ಬ್ರೇಕಿಂಗ್ ನ್ಯೂಸ್: ಮಾದಕ ದ್ರವ್ಯ ಪರೀಕ್ಷೆಯಲ್ಲಿ ಗುಜರಾತ್ ಟೈಟಾನ್ಸ್ ಸ್ಫೀಡ್ ಬೌಲರ್ ಕಗಿಸೊ ರಬಾಡ ರವರನ್ನು ಐಪಿಎಲ್ ಸೇರಿ ಎಲ್ಲಾ ರೀತಿಯ ಕ್ರಿಕೆಟಿಗಳಿಂದ ಅಮಾನತ್ತು ಮಾಡಲಾಗಿದೆ.
ದಕ್ಷಿಣ ಆಫ್ರಿಕದ ಸ್ಪೀಡ್ ಬಾಲರ್ ಖಜೀಸೋ ರಬಾಡ ಇವರು 2025 ಐಪಿಎಲ್ ಪಂದ್ಯಾವಳಿಯಿಂದ ನಿರ್ಗಮಿಸಿದ್ದು ಈಗ ನಿಜ ಕಾರಣ ಬಯಲಾಗಿದೆ. ಗುಜರಾತ್ ಟೈಟಾನ್ ತಂಡದ ಪರವಾಗಿ ಆಡುತ್ತಿದ್ದ ರಬಾಡ ಮಾದಕ ದ್ರವ್ಯ ಪರೀಕ್ಷೆಯಲ್ಲಿ ವಿಫಲರಾದ ಕಾರಣ ಅಂತರಾಷ್ಟ್ರೀಯ ಹಾಗೂ ಐಪಿಎಲ್ ಕ್ರಿಕೆಟ್ ಗಳಿಂದ ತಾತ್ಕಾಲಿಕವಾಗಿ ಅಮಾನತುಕೊಂಡಿದ್ದಾರೆ. ಈ ಘಟನೆ ಪ್ರಪಂಚದಲ್ಲಿ ಬೃಹತ್ ಚರ್ಚೆ ಹಾಗೂ ಆಶ್ಚರ್ಯವನ್ನು ಉಂಟು ಮಾಡಿದೆ.
ಕಗಿಸೊ ರಬಾಡ ಅಮಾನತ್ತು ಆಗಲು ಕಾರಣ ಮತ್ತು ಇದರ ಹಿಂದಿನ ಘಟನೆಗಳು ಏನು?
ಗುಜರಾತ್ ಐಟಮ್ಸ್ ತಂಡವು ರಬಡರನ್ನು 10 ಕೋಟಿ 75 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು, ಆದರೆ 2025 ಐಪಿಎಲ್ ಸೀಸನ್ನಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ ಬಳಿಕ ಅವರು ಏಪ್ರಿಲ್ 2ರಂದು ಪಂದ್ಯಾವಳಿಯಿಂದ ಹೊರಗಡೆ ನಡೆದರು ಮತ್ತು ದಕ್ಷಿಣ ಆಫ್ರಿಕೆಗೆ ಮರಳಿದರು. ಆ ಸಮಯದಲ್ಲಿ ಇದಕ್ಕೆ ವೈಯಕ್ತಿಕ ಕಾರಣಗಳು ಏನೆಂದು ಹೇಳಲಾಗಿತ್ತು, ಆದರೆ ಈಗ ಮಾದಕ ದ್ರವ್ಯ ಪರೀಕ್ಷೆಯಲ್ಲಿ ವಿಫಲವಾದುದು ನಿಜವಾದ ಕಾರಣ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ದೃಢಪಡಿಸಿದೆ.
ಕಗಿಸೊ ರಬಾಡಾ ಕ್ಷೆಮೆ ಕೋರಿಕೆ ಹಾಗೂ ಹೇಳಿಕೆಗಳೇನು?
ಮೇ 3ರಂದು ರಬಡ ರವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಕ್ಷೆಮೆ ಯಾಚಿಸಿದ್ದಾರೆ ಈ ಸಂಭವದ ಬಗ್ಗೆ ಕಾರಣ ನೀಡಿದರು ಅವರ ಹೇಳಿಕೆಯ ಪ್ರಕಾರ:
ನನ್ನ ಮಾದಕ ದ್ರವ್ಯ ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್ ಬಂದ ಕಾರಣ ನಾನು ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದೇನೆ, ಮತ್ತು ನಾನು ನನ್ನ ಅಭಿಮಾನಿಗಳು, ತಂಡದ ಸಹವರ್ತಿಗಳು ಮತ್ತು ಕ್ರಿಕೆಟ್ ಸಮುದಾಯವನ್ನು ನಿರಾಶೆಗೊಳಿಸಿದ ಕಾರಣ ನಾನು ಕ್ಷಮೆ ಕೇಳುತ್ತಿದ್ದೇನೆ. ಕ್ರಿಕೆಟ್ ನನ್ನ ಜೀವನದ ಅತ್ಯಂತ ಪ್ರೀತಿಯ ಕ್ರೀಡೆ, ಮತ್ತು ನಾನು ಇದನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಈಗ ನಾನು ನಿಯಮಾವಳಿಗಳಿಗೆ ಅನುಗುಣವಾಗಿ ಸಹಕರಿಸುತ್ತೇನೆ, ಮತ್ತು ಶೀಘ್ರದಲ್ಲೇ ಮೈದಾನಕ್ಕೆ ಹಿಂತಿರುಗಲು ಇಚ್ಚಿಸುತ್ತೇನೆ ಎಂದು ಕಗಿಸೊ ರಬಾಡಾರವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಪರ್ಸನಲ್ ಲೋನ್ ಪಡೆಯುವುದು ಹೇಗೆ? ಕೇವಲ ಒಂದು ದಿನದಲ್ಲಿ ಮಾತ್ರ ಲೋನ್ ಸಿಗುತ್ತದೆ.
ಗುಜರಾತ್ ಟೈಟನ್ಸ್ ಮೇಲೆ ಬಿದ್ದ ಪರಿಣಾಮಗಳೇನು?
ರಬಡ ಅವರ ತಾತ್ಕಾಲಿಕ ಅಮಾನತ್ತು ಆಗಿರುವುದರಿಂದ ಗುಜರಾತ್ ಟೈಟನ್ಸ್ ತಂಡವು ತಾತ್ಕಾಲಿಕವಾಗಿ ಒತ್ತಡಕ್ಕೆ ಒಳಗಾಗಿದ್ದಾರೆ. ತಂಡದ ಪ್ರದರ್ಶನದ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿಲ್ಲ. ಇಲ್ಲಿಯವರೆಗೆ 10 ಪಂದ್ಯಗಳಲ್ಲಿ ಏಳು ಗೆಲುವು ಮತ್ತು ಮೂರು ಸೋಲುಗಳನ್ನು ದಾಖಲಿಸಿದ ಗುಜರಾತ್ 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ಟೇಬಲ್ನಲ್ಲಿ ಉತ್ತಮ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದರೆ ಅವರು ಪ್ಲೇಆಫ್ಗೆ ಅರ್ಹತೆ ಪಡೆಯಲಿದ್ದಾರೆ.
ಈ ಘಟನೆಯು ಕ್ರಿಕೆಟ್ ಪ್ರಪಂಚದಲ್ಲಿ ನೇಮಗಳು ಮತ್ತು ಶಿಸ್ತಿನ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದೆ. ಕಗಿಸೊ ರಬಾಡ ಅವರ ಅಮಾನತ್ತು ಕ್ರಿಕೆಟ್ ಪಟುಗಳು ತಮ್ಮ ಆರೋಗ್ಯ ಮತ್ತು ವೃತ್ತಿಪರ ನೀತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಪಷ್ಟವಾಗಿ ಇಲ್ಲಿ ಗೊತ್ತಾಗುತ್ತೆ.
ಇದೇ ರೀತಿ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.