Bhagyalaxmi-Sukanya samrudi:
ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆ:
ಹೆಣ್ಣುಮಕ್ಕಳ ಭವಿಷ್ಯದ ಭದ್ರತೆಗೆ ಸರ್ಕಾರದ ಮಹತ್ವದ ಹೆಜ್ಜೆ.
ಭಾರತದ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗೆ ಹಲವು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ನಾನಾ ಯೋಜನೆಗಳನ್ನು ಹಮ್ಮಿಕೊಂಡಿದೆ. ಕರ್ನಾಟಕ ಸರ್ಕಾರ 2006ರಲ್ಲಿ ಘೋಷಿಸಿದ ಯೋಜನೆ ಅಡಿಯಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಕೂಡ ಅದರಲ್ಲಿ ಒಂದು. ಈ ಯೋಜನೆಯ ಉದ್ದೇಶ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು ಮತ್ತು ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ, ಹಾಗೂ ಆರ್ಥಿಕ ಸಹಾಯವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
2020-21ರಿಂದ, ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆಯಲ್ಲಿ ಸುಕನ್ಯಾ ಸಮೃದ್ಧಿ ಎಂದು ಈ ಯೋಜನೆಯನ್ನು ಜೋಡಿಸಲಾಯಿತು, ಈ ಯೋಜನೆಯು ಹೆಣ್ಣು ಮಗುವಿನ ಭವಿಷ್ಯಕ್ಕೆ ಒಳ್ಳೆಯ ಆದಾಯ ಮತ್ತು ಭದ್ರತೆಯನ್ನು ತಂದುಕೊಡುತ್ತದೆ. ಈ ಜೋಡಣೆಯ ಪರಿಣಾಮವಾಗಿ, ಹೆಣ್ಣುಮಕ್ಕಳಿಗೆ ಈಗ 1 ಲಕ್ಷ ರೂ.ಗಳ ಮೆಚ್ಯೂರಿಟಿ ಮೊತ್ತ ಸಿಗಲಿದೆ.
ಸುಕನ್ಯಾ ಸಮೃದ್ಧಿ- ಭಾಗ್ಯಲಕ್ಷ್ಮಿ ಯೋಜನೆಯ ಪ್ರಮುಖ ಉದ್ದೇಶಗಳು ಹೀಗಿವೆ:
1.ಬಡ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸುವುದು – ಹೆಣ್ಣುಮಕ್ಕಳನ್ನು ಆರ್ಥಿಕ ಒತ್ತಡದಿಂದ ರಕ್ಷಿಸಲು ಮತ್ತು ಅವರಿಗೆ ಸಮಾನ ಅವಕಾಶಗಳನ್ನು ನೀಡಲು ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ.
2. ಶಿಕ್ಷಣ ಮತ್ತು ಭವಿಷ್ಯದ ಭದ್ರತೆಯನ್ನು ಒದಗಿಸುವುದು – ಯೋಜನೆಯಡಿ ವಿದ್ಯಾರ್ಥಿವೇತನಗಳು, ಆರ್ಥಿಕ ನೆರವು, ಮತ್ತು ಉನ್ನತ ಶಿಕ್ಷಣಕ್ಕೆ ಸಹಾಯ ಲಭ್ಯವಿದೆ.
3. ಸಮಾಜದಲ್ಲಿ ಲಿಂಗ ಸಮತೋಲನವನ್ನು ಸುಧಾರಿಸುವುದು – ಹೆಣ್ಣುಮಕ್ಕಳನ್ನು ಒಬ್ಬ ಜವಾಬ್ದಾರಿಯೆಂದು ಪರಿಗಣಿಸುವ ಮನೋಭಾವವನ್ನು ಕಡಿಮೆ ಮಾಡಲು ಈ ಯೋಜನೆಯು ಪ್ರೇರಕವಾಗಿದೆ.
4. ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕತೆಯನ್ನು ತಡೆಯುವುದು – 18ನೇ ವರ್ಷ ಪೂರ್ಣಗೊಳ್ಳುವವರೆಗೆ ಅವಿವಾಹಿತವಾಗಿರಬೇಕು ಎಂಬ ನಿಯಮ ಹೆಣ್ಣುಮಕ್ಕಳ ವಿವಾಹವನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ.
5. ಆರೋಗ್ಯ ಮತ್ತು ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುವುದು –ಈ ಯೋಜನೆಯಡಿ ಆರೋಗ್ಯ ವಿಮೆ ಮತ್ತು ಆರ್ಥಿಕ ನೆರವಿನ ಲಭ್ಯವಿರುವುದರಿಂದ ಕುಟುಂಬದ ಒತ್ತಡ ಕಡಿಮೆಯಾಗುತ್ತದೆ.
ಭಾಗ್ಯಲಕ್ಷ್ಮಿ ಯೋಜನೆಯ ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆ
ಅರ್ಹತಾ ಮಾನದಂಡಗಳು:
ಈ ಯೋಜನೆಗೆ ಅರ್ಜಿ ಸಲ್ಲಿಸಲು ತಿಳಿಯಬೇಕಾದ ನಿಯಮಗಳು.
1. ಮಾರ್ಚ್ 31, 2006 ನಂತರ ಜನಿಸಿದ ಹೆಣ್ಣುಮಕ್ಕಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.
2. BPL ಕಾರ್ಡ್ ಹೊಂದಿರುವ ಕುಟುಂಬಗಳ ಹೆಣ್ಣುಮಕ್ಕಳಿಗೆ ಮಾತ್ರ ಲಭ್ಯ.
3. ಹೆಣ್ಣುಮಗು ಹುಟ್ಟಿದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.
4. ಒಂದು ಕುಟುಂಬದಲ್ಲಿ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯ.
5. ಮಗು ಕನಿಷ್ಠ 8ನೇ ತರಗತಿವರೆಗೆ ಶಿಕ್ಷಣ ಪಡೆದಿರಬೇಕು
6. 18ನೇ ವರ್ಷ ಪೂರ್ಣಗೊಳ್ಳುವವರೆಗೆ ಮದುವೆಯಾಗಬಾರದು.
7. ಬಾಲ ಕಾರ್ಮಿಕರಾಗಿ ಕೆಲಸ ಮಾಡಬಾರದು
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಬಹುದು:
1. ಅಧಿಕೃತ ವೆಬ್ಸೈಟ್ (http://blakshmi.kar.nic.in) ಮೂಲಕ ನೋಂದಣಿ
2. ಗ್ರಾಮ ಪಂಚಾಯತ್, ಅಂಗನವಾಡಿ ಕೇಂದ್ರ, ಪುರಸಭೆ, ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಬ್ಯಾಂಕ್ನಲ್ಲಿ ಅರ್ಜಿ ಪಡೆಯಬಹುದು.
3. ಅರ್ಜಿಯನ್ನು ಸರಿಯಾಗಿ ತುಂಬಿ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು
4. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಹೆಣ್ಣು ಮಗುವಿನ ಜನನ ಪ್ರಮಾಣಪತ್ರ
- BPL ಕಾರ್ಡ್
- ಪೋಷಕರ ವಿಳಾಸದ ಪುರಾವೆ
- ಬ್ಯಾಂಕ್ ಖಾತೆ ವಿವರಗಳು
- ರೋಗನಿರೋಧಕ ದಾಖಲೆ (Immunization record)
- ಮಗುವಿನ ಪೋಷಕರೊಂದಿಗೆ ತೆಗೆದಿರುವ ಛಾಯಾಚಿತ್ರ
—
ಭಾಗ್ಯಲಕ್ಷ್ಮಿ ಯೋಜನೆಯ ಹಣಕಾಸು ಮತ್ತು ಪ್ರಯೋಜನಗಳು
1. ಮೆಚ್ಯೂರಿಟಿ ಮೊತ್ತ
- ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆಯ ಜೋಡಣೆಯೊಂದಿಗೆ ಹೆಣ್ಣು ಮಗುವಿಗೆ 1 ಲಕ್ಷ ರೂ. ಮೆಚ್ಯೂರಿಟಿ ಮೊತ್ತ ಲಭ್ಯ.
- 21 ವರ್ಷ ತುಂಬಿದ ನಂತರ ಈ ಮೊತ್ತ ಸಂಪೂರ್ಣವಾಗಿ ಪಡೆಯಬಹುದು.
- 10ನೇ ತರಗತಿ ಪೂರ್ಣ ಮಾಡಿದ ನಂತರ ಉನ್ನತ ಶಿಕ್ಷಣಕ್ಕಾಗಿ 50% ಮೊತ್ತವನ್ನು ಹಿಂಪಡೆಯಬಹುದು.
2. ವಿದ್ಯಾರ್ಥಿವೇತನ
- 1 ರಿಂದ 3ನೇ ತರಗತಿ – ₹300 ಪ್ರತಿ ವರ್ಷ
- 4ನೇ ತರಗತಿ – ₹500
- 5ನೇ ತರಗತಿ – ₹600
- 6 ಮತ್ತು 7ನೇ ತರಗತಿ – ₹700
- 8ನೇ ತರಗತಿ – ₹800
- 9 ಮತ್ತು 10ನೇ ತರಗತಿ – ₹1,000
3. ಆರೋಗ್ಯ ವಿಮೆ
- ವರ್ಷಕ್ಕೆ ₹25,000 ವರೆಗೆ ವೈದ್ಯಕೀಯ ಸಹಾಯ ಲಭ್ಯ.
- ಪ್ರಾಸಕ್ತಿಯಲ್ಲಿರುವ ಆರೋಗ್ಯ ವಿಮಾ ಯೋಜನೆಗಳೊಂದಿಗೆ ಕುಟುಂಬಕ್ಕೆ ಹೆಚ್ಚಿನ ಭದ್ರತೆ.
4. ಆಕಸ್ಮಿಕ ಮತ್ತು ನೈಸರ್ಗಿಕ ಮರಣ ಪರಿಹಾರ
- ಮಗುವಿನ ಆಕಸ್ಮಿಕ ಮರಣ – ₹1 ಲಕ್ಷ
- ನೈಸರ್ಗಿಕ ಮರಣ – ₹42,500
- ಪೋಷಕರ ಮರಣದ ಸಂದರ್ಭದಲ್ಲಿ – ₹30,000
2024-25ರ ಪ್ರಮುಖ ಬದಲಾವಣೆಗಳು
1. ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ವಿಲೀನ
- 2020-21ರಿಂದ, LICನಲ್ಲಿ ಹೊಂದಿದ್ದ ಹಣವನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಗೆ ವರ್ಗಾಯಿಸಲಾಗಿದೆ.
- ಇದು ಯೋಜನೆಯ ಸುವ್ಯವಸ್ಥಿತ ನಿರ್ವಹಣೆಗೆ ಸಹಕಾರಿಯಾಗಿದ್ದು, ಹೂಡಿಕೆಗೆ ಹೆಚ್ಚು ಬಡ್ಡಿ ಲಭ್ಯವಿದೆ.
2. ಹೆಚ್ಚಿದ ಮೆಚ್ಯೂರಿಟಿ ಮೊತ್ತ
- ಹೆಣ್ಣುಮಕ್ಕಳಿಗಾಗಿ ಈಗ ₹1.27 ಲಕ್ಷ ಭದ್ರತಾ ಮೊತ್ತ ಲಭ್ಯ.
- 15 ವರ್ಷಗಳ ವಯಸ್ಸಿನವರೆಗೂ ವಾರ್ಷಿಕ ₹3,000 ಠೇವಣಿ ಇಡಲಾಗುತ್ತದೆ.
3. 2006-07ರಲ್ಲಿ ನೋಂದಾಯಿಸಿದ ಮಕ್ಕಳಿಗೆ ಮೆಚ್ಯೂರಿಟಿ ಹಣ ಬಿಡುಗಡೆ
- 2006-07ರಲ್ಲಿ ಯೋಜನೆಯಲ್ಲಿ ನೋಂದಾಯಿಸಿದ ಫಲಾನುಭವಿಗಳು ಈಗ 18 ವರ್ಷ ಪೂರೈಸಿದ್ದು, LIC ಮತ್ತು ಸರ್ಕಾರ ಈ ಮೊತ್ತವನ್ನು ಬಿಡುಗಡೆ ಮಾಡುತ್ತಿದೆ.
4. ಮೈಸೂರು ಜಿಲ್ಲೆಯಲ್ಲಿ ಯೋಜನೆ ವಿತರಣಾ ಬೆಳವಣಿಗೆ
- ಡಿಸೆಂಬರ್ 2024ರ ವೇಳೆಗೆ 12,000ಕ್ಕೂ ಹೆಚ್ಚು ಫಲಾನುಭವಿಗಳಿಗೆ ತಲಾ ₹32,351 ವಿತರಿಸಲಾಗಿದೆ.
- ಇದು ರಾಜ್ಯ ಮಟ್ಟದಲ್ಲಿ ಯಶಸ್ವಿ ಅನುಷ್ಠಾನದ ಪ್ರಮುಖ ಉದಾಹರಣೆ.
ನೀವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು,
- ಹೆಣ್ಣು ಮಗು ಜನಿಸಿದ ಒಂದು ವರ್ಷದೊಳಗೆ ನೋಂದಣಿ ಮಾಡಿಸಬೇಕು.
- ಆವಶ್ಯಕ ದಾಖಲೆಗಳನ್ನು ಸಲ್ಲಿಸಬೇಕು.
- 8ನೇ ತರಗತಿ ಪೂರ್ಣಗೊಳಿಸುವವರೆಗೆ ಶಿಕ್ಷಣ ಮುಂದುವರಿಸಬೇಕು.
- 18 ವರ್ಷ ತುಂಬುವವರೆಗೆ ಮದುವೆಯಾಗಬಾರದು.
ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆ ಕರ್ನಾಟಕದ ಹೆಣ್ಣುಮಕ್ಕಳಿಗೆ ಶ್ರೇಷ್ಟ ಭವಿಷ್ಯ ಕಟ್ಟುವ ಉದ್ದೇಶ ಹೊಂದಿದೆ. ಈ ಯೋಜನೆ ಬಗ್ಗೆ ಪರಿಚಿತರಿಗೆ ಸರ್ಕಾರ ತೆಗೆದುಕೊಂಡ ಮಹತ್ವದ ಬಗ್ಗೆ ತಿಳಿಸಿ. ಇದು ಲಿಂಗ ತಾರತಮ್ಯ ನಿವಾರಣೆ, ಮಹಿಳಾ ಶಕ್ತೀಕರಣ, ಶಿಕ್ಷಣ ಮತ್ತು ಆರ್ಥಿಕ ಸ್ವಾಯತ್ತತೆಗೆ ನೆರವಾಗುವ ಮಹತ್ತರ ಯೋಜನೆಯಾಗಿದೆ.
ನೀವು ಅಥವಾ ನಿಮ್ಮ ಪರಿಚಿಯದವರು ಅರ್ಹರಾಗಿದ್ದರೆ, ಇವಾಗಲೆ ಯೋಜನೆಯ ಲಾಭ ಪಡೆಯಲು ನೋಂದಣಿ ಮಾಡಿಸಿ!