Dr Rajkumar: Plans to build a grand museum of the ‘Annavra Kutumbhu’ in Singanallur, where Dr Rajkumar was born,
Dr Rajkumar: ಡಾ ರಾಜ್ಕುಮಾರ್ ರವರು ಜನಿಸಿದ ಸಿಂಗಾನಲ್ಲೂರಿನಲ್ಲಿ ʻಅಣ್ಣಾವ್ರ ಕುಟುಂಬʼದ ಭವ್ಯ ಮ್ಯೂಸಿಯಂ ನಿರ್ಮಾಣಕ್ಕೆ ಪ್ಲಾನ್,
Dr Rajkumar: ಡಾ ರಾಜ್ಕುಮಾರ್ ರವರು ಕರುನಾಡಿನ ಸಾಂಸ್ಕೃತಿಕ ರಾಯಭಾರಿ. ಕನ್ನಡದ ಜಲ, ನೆಲ, ಭಾಷೆ ವಿಚಾರಕ್ಕೆ ಸಿನಿಮಾಗಳ ಮೂಲಕ, ವೈಯಕ್ತಿಕ ನಿಲುವಿನಿಂದ ತಮ್ಮದೇ ಆದ ಅಪಾರ ಕೊಡುಗೆ ನೀಡಿದವರು. ಇವತ್ತಿಗೂ ಕರ್ನಾಟಕದಲ್ಲಿ ಅವರನ್ನು ದಿನ ನಿತ್ಯ ಪೂಜಿಸುವವರಿದ್ದಾರೆ. ಅಪ್ಪನ ಹಾದಿಯಲ್ಲಿ ಚಿಕ್ಕ ಮಗ ಕರ್ನಾಟಕ ರತ್ನ, ದಿವಂಗತ ಡಾ ಪುನೀತ್ ರಾಜ್ಕುಮಾರ್ ಅವರನ್ನೂ ನೆನಪಿಸಿಕೊಳ್ಳುತ್ತಾರೆ. ಇವಾಗ ಇದೇ ಕಲಾವಿದರ ಹುಟ್ಟೂರಿನಲ್ಲಿ ಭವ್ಯ ಮ್ಯೂಸಿಯಂ ಮಾಡಲು ಅಲ್ಲಿನ ಶಾಸಕರು, ಸ್ಥಳೀಯ ನಾಯಕರು ಮನಸ್ಸು ಮಾಡಿ, ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಸಿಂಗಾನಲ್ಲೂರು, ಇದು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹಳ್ಳಿ. ಈಗ ಇದೇ ಸಿಂಗಾನಲ್ಲೂರು ಗ್ರಾಮದಲ್ಲಿ ಡಾ ರಾಜ್ ಕುಮಾರ್ ಕುಟುಂಬಕ್ಕೆ ಸಂಬಂಧಿಸಿದಂತೆ ಮ್ಯೂಸಿಯಂ ನಿರ್ಮಾಣ ಮಾಡಿ, ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲು ಹನೂರು ಶಾಸಕ ಎಂ.ಆರ್. ಮಂಜುನಾಥ್ ನಿರ್ಧರ ಮಾಡಿದ್ದಾರೆ. ಈ ಮ್ಯೂಸಿಯಂ ನ ಕೆಲಸ ಸಾಕಾರಗೊಂಡರೆ ಪ್ರವಾಸೋದ್ಯಮವೂ ಅಭಿವೃದ್ಧಿ ಹೊಂದಲಿದೆ ಎಂಬುದು ಎಮ್ ಆರ್ ಮಂಜುನಾಥ ಅವರ ಅಭಿಪ್ರಾಯ. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುವದಾಗಿ ಹೇಳಿದ್ದಾರೆ.
ಸಿಂಗನಲ್ಲೂರು ಗ್ರಾಮದಲ್ಲಿ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರ ಪುತ್ರ ಡಾ. ರಾಜ್ಕುಮಾರ್ ಹಾಗೂ ಮೊಮ್ಮಗ ಡಾ. ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಶಾಸಕ ಎಂ.ಆರ್. ಮಂಜುನಾಥ ಹೇಳಿದರು. ಹನೂರು ಪಟ್ಟಣದ ಗೌರ್ಮೆಂಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕ ಆಯೋಜಿಸಿದ್ದ ‘ಜಾನಪದ ಉತ್ಸವ’ ಮತ್ತು ‘ಜಾನಪದ ಸಿರಿ’ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ವಿಷಯವನ್ನು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ
“ಸಿಂಗಾನಲ್ಲೂರಿನಲ್ಲಿ ಮೂರು ತಲೆಮಾರುಗಳನ್ನು ಇರುವ ಡಾ. ರಾಜ್ಕುಮಾರ್ ಅವರ ಕುಟುಂಬದ ಸಾಧಕರಿಗೆ ಗೌರವಾರ್ಥವಾಗಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದರೆ, ಅದು ಸಾಂಸ್ಕೃತಿಕ ಮತ್ತು ಜನಪ್ರಿಯ ಪ್ರವಸಿ ತಾಣವಾಗುತ್ತದೆ. ಈಗಾಗಲೇ ಚಾಮರಾಜನಗರವು ಜಾನಪದ ಕಲಾ ಪ್ರಕಾರಗಳ ತೊಟ್ಟಿಲು. ಈ ನಿರ್ಮಿಸಲಾಗುವ ವಸ್ತುಸಂಗ್ರಹಾಲಯವು ಜಿಲ್ಲೆಯಗೆ ಕಿರ್ತಿ ಬಂದಂತೆ ಆಗುವದು” ಎಂದು ಹನೂರಿನ ರೈತ ಸಂಘದ ನಾಯಕ ಹಾಗೂ ಡಾ. ರಾಜ್ಕುಮಾರ್ ಅವರ ಅಭಿಮಾನಿ ಬಸವರಾಜು ಹೇಳಿದ್ದಾರೆ ಎಂದು ವರದಿ ಆಗಿದೆ.