ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ, ‘ಗುಡ್ ನ್ಯೂಸ್ ಮೆಚುರಿಟಿಯ’ ಹಣ ಪಡೆಯಲು ಸರ್ಕಾರದಿಂದ ಸೂಚನೆ.
ಕರ್ನಾಟಕದ ಸರಕಾರದ ಭಾಗ್ಯಲಕ್ಷ್ಮಿಯ ಯೋಜನೆಯ ಅಡಿಯಲ್ಲಿ 2006-2007ರಲ್ಲಿ ವಿತರಣೆ ಮಾಡಲಾಗಿರುವ ಬಾಂಡ್ಗಳಿಗೆ ಇವಾಗ ಮೆಚುರಿಟಿ ಅವಧಿ ಮುಗಿದಿದೆ. ಆದ್ದರಿಂದ 1,520 ಫಲಾನುಭವಿಗಳು ತಮ್ಮ ಹಣವನ್ನು ಪಡೆಯಲು ಅರ್ಹರಾಗಿದ್ದಾರೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಂದರೆ LIC ಈ ಹಣವನ್ನು ಮಂಜೂರು ಮಾಡಲಾಗಿದೆ.
ಯಾರಿಗೆಲ್ಲ ಲಾಭ ಇದೆ?
• 2006-07ರಲ್ಲಿ ಬೆಂಗಳೂರು ಜಿಲ್ಲೆಯ ಫಲಾನುಭವಿಗಳಿಗೆ ಕೊದಲಾದ ಭಾಗ್ಯಲಕ್ಷ್ಮಿ ಬಾಂಡ್ಗಳು ಇರುವವರಿಗೆ ಲಾಭ ಇದೆ.
• 18 ವರ್ಷಗಳ ಹಿಂದೆ ನೊಂದಾಯಿಸಿದವರಿಗೆ ಇದರಿಂದ ಲಾಭವಿದೆ, ಯಾಕೆಂದರೆ ಈಗ ಅವರ ಮಗಳಿಗೆ 18 ವರ್ಷಗಳು ತುಂಬಿರುತ್ತದೆ.
• 1 ಲಕ್ಷದವರೆಗೆ ಮೆಚುರಿಟಿ ಮೊತ್ತ ದೊರೆಯಬಹುದು.
ಇದನ್ನು ಓದಿ: ಇಂತಹ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ 78,213 ಕೋಟಿ ಹಣ ಹಂಚಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ.
ಹಣ ಪಡೆಯುವ ವಿಧಾನ ಈ ಕೆಳಗೆ ಕೊಡಲಾಗಿದೆ.
• ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಸಂಪರ್ಕಿಸಿ ಬೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
• ಇದಕ್ಕೆ ಬೇಕಾಗುವ ದಾಖಲೆಗಳು ಮುಖ್ಯವಾಗಿ ಬಾಂಡ್ ದಸ್ತಾವೇಜು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರಗಳು.
• ಸ್ಥಳಗಳು: ಬೆಂಗಳೂರು ರಾಜ್ಯ ಯೋಜನೆ ಕಚೇರಿ, ಒಂದನೇಯ ಮಹಡಿ ಬಿಬಿಎಂಪಿ ಕಟ್ಟಡ ಎನ್ ಆರ್ ಕಾಲೋನಿ ಬೆಂಗಳೂರು.
ಸರ್ಕಾರದಿಂದ ಕೊಡಲಾದ ಎಚ್ಚರಿಕೆ.
• ನಕಲಿ ವಾರಂಟಿಗಳು ಅಥವಾ ಮೇಸೇಜ್ಗಳಿಗೆ ಎಚ್ಚರಿಕೆಯಿಂದ ಇರಿ.
• ಅಧಿಕೃತ ಸರ್ಕಾರಿ ವೆಬ್ಸೈಟ್ https://womenchild.Karnataka.gov.in
ಅಥವಾ ಕಚೇರಿಗೆ ನೇರವಾಗಿ ಭೇಟಿ ನೀಡಿ, ಇದರ ಬಗ್ಗೆ ಸವಿವರವಾಗಿ ತಿಳಿದುಕೊಳ್ಳಿ.
ಇದನ್ನು ಓದಿ: ಪಿ ಎಂ ಕುಸುಮ್ ಯೋಜನೆ: ಕೃಷಿ ಪಂಪ್ಸೆಟ್ಟುಗಳಿಗೆ ವಿದ್ಯುತ್ ಪೂರೈಕೆಗೆ ನೂತನ ಯೋಜನೆ.
ಭಾಗ್ಯಲಕ್ಷ್ಮಿ ಯೋಜನೆ ಅಂದರೆ ಏನು?
ಇದು ಕೇಂದ್ರ ಮತ್ತು ರಾಜ್ಯ ಯೋಜನೆಯಾಗಿದೆ. ಬಾಲಿಕೆಯರ ಶಿಕ್ಷಣ ಹಾಗೂ ವಿವಾಹಕ್ಕೆ ಆರ್ಥಿಕ ಸಹಾಯ ನೀಡುತ್ತದೆ. ಹೆಣ್ಣು ಮಗುವಿನ ಜನನದಂದು ಬಾಂಡ್ಗಳನ್ನು ನೀಡಿ, ಮೆಚುರಿಟಿಯ ಬಳಿಕ ಹಣವನ್ನು ಕೊಡಲಾಗುತ್ತದೆ.
ಸಹಾಯಕ್ಕಾಗಿ ಸಂಪರ್ಕಿಸಬೇಕಾದ ನಂಬರ್ ಮತ್ತು ವೆಬ್ಸೈಟ್.
• ಟೋಲ್ ಫ್ರೀ ನಂಬರ್: 1800-425-1556
• ಇ-ಮೇಲ್: pd.bhagyalakshmi@Karnataka.gov.in
2006-07ರ ಭಾಗ್ಯಲಕ್ಷ್ಮಿ ಬಾಂಡ್ಗಳ ಗಳ ಮೆಚುರಿಟಿ ಹಣ ಪಡೆಯಲು ಬೆಂಗಳೂರು ಜಿಲ್ಲೆಯ 1,520 ಫಲಾನುಭವಿಗಳಿಗೆ ಸರ್ಕಾರದ ಮಾರ್ಗ ಸೂಚನೆಯ ಮೂಲಕ ಹಣ ಪಾವತಿಯ ಪ್ರಕ್ರಿಯೆ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.