ಬಸ್​ ನಿಲ್ಲಿಸಿ ನಮಾಜ್​ ಮಾಡಿದ್ದ ಚಾಲಕ ಅಮಾನತು,

 ಬಸ್​ ನಿಲ್ಲಿಸಿ ನಮಾಜ್​ ಮಾಡಿದ್ದ ಚಾಲಕ ಅಮಾನತು

ಚಾಲಕ ಬಸ್​ನಲ್ಲಿ ನಮಾಜ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಬೆನ್ನಲ್ಲೇ ಇಲಾಖೆಯಿಂದ ಚಾಲಕನು ಅಮಾನತುಗೊಂಡಿದ್ದಾರೆ.

ಹಾವೇರಿ: ಬಸ್​ನಲ್ಲಿ ನಮಾಜ್ ಮಾಡಿದ ಕಂಡಕ್ಟರ್ ಕಂ ಚಾಲಕ ಎ. ಆರ್. ಮುಲ್ಲಾ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ವಿಶಾಲಗಡದಿಂದ ಹಾನಗಲ್​ ಕ್ಕೆ ಬರುವಾಗ ಬಸ್ ನಿಲ್ಲಿಸಿ ಎ.ಆರ್. ಮುಲ್ಲಾ ನಮಾಜ್ ಮಾಡಿದ್ದರು. ನಮಾಜ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಚಾಲಕನ ಮೇಲೆ ತನಿಖೆಗೆ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸೂಚಿಸಿದ್ದರು.

ಸಾರಿಗೆ ಸಚಿವರ ಸೂಚನೆಯ ಮೇರೆಗೆ ಕೆಎಸ್ಆರ್ಟಿಸಿ ಅಧಿಕಾರಿಗಳು ತನಿಖೆ ನಡೆಸಿದ್ದರು; ತನಿಖೆಯ ಬಳಿಕ ಚಾಲಕ ಎ.ಆರ್. ಮುಲ್ಲಾ ಅವರನ್ನು ಅಮಾನತು ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.

WhatsApp Group Join Now
Telegram Group Join Now       
ಇದನ್ನು ಓದಿ: ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಹೆಣ್ಣು ಮಕ್ಕಳಿಗೆ ಸಿಹಿ ಸುದ್ದಿ. ಮೂರು ಕಂತಿನ ಹಣ ಒಟ್ಟಿಗೆ ಬಿಡುಗಡೆ

ಈ ವಿಷಯದ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್​ ಕುಮಾರ್ ರವರು, “ತನಿಖೆ ಕೈಗೊಂಡು ಕ್ರಮ ತೆಗೆದುಕೊಳ್ಳುವಂತೆ ಇಲಾಖೆಯ ಸಚಿವರ ಸೂಚನೆ ಬಂದಿತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಆ ಹಿನ್ನೆಲೆ ಎ.ಆರ್​. ಮುಲ್ಲಾ ರವರನ್ನು ಉದ್ಯೋಗದಿಂದ ಅಮಾನತು ಮಾಡಲಾಗಿದೆ” ಎಂದು ವಿಜಯಕುಮಾರ್ ತಿಳಿಸಿದರು.

ಎ. ಆರ್. ಮುಲ್ಲಾ ಅವರು ಹಲವು ವರ್ಷಗಳಿಂದ ಚಾಲಕ ಮತ್ತು ನಿರ್ವಾಹಕ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅಪಘಾತರಹಿತ ಚಾಲನೆಗೆ ಇಲಾಖೆಯಿಂದ ಚಿನ್ನದ ಪದಕ ಸಹ ಪಡೆದಿದ್ದಾರೆ ಎಂದು ಹೇಳಿದರು.

WhatsApp Group Join Now
Telegram Group Join Now       

ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.

Leave a Comment