ರೈತರಿಗೆ ಗುಡ್ ನ್ಯೂಸ್: ಭೂ ಸುರಕ್ಷಾ ಯೋಜನೆ ಇಂದಿನಿಂದ ಜಾರಿಗೆ ಇಲ್ಲಿದೆ ಸಂಪೂರ್ಣ ವಿವರ.
ಭೂ ಸುರಕ್ಷಾ ಯೋಜನೆ ಅಂದರೆ ಏನು ಮತ್ತು ಇದರ ಪರಿಚಯ ಹಾಗೂ ಹಿನ್ನೆಲೆ.
ಕರ್ನಾಟಕದ ಸರ್ಕಾರವು ರೈತರು ಹಾಗೂ ಜಮೀನು ಮಾಲೀಕರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ರಕ್ಷಿಸಲು ಭೂ ಸುರಕ್ಷಾ ಯೋಜನೆಯನ್ನು ಇಂದು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಸ್ವತಂತ್ರ ಪೂರ್ವ ಹಾಗೂ ನಂತರದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಫಾರ್ಮೆಟ್ ನಲ್ಲಿ ಶಾಶ್ವತವಾಗಿ ಸಂಪೂರ್ಣವಾಗಿ ಸಂರಕ್ಷಿಸಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ. ಇದರಿಂದ ದಾಖಲೆಗಳು ನಾಶ ನಾಶವಾಗುವದನ್ನು ತಡೆಯಬಹುದು ಮತ್ತು ಕಳೆದು ಹೋಗುವುದನ್ನು ತಡೆಯಬಹುದು ಹಾಗೂ ಬದಲಾಯಿಸಲ್ಪಡುವುದನ್ನು ತಡೆಯಬಹುದು.
ಈ ಯೋಜನೆಯ ಮುಖ್ಯ ಉದ್ದೇಶಗಳೇನು?
• ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಇಡಬಹುದು.
• ರೈತರು ಮತ್ತು ಸಾಮಾನ್ಯ ನಾಗರಿಕರು ಸುಲಭವಾಗಿ ದಾಖಲೆಗಳನ್ನು ಪಡೆಯಲು ಅನುಕೂಲವಾಗುತ್ತಾರೆ.
• ನಕಲಿ ದಾಖಲೆಗಳು ಹಾಗೂ ಜಮೀನು ವಂಚನೆಗಳನ್ನು ತಡೆಯಬಹುದು.
• ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಹೆಚ್ಚಿಸುತ್ತದೆ.
ಈ ಯೋಜನೆಯ ವಿವರಗಳು.
1. ಯಾವ ಯಾವ ದಾಖಲೆಗಳನ್ನು ಡಿಜಿಟಲ್ ಮಾಡಲಾಗುತ್ತದೆ?
• ತಹಸಿಲ್ದಾರ್ ಕಚೇರಿ ಸರ್ವೆ ಮತ್ತು ನೋಂದಣಿ ಇಲಾಖೆಯ ದಾಖಲೆಗಳನ್ನು ಡಿಜಿಟಲ್ ಮಾಡಲಾಗುತ್ತದೆ.
• ಏಕತೆ ಅಂದರೆ ಶಾಶ್ವತ ದಾಖಲೆಗಳು ಮತ್ತು ಬಿ ಖಾತೆ 30 ವರ್ಷಗಳ ದಾಖಲೆಗಳು. ಇವುಗಳನ್ನು ಡಿಜಿಟಲ್ ಮಾಡಲಾಗುತ್ತದೆ.
• ಸ್ವಾತಂತ್ರ್ಯಕ್ಕಿಂತ ಮುಂಚೆ ಮತ್ತು ಸ್ವಾತಂತ್ರ್ಯದ ನಂತರದ ಎಲ್ಲಾ ಭೂ ದಾಖಲೆಗಳನ್ನು ಡಿಜಿಟಲ್ ಮಾಡಲಾಗುತ್ತದೆ.
ದಾಖಲೆಗಳನ್ನು ಹೇಗೆ ಪರಿಶೀಲಿಸಲಾಗುವುದು?
• ತಹಸಿಲ್ದಾರರು 5% ದಾಖಲೆಗಳನ್ನು ಯಾದೃಚ್ಛಿಕವಾಗಿ ಪರಿಶೀಲಿಸುತ್ತಾರೆ.
• ತಾಲೂಕು ಕಚೇರಿ ಯಲ್ಲಿ ಶಿರಸ್ತೆದಾರರು 100% ದಾಖಲೆಗಳನ್ನು ಪರಿಶೀಲಿಸುತ್ತಾರೆ.
• ತದನಂತರ ದಾಖಲೆಗಳನ್ನು ಆನ್ಲೈನಿಗೆ ಅಪ್ಲೋಡ್ ಮಾಡಲಾಗುತ್ತದೆ.
ಯೋಜನೆಯ ಪ್ರಗತಿ
• ಮೊದಲ ಹಂತದಲ್ಲಿ 7.95 ಕೋಟಿ ಪುಟಗಳು, ಅಂದರೆ 14.87 ಲಕ್ಷ ಫೈಲ್ಗಳು, ಆಲ್ರೆಡಿ ಆಗಿವೆ.
• ಇಲ್ಲಿವರೆಗೆ 15.5 ಆಗಿವೆ. ಪುಟಗಳು ಸ್ಕ್ಯಾನ್ ಆಗಿವೆ.
• 2025ರ ಗುರಿ 90 ಕೋಟಿ ಪುಟಗಳನ್ನು ಡಿಜಿಟಲ್ ಮಾಡುವ ಗುರಿಯನ್ನು ಇಟ್ಟುಕೊಂಡಿದೆ.
ಇದರಿಂದ ರೈತರಿಗೆ ಆಗುವ ಪ್ರಯೋಜನಗಳೇನು?
1. ಎಸ್ಎಂಎಸ್ ಮೂಲಕ ದಾಖಲೆಗಳನ್ನು ಬದಲಾವಣೆ ಸೂಚನೆ.
• ರೈತರ ಆಧಾರ್ ಕಾರ್ಡ್ ಮತ್ತು ಜಮೀನು ದಾಖಲೆಗಳು ಲಿಂಕ್ ಮಾಡಲಾಗಿದೆ.
• ಯಾವುದೇ ಬದಲಾವಣೆ ಆದರೆ ರೈತರಿಗೆ ಎಸ್ಎಂಎಸ್ ಅಲರ್ಟ್ ಬರುತ್ತದೆ.
• ನಕಲಿ ಪೊಳ್ಳು ಮಾಲೀಕತ್ವ ಬದಲಾವಣೆಯನ್ನು ತಡೆಗಟ್ಟುತ್ತದೆ.
ಬೆಳೆ ಹಾನಿ ಪರಿಹಾರಕ್ಕೆ ರೈತರಿಗೆ ಸಹಾಯವಾಗುತ್ತದೆ.
• ಡಿಜಿಟಲ್ ದಾಖಲೆಗಳಿಂದ ರೈತರಿಗೆ ಬೆಳೆ ಹಾನಿ ಪರಿಹಾರ ಪಡೆಯಲು ತುಂಬಾ ಸುಲಭದಾಯಕವಾಗುತ್ತದೆ.
• ಡಿವಿಟಿ ಅಂದರೆ ನೇರ ಹಣ ವರ್ಗಾವಣೆ, ಇದರಿಂದ ಪರಿಹಾರ ಬರುತ್ತದೆ.
ದಾಖಲೆಗಳು ಶಾಶ್ವತವಾಗಿ ಸುರಕ್ಷಿತವಾಗಿರುತ್ತವೆ.
• ಜಮೀನು ದಾಖಲೆಗಳು ನಾಶ ನಾಶವಾಗುವುದಿಲ್ಲ.
• ಕಚೇರಿಗೆ ಹೋಗದೆ ಮೊಬೈಲ್ ಅಥವಾ ಕಂಪ್ಯೂಟರ್ಗಳಲ್ಲಿ ದಾಖಲೆಗಳನ್ನು ಪಡೆಯಬಹುದು ಮತ್ತು ಪರಿಶೀಲಿಸಬಹುದು.
• ಆನ್ಲೈನ್ನಲ್ಲಿ ನಲ್ಲಿ ಯಾವುದೇ ಸಮಯದಲ್ಲಾದರೂ ಭೂ ದಾಖಲೆ ಪಡೆಯಬಹುದು.
ಭೂ ಸುರಕ್ಷಾ ಸಾಫ್ಟ್ವೇರ್ಗಳು ಗಳು ಹೇಗೆ ಕೆಲಸ ಮಾಡುತ್ತವೆ?
• ABHILEKHALAYA ವ್ಯವಸ್ಥೆಯೊಂದಿಗೆ ಸಂಯೋಜನೆ.
• 5MB ವರೆಗೆ ಫೈಲ್ಗಳನ್ನು ಸಪೋರ್ಟ್ ಮಾಡಲಾಗುತ್ತದೆ. ಪಿಡಿಎಫ್ ಫಾರ್ಮೆಟ್ ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲಾಗುತ್ತದೆ.
• ವೆಬ್ ಮತ್ತು ವಿಂಡೋಸ್ ಆವೃತ್ತಿ ಲಭ್ಯ.
ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ.
ಭೂ ಸುರಕ್ಷಾ ಯೋಜನೆ ಅಂದರೆ ಏನು?
ಉತ್ತರ: ಕರ್ನಾಟಕ ಸರ್ಕಾರದ ಡಿಜಿಟಲ್ ಯೋಜನೆ ಜಮೀನು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನಿನಲ್ಲಿ ಅಪ್ಲೋಡ್ ಮಾಡಿ ಸುರಕ್ಷಿತವಾಗಿ ಇಡುವುದೇ ಭೂ ಸುರಕ್ಷಾ ಯೋಜನೆ.
ದಾಖಲೆಗಳನ್ನು ಹೇಗೆ ಪಡೆಯುವುದು?
ಉತ್ತರ: ಯೋಜನೆ ಪೂರ್ಣಗೊಂಡ ನಂತರ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು.
ಎಲ್ಲಾ ತಾಲೂಕುಗಳಲ್ಲಿ ಈ ಯೋಜನೆ ಇದೆ?
ಹೌದು, ಕ್ರಮೇಣ ಎಲ್ಲಾ ತಾಲೂಕುಗಳಲ್ಲಿ ಡಿಜಿಟ್ಟಲಿ ಕರಣ ಕಾರ್ಯ ಪ್ರಾರಂಭವಾಗಲಿದೆ, ಭೂ ಸುರಕ್ಷಾ ಯೋಜನೆ ರೈತರು ಮತ್ತು ಜಮೀನು ಮಾಲೀಕರಿಗೆ ದೊಡ್ಡ ರಕ್ಷಣೆ ನೀಡುತ್ತದೆ. ದಾಖಲೆಗಳು ಡಿಜಿಟಲ್ ಆಗಿರುವುದರಿಂದ, ದಾಖಲೆ ವಂಚನೆ, ದಾಖಲೆ ನಷ್ಟ ಮತ್ತು ಕಚೇರಿಯ ಭ್ರಷ್ಟಾಚಾರಗಳನ್ನು ತಡೆಯಬಹುದು. 2026ರ ಹೊತ್ತಿಗೆ ಈ ಎಲ್ಲಾ ದಾಖಲೆಗಳು ಆನ್ಲೈನಿನಲ್ಲಿ ದೊರೆಯುತ್ತವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.