Dr Rajkumar: The Kannadigas’s eye-catcher, Natasarvabhauma, said, “Don’t enter the film industry by mentioning Dr. Rajkumar’s name,
Dr Rajkumar: ಕನ್ನಡಿಗರ ಕಣ್ಮಣಿ ನಟಸಾರ್ವಭೌಮ “ಡಾ. ರಾಜ್ಕುಮಾರ್ ಅವರ ಹೆಸರು ಹೇಳಿಕೊಂಡು ಚಿತ್ರರಂಗಕ್ಕೆ ಬರಬೇಡಿ,
Dr Rajkumar: ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರ ಕುಟುಂಬದ ಬಗ್ಗೆ ಮತ್ತು ಸಿನಿಮಾ ರಂಗಕ್ಕೆ ಬರುತ್ತಿರುವವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ಕೋಪ ಮಾಡಿಕೊಂಡು ಹೊರ ಹಾಕಲು ಶುರು ಮಾಡಿಕೊಂಡಿದ್ದಾರೆ. ಡಾ.ರಾಜ್ಕುಮಾರ್ ಅವರ ಹೆಸರು ಹೇಳಿಕೊಂಡು ಚಲನಚಿತ್ರ ರಂಗಕ್ಕೆ ಬರಬೇಡಿ, ಅವರ ಹೆಸರನ್ನು ಹಾಳು ಮಾಡಬೇಡಿ ಅಂತ ಹೇಳಿ, ಕನ್ನಡಿಗರು ಹಾಗೂ ಸಿನಿಪ್ರಿಯರು ಹೇಳುತ್ತಿದ್ದಾರೆ. ಡಾ.ರಾಜ್ಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರ ಚೊಚ್ಚಲ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆಯೇ ದೊಡ್ಮನೆಯ ವಿರುದ್ಧ ಟ್ರೋಲ್ಗಳ ಸುರಿಮಳೆ ಶುರುವಾಗಿದೆ. ಅಲ್ಲದೇ ಇನ್ನೂ ಕೆಲವರು ಟ್ಯಾಲೆಂಟ್ ಮೇಲೆ ಸಿನಿಮಾರಂಗಕ್ಕೆ ಬರಬೇಕು ರಾಜ್ಕುಮಾರ್ ಅವರ ಹೆಸರು ಹೇಳಿಕೊಂಡು ಅಲ್ಲ ಅಂತಿದ್ದಾರೆ.
ಡಾ.ರಾಜ್ಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರ ಮೊದಲ ಸಿನಿಮಾ ನಿಂಬಿಯಾ ಬನಾದ ಮ್ಯಾಗ ಬಿಡುಗಡೆಯಾಗಿದ್ದೆ. ಈ ಸಿನಿಮಾದ ಬಗ್ಗೆ ಕಟುವಾಗಿ ವಿಮರ್ಶೆಗಳು ಕೇಳಿ ಬರುತ್ತಿವೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಜನರು ದೊಡ್ಮನೆಯ ಹೆಸರು ಹೇಳಿಕೊಂಡಷ್ಟೇ ಸಿನಿಮಾಗೆ ಬರುವವರ ಬಗ್ಗೆ ಮೌನ ಮುರಿದಿದ್ದಾರೆ. ಇನ್ನೂ ಕೆಲವರು ರಾಜಕುಮಾರ್ ಮೊಮ್ಮಗ ಎನ್ನುವ ಕಾರಣಕ್ಕೆ ಮಾತ್ರ ಅವಕಾಶ ಸಿಕ್ಕಿರಬಹುದಷ್ಟೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.
ಡಾ.ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದ ದೊಡ್ಡ ಆಸ್ತಿ. ಅವರು ಕನ್ನಡ ಸಿನಿಮಾರಂಗಕ್ಕೆ ಮತ್ತು ಕರುನಾಡಿಗೆ ಸಾಕಷ್ಟು ಕೊಡುಗೆಗಳನ್ನು ಕಾಣುತ್ತಾರೆ ಮತ್ತು ಇಂದಿಗೂ . ಇದೇ ಕಾರಣಕ್ಕೆ ಡಾ. ರಾಜ್ಕುಮಾರ್ ಅವರನ್ನು ಇಂದಿಗೂ ಕನ್ನಡಿಗರು ವಿಶೇಷವಾಗಿ ಕಾಣುತ್ತಾರೆ. ರಾಜ್ಕುಮಾರ್ ಅವರ ನಂತರ ಅವರ ಮಕ್ಕಳಾದ ದಿ. ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರು ಸಹ ತಮ್ಮ ಅಭಿನಯ ಹಾಗೂ ಅವರ ಕಲೆಯ ಪ್ರದರ್ಶನದಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಚಾಪನ್ನೆ ಸೃಷ್ಟಿ ಮಾಡಿದ್ದಾರೆ. ಆದರೆ, ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರಿಂದ ರಾಜ್ಕುಮಾರ್ ಅವರ ಪುತ್ರರಿಗೆ ಸಿಕ್ಕಷ್ಟು ಅಥವಾ ಉಳಿದ ನಟರಷ್ಟು ಬೆಂಬಲ ಅವರ ಮೊಮ್ಮಕ್ಕಳಿಗೆ ಸಿಗುತ್ತಿಲ್ಲ ಅಂತ ಹೇಳಲಾಗುತ್ತಿದೆ.
ಇದಕ್ಕೆ ಇನ್ನೊಂದು ಕಾರಣ ಡಾ. ಡಾ.ರಾಜ್ಕುಮಾರ್ ಅವರ ಮತ್ತು ದೊಡ್ಮನೆಯಿಂದ ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡಲು ಬರುತ್ತಿರುವವರು ನೇರವಾಗಿ ನಟನಾಗಿಯೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಅಂತ ಹೇಳಿ ಬರುತ್ತಿರುವುದು ಸಹ ಒಂದು ಅಂತ ಜನ ಹೇಳುತ್ತಿದ್ದಾರೆ. ಯಾರೋ ಒಬ್ಬರು ನಿರ್ಮಾಣ ಮಾಡುತ್ತಾರೆ ಎಂದು ಸಿನಿಮಾದಲ್ಲಿ ನೇರವಾಗಿ ನಾಯಕ ನಟರಾಗಿ ಅಭಿನಯಿಸುವುದು ತಪ್ಪು. ಸಿನಿಮಾರಂಗದಲ್ಲಿ ಬೇರೆ ಬೇರೆ ದಾರಿಗಳಿವೆ, ಆಯ್ಕೆಗಳಿವೆ. ಇಲ್ಲವೇ ಮುಖ್ಯಭೂಮಿಕೆಯಲ್ಲೇ ಕಾಣಿಸಿಕೊಳ್ಳಬೇಕು ಅಂತಾದರೆ, ಕನಿಷ್ಠ ಎರಡು ಮೂರು ಸಣ್ಣ ಪಾತ್ರಗಳನ್ನು ಮಾಡಿ ಸ್ವಲ್ಪ ನಟನೆ ರೂಢಿಯಾದ ಮೇಲೆ ಸಿನಿಮಾ ಮಾಡಬಹುದಿತ್ತು ಅಂತ ಸಿನಿಮಾ ನೋಡಿ ಬಂದವರು ಹೇಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಡಾ. ರಾಜ್ಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರ ರೂಪವನ್ನು ಕಮೆಂಟ್ ಮಾಡುತ್ತಿದ್ದಾರೆ. ಮೂಗು ಸರ್ಜರಿ ಮಾಡಿಸಿಕೊಳ್ಳಬಹುದಿತ್ತು ಅಂತ ಕೆಲವರು ಕಮೆಂಟ್ ಮಾಡಿದ್ದಾರೆ; ಈ ಮಾತಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ನಟನೆ ಅಥವಾ ಸಿನಿಮಾದ ಬಗ್ಗೆ ಮಾತನಾಡುವುದು ಸರಿ, ರೂಪದ ಬಗ್ಗೆ ಮಾತನಾಡುವುದು ತಪ್ಪು ಅಂತ ಹೇಳಿ ವಿರೋಧಿಸಿದ್ದಾರೆ.