Famous Actor Sad Life: Actor Savi Sidhu, ಹೊಟ್ಟೆಪಾಡಿಗಾಗಿ ವಾಚ್‌ಮ್ಯಾನ್ ಕೆಲಸ ಮಾಡುತ್ತಿರುವ ಪ್ರಖ್ಯಾತ ನಟ!

ನೇಮ್‌-ಫೇಮ್‌ ಎಷ್ಟಿದ್ದರೇನು ಗುರು? ಜೀವನಕ್ಕೆ ಹಣ ಮುಖ್ಯವಾಗಿ ಬೇಕೇಬೇಕು. ಹೊಟ್ಟೆಪಾಡಿಗಾಗಿ ವಾಚ್‌ಮ್ಯಾನ್ ಕೆಲಸ ಮಾಡುತ್ತಿರುವ ಪ್ರಖ್ಯಾತ ನಟ!

Famous Actor Sad Life: ಮುಂಬೈ ನಗರವನ್ನು ಕನಸಿನ ನಗರ ಎಂದು ಕರೆಯಲಾಗುತ್ತದೆ. ಅನೇಕ ಜನರು ಕನಸುಗಳನ್ನು ಹೊತ್ತು ತಮ್ಮ ಕನಸುಗಳನ್ನು ನನಸಾಗಿಸಲು (city) ಗೆ ಹೋಗುತ್ತಾರೆ. ವಿಶೇಷವಾಗಿ ಚಲನಚಿತ್ರೋದ್ಯಮದಲ್ಲಿ ಬೆಳೆಯಲು ಸಾವಿರಾರು ಜನರು ಹುಟ್ಟಿದ ಊರು ಬಿಟ್ಟು ಬರುತ್ತಾರೆ. ಕೆಲವರ ಕನಸುಗಳು ನನಸಾಗುತ್ತವೆ, ಆದರೆ ಇನ್ನು ಕೆಲವರು ಸದ್ದಿಲ್ಲದೆ ಹೋರಾಡುತ್ತಾರೆ.

Actor Savi Sidhu: ಜೀವನ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಮುಂಬೈ ಹೋಗಿ ಹೆಸರು ಮಾಡಿದ ಸಾಕಷ್ಟು ನಟ ನಟಿಯರನ್ನು ಇಂದು ನಾವು ಚಿತ್ರರಂಗದಲ್ಲಿ ನೋಡಬಹುದು. ಆದರೆ ಕಂಡ ಕನಸು ನನಸಾಗದೆ ಆರ್ಥಿಕ ದುಸ್ಥಿತಿಯಿಂದ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ಅದೆಷ್ಟೋ ನಟನರನ್ನು ನಾವು ನೋಡಬಹುದು. ಅಂತವರಲ್ಲಿ ಸಾಲಿನಲ್ಲಿ ಸವಿ ಸಿಧು ಕೂಡ ಒಬ್ಬರು.

ಸವಿ ಸಿಧು ರವರ ಹುಟ್ಟುರು ಊರು ಲಕ್ನೋ. ಅವರು ಅಲ್ಲೇ ಹುಟ್ಟಿ ಬೆಳೆದರು. ಮಾಡೆಲಿಂಗ್ ಅನ್ನು ಮುಂದುವರಿಸುವ ಆಸೆಯಿಂದ ಅವರು ಚಂಡೀಗಢಕ್ಕೆ ತೆರಳಿದರು. ಬಳಿಕ ತಮ್ಮ ಹುಟ್ಟೂರು ಲಕ್ನೋಗೆ ಮರಳಿ LLB ಓದಿದರು. ಓದುತ್ತಿರುವಾಗಲೇ ನಟನಾ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ರಂಗಭೂಮಿಗೆ ಸೇರಿದರು. ನಟನೆಯ ಮೇಲಿನ ಉತ್ಸಾಹದಿಂದ, ಅವರು ಕೊನೆಗೆ ಮುಂಬೈಗೆ ರೈಲು ಹತ್ತಿ ಹೊದರು.

ಸವಿ ಸಿಧು 1995 ರಲ್ಲಿ ‘ತಾಕತ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಖ್ಯಾತ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಸವಿ ಸಿಧು ರವರ ಅಭಿನಯಕ್ಕೆ ಬೆರಗಾಗಿ, ತಮ್ಮ ‘ಪಾಂಚ್’ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಿದರು. ದುರದೃಷ್ಟವಶಾತ್, ಆ ಚಿತ್ರ ಬಿಡುಗಡೆಯಾಗಲಿಲ್ಲ. ಆದರೆ, ಅನುರಾಗ್ ಕಶ್ಯಪ್ ಸವಿ ಸಿಧು ಅವರ ಪ್ರತಿಭೆಯನ್ನ ಎಷ್ಟಿದ್ದರೇನು ಆ ನಂತರ ಸವಿ ಸಿಧು’ (2007) ಬ್ಲ್ಯಾಕ್ ಫ್ರೈಡೇ’ ಚಿತ್ರದಲ್ಲಿ, ಕಮಿಷನರ್ ಎ.ಎಸ್. ಅವರು 2009 ರಲ್ಲಿ ‘ಗುಲಾಲ್’ ಚಿತ್ರದಲ್ಲಿ ಸಮ್ರಾ ಮತ್ತು ದಿಲೀಪ್ ಅವರ ಅಣ್ಣನ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರಗಳೆಲ್ಲವು ಬಹಳ ಮುಖ್ಯವಾದ ಪಾತ್ರಗಳು ಇವಾಗಿದ್ದವು.

WhatsApp Group Join Now
Telegram Group Join Now       

ಅನುರಾಗ್ ಕಶ್ಯಪ್ ಅವರ ಚಿತ್ರಗಳ ಜೊತೆಗೆ, ಸವಿ ಸಿಧು ಇನ್ನೂ ಮುಂತಾದ ಜನಪ್ರಿಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಕ್ಷಯ್ ಕುಮಾರ್, 2011 ರಲ್ಲಿ ಪಟಿಯಾಲ ಹೌಸ್, 2013 ರಲ್ಲಿ ಡಿ-ಡೇ, ನೌತಂಕಿ ಸಾಲಾ! ಹೀಗೆ ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು (2013), ಬೆವಕೂಫಿಯಾನ್ (2014), ಹಾಗೂ 2020 ರಲ್ಲಿ ‘ಮಸ್ಕಾ’ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರು ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಅಭಿನಯ ಮಾಡಿದ್ದಾರೆ, ಅವರಿಗೆ ಸಿಕ್ಕ ಪಾತ್ರಗಳು ತುಂಬಾ ಚಿಕ್ಕದಾಗಿದ್ದವು. ಅವರು ನಟನಾಗಿ ಮನ್ನಣೆ ಪಡೆದುಕೊಂಡರು, ಆರ್ಥಿಕವಾಗಿ ಹಿಂದುಳಿದರು, ಚಿತ್ರರಂಗದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

‘ಬೇವಕುಫಿಯಾನ್’ ನಂತರ, ಸವಿ ಸಿಧು ಕಾಲ ಕ್ರಮೇಣ ಚಿತ್ರರಂಗದಿಂದ ದೂರ ಉಳಿದರು. 2019 ರಲ್ಲಿ, ಅವರು ಲೋಖಂಡ್ವಾಲಾದ ಒಂದು ಕಟ್ಟಡದಲ್ಲಿ ವಾಚಮ್ಯಾನ್ ಕೆಲಸ ಮಾಡುತ್ತಿದ್ದರು. ಸಂದರ್ಶನವೊಂದರಲ್ಲಿ ಅವರು ತಮ್ಮ ಈ ದುಃಸ್ಥಿತಿಯ ಹಿಂದಿನ ಕಾರಣಗಳನ್ನು ಸಂಪೂರ್ಣವಾಗಿ ವಿವರಿಸಿದರು. ಅಲ್ಪಾವಧಿಯಲ್ಲಿಯೇ ಪತ್ನಿ, ಪೋಷಕರು ಮತ್ತು ಅತ್ತೆ-ಮಾವಂದಿರನ್ನು ಕಳೆದುಕೊಂಡು ಜೀವನದಲ್ಲಿ ಒಂಟಿಯಾಗಿಬಿಟ್ಟಿದ್ದೇನೆ ಎಂದು ಕಣ್ಣೀರು ಸೂರಿಸಿದರು.

WhatsApp Group Join Now
Telegram Group Join Now       
   ಇದನ್ನು ಓದಿ: ಎಸ್ ಎಸ್ ಎಲ್ ಸಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 15000 ಪ್ರೋತ್ಸಾಹ ಧನ

ವೈಯಕ್ತಿಕ ದುರಂತಗಳು ಮತ್ತು ಹಣದ ತೊಂದರೆಗಳಿಂದ ಸಂಪೂರ್ಣವಾಗಿ ಕಳೆದುಕೊಂಡಿದ್ದ ಸವಿ ಸಿಧು, ತಮಗೆ ಇಷ್ಟವಿಲ್ಲದಿದ್ದರೂ ಒತ್ತಡದ ಮೇರೆಗೆ ವಾಚ್‌ಮ್ಯಾನ್ ಕೆಲಸಕ್ಕೆ ಸೇರಿದರು. ಆ ಕೆಲಸವನ್ನು ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು, ಕನಿಷ್ಠ ಪಕ್ಷ ಜೀವನ ಮುಂದುವರಿಸಲು ಈ ಕೆಲಸವನ್ನು ಮಾಡುತ್ತಿದ್ದರು. ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿದ ನಂತರವೂ, ಅವರು ಪಡೆದ ಸಂಬಳ ಅವರ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಲುತಿಲ್ಲ. ಒಂದು ಕಾಲದಲ್ಲಿ ನಟನಾಗಿದ್ದೆ ಅದರೆ ಇವಾಗ ನನ್ನ ಹತ್ತಿರ ಈಗ ಬಸ್ ಟಿಕೆಟ್ ತಗಲು ಕೂಡ ಹಣವಿಲ್ಲ, ಮತ್ತು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ ಅದೆಷ್ಟೋ ದಿನಗಳು ಆಗಿವೆ, ನೆನಪಿಲ್ಲ ಎಂದು ಅವರು ತಮ್ಮ ದುಃಖವನ್ನು ಹೊರಹಾಕುವ ಮೂಲಕ ವ್ಯಕ್ತಪಡಿಸಿದರು.

ಸವಿ ಸಿಧು ಅವರ ಕಥೆ ಮಾಧ್ಯಮಗಳಲ್ಲಿ ಪ್ರಸಾರವಾಗುತಿದಂತೆ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಅನುರಾಗ್ ಕಶ್ಯಪ್ ಮತ್ತು ರಾಜ್ ಕುಮಾರ್ ರಾವ್ ಇನ್ನೂ ಮುಂತಾದವರು ಕೆಲವು ಜನರು ಅವರಿಗೆ help ಮಾಡಲು ಮುಂದೆ ಬಂದಿದ್ದಾರೆ. ಎಲ್ಲಾ ಗಮನವು ಅವರ ಮೇಲೆ ಕೇಂದ್ರೀಕೃತವಾಗಿದ್ದರೂ, ಸವಿ ಸಿಧು ಇಲ್ಲಿತನ ಚಿತ್ರರಂಗಕ್ಕೆ ಮರಳಿಲ್ಲ. ಈ ಘಟನೆ ನಡೆದು ಐದು ವರ್ಷಗಳು ಕಳೆದು ಹೋಗಿದೆ, ಐದು ವರ್ಷಕ್ಕಿಂತ ಹೆಚ್ಚು ಸಮಯವಾಗಿದೆ. ಈ ನಟನ ವಿಶಿಷ್ಟ ಅಭಿನಯವನ್ನು ಮತ್ತೊಮ್ಮೆ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ.

ಸ್ನೇಹಿತರೆ, ಇದೇ ರೀತಿಯ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment