ಕರ್ನಾಟಕ ಸಬ್ಸಿಡಿ ಸಹಿತ ಸ್ವಉದ್ಯೋಗ ಸಾಲ ಯೋಜನೆಗೆ ಅರ್ಜಿಗೆ ಆಹ್ವಾನ

ಕರ್ನಾಟಕ ಸಬ್ಸಿಡಿ ಸಹಿತ ಸ್ವಉದ್ಯೋಗ ಸಾಲ ಯೋಜನೆಗೆ ಅರ್ಜಿಗೆ ಆಹ್ವಾನ

ಈ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ ತಿಳಿದುಕೊಳ್ಳಿ.

• 4 ನಿಗಮಗಳ ವತಿಯಿಂದ ವಿವಿಧ ಜನಾಂಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

• 1 ರಿಂದ 2 ಲಕ್ಷ ರೂ.ವರೆಗೆ ಸಾಲ ಹಾಗೂ ಶೇ.20ರಷ್ಟು ಸಹಾಯಧನ ಕೊಡಲಾಗುತ್ತದೆ.

• ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭವಾಗಿದೆ.

WhatsApp Group Join Now
Telegram Group Join Now       

ಕರ್ನಾಟಕ: ವ್ಯಾಪಾರ, ಕೃಷಿ, ಕೈಗಾರಿಕೆ ಅಥವಾ ಸೇವಾ ವಲಯದಲ್ಲಿ ಉದ್ಯೋಗ ಪ್ರಾರಂಭಿಸಲು ಬಯಸುವ ನಿರುದ್ಯೋಗಿಗಳಿಗೆ 2025-26ನೇ ಸಾಲಿನ ಸ್ವಯಂ ಉದ್ಯೋಗ ಸಾಲ [Self Employment Loan Scheme] ಅಡಿಯಲ್ಲಿ ಕರ್ನಾಟಕ ಸರ್ಕಾರದಿಂದ ನೇರ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಘೋಷಣೆ ಮಾಡಲಾಗಿದೆ. ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈಗಸೇವಾ ಸಿಂಧು ಪೋರ್ಟಲ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ನೀವು ಅಲೆಮಾರಿ ಜನಾಂಗದವರು ಆಗಿದ್ದರೆ ಅಥವಾ ಸವಿತಾ ಸಮುದಾಯಕ್ಕೆ ಸೇರಿದವರಾಗಿದ್ದರೆ ಅಥವಾ ಮಡಿವಾಳ ಜನಾಂಗಕ್ಕೆ ಸೇರಿದವರು ಆಗಿದ್ದರೆ, ನಿಮಗಾಗಿ ಪ್ರತ್ಯೇಕ ನಿಗಮಗಳ ಮೂಲಕ ವೈಯಕ್ತಿಕ ಸಾಲ ಸೌಲಭ್ಯ ಇದೆ. ಅರ್ಹತೆ ಇರುವ ಅಭ್ಯರ್ಥಿಗಳಿಗೆ ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹2 ಲಕ್ಷವರೆಗೆ ಸಾಲ ದೊರೆಯುತ್ತದೆ, ಅದರಲ್ಲಿ ಶೇ.15 ರಿಂದ 20ರಷ್ಟು ಸಹಾಯಧನ ಅಂದರೆ ಸಬ್ಸಿಡಿ (Subsidy) ಸೌಲಭ್ಯವನ್ನು ನೀಡಲಾಗುತ್ತದೆ.

WhatsApp Group Join Now
Telegram Group Join Now       

ಸಾಲದ ಮೊತ್ತದ ಪ್ರಕಾರ ಬಡ್ಡಿದರ ಶೇ.4ರಷ್ಟು ಮಾತ್ರವಿದೆ. ₹1 ಲಕ್ಷ ಒಳಗಡೆ ಕೊಡುವ ಸಾಲಕ್ಕೆ ₹20,000ರವರೆಗೆ ಸಬ್ಸಿಡಿ ನೀಡಲಾಗುತ್ತದೆ, ₹2 ಲಕ್ಷದವರೆಗೆ ಕೊಡಲಾಗುವ ಸಾಲಕ್ಕೆ ₹30,000ವರೆಗೆ ಸಬ್ಸಿಡಿ ದೊರೆಯುತ್ತದೆ. ಈ ಯೋಜನೆಯು ಅಲ್ಪ ಬಂಡವಾಳದಿಂದ ಉದ್ಯೋಗ ಪ್ರಾರಂಭಿಸಲು ಇಚ್ಛೆಯುಳ್ಳವರಿಗೆ ಇದು ತುಂಬಾ ಉಪಯುಕ್ತವಾಗುತ್ತದೆ.

 

ಇದನ್ನು ಓದಿ: ಪಿ ಎಮ್ ಕಿಸಾನ್ ಯೋಜನೆಯ 20ನೇ ಕಂತು, ಫಲಾನುಭವಿ ಪಟ್ಟಿ, ಹಣ ಬಿಡುಗಡೆ

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು ನಿಗದಿಪಡಿಸಲಾಗಿದೆ.

• ಗ್ರಾಮಾಂತರ ಪ್ರದೇಶದವರು ವರ್ಷಕ್ಕೆ ₹98,000 ಚಿಂತಲು ಕಡಿಮೆ ಆದಾಯ ಹೊಂದಿರಬೇಕು.

• ನಗರ ಪ್ರದೇಶದವರು ವಾರ್ಷಿಕ ₹1.2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು.

• ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 55 ವರ್ಷ ವಯಸ್ಸಿನವರು ಆಗಿರಬೇಕು.

• ಈ ಯೋಜನೆಗೆ ಹಿಂದುಳಿದ ವರ್ಗಗಳ ವಿಭಾಗ-1, 2ಎ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳು ಪ್ರತ್ಯೇಕವಾದ ನಿಗಮಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರತ್ಯೇಕವಾದ ನಿಗಮಗಳು,

• ಡಿ. ದೇವರಾಜ ಅರಸು ನಿಗಮ,

• ಅಲೆಮಾರಿ ನಿಗಮ

• ಅರೆ ಅಲೆಮಾರಿ ಅಭಿವೃದ್ಧಿ ನಿಗಮ

• ಸವಿತಾ ಸಮಾಜ ಅಭಿವೃದ್ಧಿ ನಿಗಮ

• ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ

 

ಈ ಯೋಜನೆಯ ಅಡಿಯಲ್ಲಿ ಹಿಂದುಳಿದ ವರ್ಗಗಳಾದ ಭಾಗ 1, 2A, 3A, 3B ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಈ ನಿಗಮಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಗೆ ಯಾರೆಲ್ಲ ಅನರ್ಹರು?

2023-24 ಮತ್ತು 2024-25ರಲ್ಲಿ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಇದರ ಸೌಲಭ್ಯ ಪಡೆದವರು ಮರುಅರ್ಜಿಗೆ ಅವಕಾಶ ಇರುವುದಿಲ್ಲ. ಅಂದರೆ ಇದಕ್ಕಿಂತ ಮುಂಚೆ, ಹಿಂದೆ ಪ್ರಯೋಜನ ಪಡೆದರಾಗಿದ್ದರೆ ಅಥವಾ ಅವರ ಕುಟುಂಬದಲ್ಲಿ ಈ ಯೋಜನೆಯ ಸೌಲಭ್ಯ ಪಡೆದುಕೊಂಡವರು ಬಿದ್ದಿದ್ದರೆ, ಮರುಅರ್ಜಿಗೆ ಸಲ್ಲಿಸಲು ಇಂಥವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಇದು ಈ ಯೋಜನೆಯ ನಿಯಮವಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-06-2025.

ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತೆ ಇದೆ.

ಅರ್ಜಿ ಸಲ್ಲಿಸುವುದು ಹೇಗೆ ಎಂಬುದಕ್ಕೆ ಸ್ಪಷ್ಟ ಮಾರ್ಗದರ್ಶನ ಇಲ್ಲಿದೆ.

• ನಿಮ್ಮ ಹತ್ತಿರದ ಗ್ರಾಮ ಒನ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

• ಕರ್ನಾಟಕಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

• ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಲಾಗಿನ್ ಮಾಡಿ ನೀವೇ ಸ್ವತಃ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅಲ್ಲಿ ಕೇಳುವ ಎಲ್ಲಾ ಬೇಸಿಕ್ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿಯನ್ನು ಸಬ್ಮಿಟ್ ಮಾಡಿ ಮತ್ತು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಉಳಿಸಿಕೊಳ್ಳಿ.

ಇದು ಸರ್ಕಾರದಿಂದ ನೀಡುತ್ತಿರುವ ಒಂದು ಒಳ್ಳೆ ಯೋಜನೆ ಎಂದು ಹೇಳಬಹುದು. ನಿರುದ್ಯೋಗಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಸ್ವತಃ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು. ಇದು ಸರ್ಕಾರ ಕೈಗೊಂಡಿರುವ ದೊಡ್ಡ ಹೆಜ್ಜೆ ಎಂದು ಹೇಳಬಹುದು. ಯುವಕರು ಹಾಗೂ ನಿರುದ್ಯೋಗಿಗಳು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment