Lakhs of rupees of financial assistance to farmers for drilling borewells under Ganga Kalyan Yojana,
ಗಂಗ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರಿಸಲು ರೈತರಿಗೆ ಲಕ್ಷಾಂತರ ರೂಪಾಯಿ ಧನ ಸಹಾಯ,
ಈ ಯೋಜನೆಯನ್ನು ಪಡೆಯಲು ಈಗಲೇ ಅರ್ಜಿ ಸಲ್ಲಿಸಿ.
ಗಂಗಾ ಕಲ್ಯಾಣ ಯೋಜನೆ 2025: ಪಂಪ್ ಸೆಟ್ ಬೋರ್ವೆಲ್ ಸಬ್ಸಿಡಿ ವಿವರಗಳು ಇಲ್ಲಿವೆ.
ಕರ್ನಾಟಕದ ಸರ್ಕಾರವು ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಗಂಗಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ವೆಲ್ ಕೊರೆಸಲು ಮತ್ತು ಪಂಪ್ಸೆಟ್ ಗಳನ್ನು ಉಪಯೋಗಿಸಲು ಸರ್ಕಾರವು ಹಣದ ಸಹಾಯವನ್ನು ಮಾಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು 1.5 ಲಕ್ಷ ರೂಪಾಯಿ ಇಂದ 3.5 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ತೆಗೆದುಕೊಳ್ಳಬಹುದು.
ಈ ಯೋಜನೆಯ ಪ್ರಮುಖ ಅಂಶಗಳು.
1. ಜಮೀನಿನ ಮಾಲೀಕತ್ವ ದಾಖಲೆಗಳು ಇರುವವರು ಈ ಯೋಜನೆಯನ್ನು ಪಡೆಯಬಹುದು.
2. ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯನ್ನು ಪಡೆಯಬಹುದು.
3. ಎಸ್ ಸಿ, ಎಸ್ ಟಿ, ಹಾಗೂ ಓ ಬಿ ಸಿ ಸಾಮಾನ್ಯ ವರ್ಗದ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.
• ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಬೇಕು.
• ಗ್ರಾಮ ಪಂಚಾಯತ್ ಅಥವಾ ತಾಲೂಕು ಕಚೇರಿಯಲ್ಲಿ ಮಾಹಿತಿ ತಿಳಿಯಬೇಕು.
• ಅಫೀಸಿಎಲ್ ಅಧಿಕೃತ ವೆಬ್ಸೈಟ್ನಲ್ಲಿ ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಸಬಹುದು ವೆಬ್ಸೈಟ್ ಲಿಂಕ್ https://ssk.kar.nic.in ಇಲ್ಲಿದೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು.
1. ಜಮೀನಿನ ದಾಖಲೆ ಅಂದರೆ ಪಹಣಿ.
2. ನಿಮ್ಮ ಬ್ಯಾಂಕ್ ಖಾತೆಯ ವಿವರ. (Bank pos book)
3. ಪಾಸ್ಪೋರ್ಟ್ ಸೈಜ್ ಫೋಟೋ.
4. ರೈತರ ಪರಿಚಯದ ಪತ್ರ.
5. ಆಧಾರ್ ಕಾರ್ಡ್ ಜೆರಾಕ್ಸ್.
ಸಹಾಯಕ್ಕಾಗಿ ಸಂಪರ್ಕಿಸುವುದು ಹೇಗೆ?
• ಕಲ್ಯಾಣ ಮಿತ್ರ ಹೆಲ್ಪ್ಲೈನ್: 9482300400 ಇದು 24*7 ಸಹಾಯವಾಣಿಯಾಗಿದೆ.
• Twitter ನಲ್ಲಿ ಕೂಡ ಸಹಾಯವನ್ನು ಪಡೆದುಕೊಳ್ಳಬಹುದು (@SWDGOK)
• ಸಹಾಯ ಪಡೆಯಲು ಅಧಿಕೃತ ವೆಬ್ಸೈಟ್ ಇದಾಗಿದೆ. (https://ssk.kar.nic.in)
ಗಂಗಾ ಕಲ್ಯಾಣ ಈ ಯೋಜನೆಯ ಪ್ರಯೋಜನಗಳು ಏನು?
• ಬೆಳೆ ಇಳುವರಿ ಹೆಚ್ಚಳ.
• ರೈತರ ಆರ್ಥಿಕ ಸ್ವಾವಲಂಬನೆ.
• ಸರ್ಕಾರದಿಂದ ಪೂರ್ಣ ಆರ್ಥಿಕ ಬೆಂಬಲ.
• ನೀರಾವರಿ ಸೌಲಭ್ಯದಲ್ಲಿ ಸುಧಾರಣೆ ಮಾಡುವುದು.
ಪ್ರಮುಖ ಸೂಚನೆಗಳು.
• ರೈತರ ಗಮನಕ್ಕೆ: ದಯವಿಟ್ಟು ನಕಲಿ ಸೈಟುಗಳಿಂದ ದೂರವಿರಿ, ಅಧಿಕೃತ ವೆಬ್ಸೈಟ್ ಲಿಂಕನ್ನು ಮಾತ್ರ ಬಳಸಿ.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಪರಿಶೀಲಿಸಿ.
• ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿಯನ್ನು ಸಂಪರ್ಕಿಸಿ.
ಪ್ರತಿನಿತ್ಯ ಇದೇ ತರಹದ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಇಲ್ಲಿ ಕ್ಲಿಕ್ ಮಾಡಿ.