ಕೇಂದ್ರ ಸರ್ಕಾರದಿಂದ ಇಂತಹ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿ ಸ್ಟಡಿ ಲೋನ್, ಅಪ್ಲೈ ಮಾಡಿ.
ಭಾರತದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಸಾಧನೆಗೆ ಹಣಕಾಸಿನ ಅಡಚನೆಗಳು ತಡೆಯಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಎನ್ನುವ ಯೋಜನೆಯನ್ನು ಪ್ರಾರಂಭ ಮಾಡಿದೆ. ಈ ಯೋಜನೆಯ ಪ್ರಮುಖ ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ 3% ಬಡ್ಡಿ ದರದಲ್ಲಿ 10 ಲಕ್ಷದ ವರೆಗಿನ ಶಿಕ್ಷಣ ಸಾಲವನ್ನು ಪಡೆದುಕೊಳ್ಳಬಹುದು. ಇದರ ಮುಖ್ಯ ಉದ್ದೇಶವೇನೆಂದರೆ ಆರ್ಥಿಕವಾಗಿ ದುರ್ಬಲವಾದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಯಾವುದೇ ತೊಂದರೆಗಳನ್ನು ಎದುರಿಸಬಾರದು ಎಂಬುದು.
ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಈ ಯೋಜನೆಯ ಪ್ರಮುಖ ಅಂಶಗಳೇನು?
ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ.
• ಸಾಲದ ಮಿತಿ 10 ಲಕ್ಷ ರೂಪಾಯಿ ಇರುತ್ತದೆ.
• ಈ ಯೋಜನೆಯ ಬಡ್ಡಿದರ ಕೇವಲ 3% ಇರುತ್ತದೆ.
• ಪೂರ್ಣ ಬಡ್ಡಿ ಮಾಪಿ ಕೂಡ ಇದೆ. ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಬಡ್ಡಿಮಾಪಿ ಅನ್ವಯಿಸುತ್ತದೆ.
• ಈ ಯೋಜನೆಗೆ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು. ಇಂಥವರು ಈ ಯೋಜನೆಗೆ ಅರ್ಹತೆ ಹೊಂದಿದ್ದಾರೆ.
• ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತರು ಈ ಯೋಜನೆಯ ಲಾಭ ಪಡೆಯಬಹುದು.
• ಈ ಯೋಜನೆಯ ಗುರಿಯೆಂದರೆ ಉನ್ನತ ಶಿಕ್ಷಣಕ್ಕೆ ಸಮಾನ ಅವಕಾಶ ನೀಡುವುದು ಹಾಗೂ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಇದನ್ನು ಓದಿ: ಎಸ್ಬಿಐ ಬಿ ಐ ಬ್ಯಾಂಕ್ ಅಕೌಂಟ್ ಹೊಂದಿದವರಿಗೆ ಜೂನ್ 15, 2025 ರಂದು ಹೊಸ ನಿಯಮ ಜಾರಿ
ಸಾಲ ಪಡೆಯುವ ವಿಧಾನವೇನು?
• ಅಧಿಕೃತ ವೆಬ್ಸೈಟ್ www.vidyalakshmi.com.in ಗೆ ಭೇಟಿ ಕೊಡಿ.
• ಆನ್ಲೈನ್ ಅರ್ಜಿ ಫಾರಂ ನೀಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಹಲವಾರು ಬ್ಯಾಂಕುಗಳಿಗೆ ಒಂದೇ ಅರ್ಜಿಯ ಮೂಲಕ ಅರ್ಜಿ ಸಲ್ಲಿಸಬಹುದು.
• ಪಾರದರ್ಶಕ ಹಾಗೂ ಸುರಕ್ಷಿತ ವ್ಯವಸ್ಥೆಯಲ್ಲಿ ಸಾಲದ ಅನುದಾನ ಇರುತ್ತದೆ, ಯಾಕೆಂದರೆ ಇದು ಡಿಜಿಟಲ್ ಪ್ರಕ್ರಿಯೆಯಾಗಿದೆ.
ಈ ಯೋಜನೆಗೆ ಬೇಕಾಗುವ ಅಗತ್ಯ ದಾಖಲೆಗಳು ಯಾವುವು?
• ಆಧಾರ್ ಕಾರ್ಡ್
• ಪ್ಯಾನ್ ಕಾರ್ಡ್
• ವಿಳಾಸದ ಪುರಾವೆ
• ಪ್ರವೇಶ ಪರೀಕ್ಷೆ ಫಲಿತಾಂಶಗಳು
• ಶೈಕ್ಷಣಿಕ ಪ್ರಮಾಣ ಪತ್ರಗಳು ಅಂದರೆ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ
• ಕುಟುಂಬದ ಆದಾಯ ಪ್ರಮಾಣ ಪತ್ರ
ಈ ಯೋಜನೆಯಲ್ಲಿ ಸೇರಿದ ಶಿಕ್ಷಣ ಸಂಸ್ಥೆಗಳಾವವು?
ಈ ಯೋಜನೆಯ ಅಡಿಯಲ್ಲಿ ಸೇರಿದ ದೇಶದ 860 ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳು ಈ ಯೋಜನೆಯಲ್ಲಿ ಸೇರುವವೆ. ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಮಾತ್ರ ಈ ಸಾಲವನ್ನು ಪಡೆದುಕೊಳ್ಳಬೇಕಾಗುತ್ತದೆ.
ಇದನ್ನು ಓದಿ: ಬ್ಯಾಂಕ್ ಲೋನ್ ಕ್ಲೋಸ್ ಮಾಡುವುದು ಹೇಗೆ ಎಂಬುದು 90% ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ.
ಯೋಜನೆಯಿಂದ ಆಗುವ ಪ್ರಯೋಜನಗಳೇನು?
• ಶಿಕ್ಷಣದಲ್ಲಿ ಸಮಾನ ಅವಕಾಶವನ್ನು ಖಚಿತಪಡಿಸುತ್ತದೆ.
• ಈ ಯೋಜನೆಯಿಂದ ಪ್ರತಿ ವರ್ಷ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯಿಂದ ಲಾಭ ಪಡೆಯಲಿದ್ದಾರೆ.
• ಬಡತನ ಹಾಗೂ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಇದು ಸಹಾಯವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: ಟೋಲ್ ಫ್ರೀ ನಂಬರ್-1800-1031
ಸಹಾಯವಾಣಿ: 080-22533876
ಈ ಯೋಜನೆಯಿಂದ ದೇಶದ ಯುವಕರ ಶಿಕ್ಷಣ ಹಾಗೂ ಭವಿಷ್ಯವನ್ನು ಹೆಚ್ಚು ಪ್ರಕಾಶಮಾನವಾಗಿರಿಸಲು ಉಪಯುಕ್ತವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.