ, ಗಣಿತದಲ್ಲಿ 2, ಸಮಾಜ ವಿಜ್ಞಾನದಲ್ಲಿ 1 ಅಂಕ ಹಾಗೂ ವಿಜ್ಞಾನದಲ್ಲಿ 5 ಅಂಕ ಮಾತ್ರ ಕಡಿಮೆ ಬಂದಿವೆ.

ದಿನ ನಿತ್ಯ 14 ಕಿ.ಮೀ ಕಾಲುನಡಿಗೆ,

ಬಸ್​ ಹಾಗೂ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲದಿರುವ ಗ್ರಾಮದಿಂದ ಸಾಲ್ಕಣಿ ಪ್ರೌಢಶಾಲೆಗೆ ಮಾನಸ ದಿನಾಲು ಸಹಪಾಠಿಗಳೊಂದಿಗೆ 14 ಕಿ.ಮೀ. ಕಾಲು ನಡಿಕೆಯಲ್ಲಿ ಹೊಗುತ್ತಿದ್ದಳು. ಇವಾಗ SSLC ಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ.

ಜಿಲ್ಲಾಧಿಕಾರಿಯಾಗುವ ಗುರಿ,

ಶಾಲೆ ದೂರದಲ್ಲಿರುವ ಕಾರಣ ಬೆಳಗ್ಗೆ 6.30ಕ್ಕೆ ಮನೆಯಿಂದ ಹೋಗುತಿದ್ದಳು. ಸ್ನೇಹಿತರ ಜೊತೆ ನಡೆದುಕೊಂಡೇ ಹೋಗುತಿದ್ದಳು. ಶಾಲೆ ಮುಗಿಸಿಕೊಂಡು ಮನೆಗೆ ಬರುವಾಗ ಸಂಜೆ 7:30 ಆಗುತ್ತಿತ್ತು. ಹೀಗಿರುವಾಗ, ಓದಲು ಸಾಕಷ್ಟು ಸಮಯ ಸಿಗುತ್ತಿರಲಿಲ್ಲ. ಅದರಿಂದ ರಾತ್ರಿ 1 ಗಂಟೆವರೆಗೂ ಓದುತ್ತಿದ್ದೆ. ಕೆಲವೊಮ್ಮೆ ಬೆಳಗ್ಗೆ 4 ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದೆ. ಯಾವುದೆ ಟ್ಯೂಶನ್ಗೆ ಹೋಗುತಿರಲಿಲ್ಲ. ಮುಂದೆ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ಜಿಲ್ಲಾಧಿಕಾರಿಯಾಗುವ ಗುರಿ ನನಗೆ ಇದೆ. ಇನ್ನೂ ಚೆನ್ನಾಗಿ ಓದುತ್ತೇನೆ” ಎಂದು ವಿದ್ಯಾರ್ಥಿನಿ ಮಾನಸ ಅವರು ತಮ್ಮ ಕನಸಿನ ಗುರಿಯನ್ನು ಹೇಳಿಕೊಂಡಿದ್ದಾರೆ.

WhatsApp Group Join Now
Telegram Group Join Now       

ಮಾನಸಾಳ ತಂದೆಯ ಕೋರಿಕೆ ಏನು?

ಊರಿನಿಂದ ಸಾಲ್ಕಣಿ ಲಕ್ಷ್ಮಿನರಸಿಂಹ ಮಾಧ್ಯಮಿಕ ಪ್ರೌಢಶಾಲೆ ಸುಮಾರು 7 ಕಿ.ಮೀ. ದೂರದಲ್ಲಿದೆ. ನೀಲ್ಕಣಿ ಮತ್ತು ಕುದ್ರಗೋಡ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸರಿ ಸುಮಾರು 25 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆ ತುಂಬ ದೂರ ಇದೆ, ಆದ ಕಾರಣ ಕೆಲ ಮಕ್ಕಳನ್ನು ತಮ್ಮ ಸಂಬಂಧಿಕರ ಮನೆ ಹಾಗೂ ಹಾಸ್ಟಲ್‌ಗಳಲ್ಲಿ ಬಿಡಲಾಗಿದೆ. ಕಳೆದ ವರ್ಷ ಸುಮಾರು 10 ಮಂದಿ ನಿತ್ಯವೂ ಶಾಲೆಗೆ ಕಾಲು ನಡಿಗೆಯಲ್ಲಿ ಹೋಗುತ್ತಿದ್ದರು. ನಮಗೆ ಯಾವುದೇ ವಾಹನಗಳ ಸೌಕರ್ಯ ಇಲ್ಲ” ಎಂದು ವಿದ್ಯಾರ್ಥಿನಿ ಮಾನಸಳ ತಂದೆ ನಾಗೇಶ ಮಂಜ್ಯಾ ಗೌಡ ಹೇಳಿದರು.

  ಇದನ್ನು ಓದಿ:  ಹಿರಿಯ ನಾಗರಿಕರಿಗೆ ಪೋಸ್ಟ್ ಆಫೀಸ್ನಲ್ಲಿದೆ ಬಂಪರ್ ಆಫರ್ ಈ ಯೋಜನೆಯಲ್ಲಿ ಸಿಗುತ್ತೆ ತಿಂಗಳಿಗೆ 20 ಸಾವಿರ ರೂಪಾಯಿ.
ಇದನ್ನು ಓದಿ: ರಾಜ್ಯದ ರೈತರಿಗೆ ಕೃಷಿ ಪೈಪ್ ಪರಿಕರ ಸಾಧನೆಗಳ ಖರೀದಿಗೆ 90% ಸಬ್ಸಿಡಿ ಸಿಗಲಿದೆ.

ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ,

ಪ್ರತಿ ದಿನ ಕಾಲು ನಡಿಗೆಯಲ್ಲಿಯೇ ಹೋಗಿ ವಿದ್ಯಾಭ್ಯಾಸ ಮಾಡಿದ್ದಾರೆ.ಇವಾಗ ಗ್ರಾಮದಿಂದ ಸುಮಾರು 4 ಕಿ.ಮೀ. ದೂರದವರೆಗೆ 2 ತಿಂಗಳುಗಳಿಂದ ಮುಂಜಾನೆ 9-30ಕ್ಕೆ ಬಸ್ ಬರುತ್ತಿದೆ. ಆದರೆ ಇದರಿಂದ ಶಾಲಾ ಮಕ್ಕಳಿಗೆ ಯಾವುದೆ ಉಪಯೋಗ ಆಗುವುದಿಲ್ಲ. ಶಾಲೆಗೆ ಹೋಗುವ ಮಕ್ಕಳು ಕಾಲು ನಡಿಗೆಯಲ್ಲಿ ಹೋಗುವುದು ಅನಿವಾರ್ಯ ಆಗಿದೆ. ನಾವುಗಳು ಕೆಲಸಕ್ಕೆ ಹೋಗುವ ಕಾರಣ ಪರೀಕ್ಷೆಯ ಸಮಯದಲ್ಲಿ ಅಪರೂಪಕ್ಕೊಮ್ಮೆ ಮಾತ್ರ ಬೈಕಿನಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದೆವು. ನಮ್ಮ ಊರಿಗೆ ಶಾಲಾ ಮಕ್ಕಳ ಸಮಯಕ್ಕೆ ಇನ್ನೊಂದು ಬಸ್ ನ ಸೌಕರ್ಯ ಕಲ್ಪಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲ ಆಗುತದೆ. ಶಾಸಕರು ಇದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕೆಂದು” ವಿದ್ಯಾರ್ಥಿನಿ ಮಾನಸ ರವರ ತಂದೆ ನಾಗೇಶ ಮಂಜ್ಯಾ ಗೌಡರು ಮನವಿ ಮಾಡಿದ್ದರು.

WhatsApp Group Join Now
Telegram Group Join Now       

“ದಿನಾಲು 14 ಕಿ.ಮೀ. ನಡೆದುಕೊಂಡು ಶಾಲೆಗೆ ತೆರಳುತ್ತಿದ್ದ ಮಗಳಿಗೆ ಓದಲು ಸಮಯ ಸಿಗುತ್ತಿರಲಿಲ್ಲ. ಮಗಳು ಮುಂದೆ ಸೈನ್ಸ್ ಮಾಡುತ್ತೆನೆ ಎಂದು ಹೇಳುತ್ತಿದ್ದಾಳೆ. ಕಾಲೇಜಿಗೆ ಶಿರಸಿಗೆ ಹೋಗಬೇಕು. ಆದರೆ ಪ್ರತಿ ದಿನ ಓಡಾಟ ಕಷ್ಟವಾಗುತ್ತದೆ ಆದ ಕಾರಣ ಹಾಸ್ಟಲ್ ಸಿಕ್ಕರೆ ಅನುಕೂಲವಾಗುತ್ತದೆ. ಇಲ್ಲವೆಂದರೆ ಬಸ್ ಸೌಕರ್ಯ ಇದ್ದರೆ ಎಲ್ಲ ಮಕ್ಕಳಿಗೂ, ಸಾರ್ವಜನಿಕರಿಗೂ ಅನುಕೂಲವಾಗುತ್ತದೆ” ಎಂದು ನಾಗೇಶ ಮಂಜ್ಯಾ ಗೌಡರು ಸರ್ಕಾರಕ್ಕೆ ಕೋರಿಕೊಂಡಿದ್ದಾರೆ.

ಇದೇ ರೀತಿ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment