ಗೃಹಲಕ್ಷ್ಮಿ ಪೆಂಡಿಂಗ್ ಹಣ ಸರ್ಕಾರ ಬಿಡುಗಡೆ ಮಾಡಿದೆ. ನಿಮ್ಮ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ.

ಗೃಹಲಕ್ಷ್ಮಿ ಪೆಂಡಿಂಗ್ ಹಣ ಸರ್ಕಾರ ಬಿಡುಗಡೆ ಮಾಡಿದೆ. ನಿಮ್ಮ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆ 2025ರ ಬಾಕಿ ಕಂತುಗಳ ಬಿಡುಗಡೆಯ ಮಾಹಿತಿ ಇಲ್ಲಿದೆ ಓದಿ ತಿಳಿದುಕೊಳ್ಳಿ.

ಕರ್ನಾಟಕ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳ 2000 ರೂಪಾಯಿ ಆರ್ಥಿಕ ನೆರವು ದೊರೆಯುತ್ತಿದೆ. 2023ರ ಆಗಸ್ಟ್‌ನಲ್ಲಿ ಪ್ರಾರಂಭವಾದ ಈ ಯೋಜನೆ ಲಕ್ಷಾಂತರ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ದಿಕ್ಕಿನಲ್ಲಿ ದೊಡ್ಡ ಬೆಂಬಲ ನೀಡಿದೆ. 2024ರ ಡಿಸೆಂಬರ್‌ನಿಂದ ನಿಂದ ಬಾಕಿಯಾಗಿದ್ದ ಕಂತುಗಳ ಹಣವನ್ನು ಈಗ ಸರ್ಕಾರ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡುತ್ತಿದೆ.

ಬಾಕಿ ಇರುವ ಕಂತುಗಳ ಸಂಪೂರ್ಣ ವಿವರ.

ಸರ್ಕಾರದ ಇತ್ತೀಚಿನ ಯೋಜನೆಗಳಂತೆ 2024ರ ಡಿಸೆಂಬರ್ ನ 17ನೇ ಕಂತು ಮಾರ್ಚ್ 11, 2025ಕ್ಕೆ, ಜನವರಿಯ 18ನೇ ಕಂತು ಮಾರ್ಸ್ 30, 2025ಕ್ಕೆ, ಮತ್ತು ಫೆಬ್ರವರಿ 19ನೇ ಕಂತು ಮೇ 19, 2025ಕ್ಕೆ ಪ್ರತಿಯೊಬ್ಬ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಈಗ ಮಾರ್ಚ್ 2025ರ 20ನೇ ಕಂತಿನ ಹಣವನ್ನು ಜೂನ್ 7, 2025ರಲ್ಲಿ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳ ಕಂತುಗಳು ಇನ್ನು ಬಾಕಿ ಉಳಿದಿವೆ. ಶೀಘ್ರದಲ್ಲಿ ಇವುಗಳನ್ನು ಜಮಾ ಮಾಡುವ ಬಗ್ಗೆ ಸರ್ಕಾರ ಫಲಾನುಭವಿಗಳಿಗೆ ಭರವಸೆಯನ್ನು ನೀಡಿದೆ.

ಹಣ ಜಮಾ ಮಾಡುವ ಪ್ರಕ್ರಿಯೆ.

ಗೃಹಲಕ್ಷ್ಮಿ ಯೋಜನೆ ಹಣವನ್ನು ಡಿ ಬಿ ಟಿ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ವ್ಯವಸ್ಥೆಯ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡಲಾಗುತ್ತದೆ, ಆದರೆ ತಾಂತ್ರಿಕ ಕಾರಣಗಳಿಂದಾಗಿ ಕೆಲವೊಮ್ಮೆ ಹಣ ಜಮಾ ಆಗಲು ಎರಡು ಅಥವಾ ನಾಲ್ಕು ದಿನಗಳು ಬೇಕಾಗುತ್ತದೆ. ಆದ್ದರಿಂದ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ನಿಯಮಿತವಾಗಿ ಪರಿಶೀಲಿಸುವುದು ಬಹು ಮುಖ್ಯವಾಗಿದೆ.

ಪಾವತಿ ಆಗಿದೆಯಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವ ವಿಧಾನ.

• ಗೂಗಲ್ ಪ್ಲೇ ಸ್ಟೋರ್ ನಿಂದ ಡಿ ಬಿ ಟಿ ಕರ್ನಾಟಕ ಆಪನ್ನು ಡೌನ್ಲೋಡ್ ಮಾಡಿಕೊಳ್ಳಿ.

WhatsApp Group Join Now
Telegram Group Join Now       

• ಆಪ್ ಓಪನ್ ಮಾಡಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಓಟಿಪಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.

• ಆ ಬಳಿಕ ಬಂದ ಓಟಿಪಿಯನ್ನು ಪರಿಶೀಲಿಸಿ 4 ಅಂಕಿಗಳ ಎಮ್ ಪಿನ್ನನ್ನು ರಚಿಸಿ ಸಬ್ಮಿಟ್ ಮಾಡಿ.

WhatsApp Group Join Now
Telegram Group Join Now       

• ಆಪ್ ಆಪ್‌ನ ಮುಖಪುಟದಲ್ಲಿ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿಕೊಳ್ಳಿ, ಗೃಹಲಕ್ಷ್ಮಿ ಯೋಜನೆಯ ಡಿ ಬಿ ಟಿ ಸ್ಥಿತಿಯನ್ನು ಪರಿಶೀಲಿಸಿ.

• ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ಅನ್ನು ಆಯ್ಕೆಯ ಮೂಲಕ ಆಧಾರ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸಿ.

ಇದನ್ನು ಓದಿ: 20 ವರ್ಷ ಉಚಿತ ಸೌರ ವಿದ್ಯುತ್ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ

ಈ ವಿಷಯದ ಬಗ್ಗೆ ಸಲಹೆಗಳು.

• ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಅಥವಾ ಇಲ್ಲವಾ ಎಂದು ಖಾತರಿ ಮಾಡಿಕೊಳ್ಳಿ.

• ಯಾವುದೇ ಸಮಸ್ಯೆ ಇದ್ದರೆ ಗೃಹಲಕ್ಷ್ಮಿ ಸಹಾಯವಾಣಿಯನ್ನು ಸಂಪರ್ಕಿಸಿ ಅಥವಾ https://sevasindhu.Karnataka.gov.in/ ಗೆ ಭೇಟಿ ಕೊಡಿ.

• ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಸಹಾಯ ಪಡೆಯಿರಿ.

ಈ ಯೋಜನೆಯಿಂದ ಆಗುವ ಪ್ರಯೋಜನಗಳೇನು?

ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಮಹಿಳೆಯರು ತಮ್ಮ ದೈನಂದಿನ ಖರ್ಚು ಮಕ್ಕಳ ಶಿಕ್ಷಣ ಅನೇಕ ಅಗತ್ಯಗಳಿಗೆ ಹಣವನ್ನು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವರು ಈ ಹಣದಿಂದ ಸ್ಕೂಟರ್ ಖರೀದಿ, ಬೋರ್ವೆಲ್ ಕೊರಸುವಿಕೆಗಳಂತಹ ಕೆಲಸಗಳಿಗೆ ಉಪಯೋಗ ಮಾಡಿಕೊಳ್ಳುತ್ತಾರೆ; ಮಕ್ಕಳ ಶಿಕ್ಷಣಕ್ಕೆ ಇದು ಉಪಯೋಗವಾಗುತ್ತಿದೆ.

ಇದರ ಮುಂದಿನ ಹೆಜ್ಜೆ.

ಏಪ್ರಿಲ್ ಮತ್ತು ಮೇ 2025ರ ಕಂತುಗಳ ಬಿಡುಗಡೆಗೆ ಸರ್ಕಾರ ಆದಷ್ಟು ಬೇಗ ದಿನಾಂಕ ಘೋಷಣೆ ಮಾಡಲಿದೆ. ಫಲಾನುಭವಿಗಳು ತಾವು ತಾಳ್ಮೆಯಿಂದ ತಮ್ಮ ಖಾತೆಯನ್ನು ಪರಿಶೀಲಿಸಿ ಯಾವುದೇ ತೊಂದರೆ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಸಹಾಯ ಕೇಂದ್ರಗಳನ್ನು ಸಂಪರ್ಕಿಸಬಹುದು. ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಜೊತೆಗೆ ಆತ್ಮ ವಿಶ್ವಾಸವನ್ನು ನೀಡಿದೆ. ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಲು ಫಲಾನುಭವಿಗಳು ತಮ್ಮ ದಾಖಲೆಗಳನ್ನು ನವಿಕರಿಸಿಕೊಳ್ಳಿರಿ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment