ಪಿ ಎಂ ಕುಸುಮ್ ಯೋಜನೆ: ಕೃಷಿ ಪಂಪ್ಸೆಟ್ಟುಗಳಿಗೆ ವಿದ್ಯುತ್ ಪೂರೈಕೆಗೆ ನೂತನ ಯೋಜನೆ.
ಇನ್ಮುಂದೆ ಎಲ್ಲ ರೈತರು ರಾತ್ರಿ ಇಡೀ ನಿದ್ದೆ ಗೆಟ್ಟು ಕೃಷಿ ಪಂಪ್ಸೆಟ್ಟುಗಳಿಗೆ ನೀರು ಹರಿಸುವ ತಾಪತ್ರೆ ಅನುಭವಿಸುವ ಅವಶ್ಯಕತೆ ಇರುವುದಿಲ್ಲ. ಈ ನೂತನ ಯೋಜನೆಯಿಂದ ರಾಜ್ಯ ಸರ್ಕಾರ ರೈತರ ಬದುಕಿಗೆ ಹೊಸ ಬೆಳಕನ್ನು ಆಗಿರುವ ಈ ಕುಸುಮ ಸಿ ಯೋಜನೆಯನ್ನು ತಂದಿದೆ.
ಈ ಯೋಜನೆಯು ರೈತರ ಕೃಷಿ ಪಂಪ್ಸೆಟ್ಟುಗಳಿಗೆ ಹಗಲು ಹೊತ್ತಿನಲ್ಲಿ ಸ್ಥಿರ ವಿದ್ಯುತ್ತನ್ನು ಪೂರೈಕೆ ಮಾಡುವ ಮಹತ್ವದ ಹೆಜ್ಜೆ ಇದಾಗಿದೆ. 2025ರ ಜೂನ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹನುಮೇನಹಳ್ಳಿಯಲ್ಲಿ ಹಾಗೂ ಚರಕ ಪಟ್ಟೆನಹಳ್ಳಿ ಈ ಗ್ರಾಮಗಳಲ್ಲಿ 20 ಮೆಗಾ ಬಿಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ ಚಾಲನೆ ನೀಡಿ ಯೋಜನೆಗೆ ಅಧಿಕೃತ ರೂಪ ಕೊಟ್ಟಿದ್ದಾರೆ.
• ಏನಿದು ಪಿಎಂ ಕುಸುಮ್ ಸಿ ಯೋಜನೆ?
• ಈ ಯೋಜನೆಯ ಅನುಷ್ಠಾನದಿಂದ ರೈತರಿಗೆ ಆಗುವ ಪ್ರಯೋಜನಗಳೇನು?
• ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ?
ಪ್ರಸ್ತುತ ಚಾಲನೆ ಮಾಡಿರುವ ಯೋಜನೆಯ ವಿಶೇಷತೆಗಳು ಸೇರಿದಂತೆ ಇನ್ನಿತರ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಕೆಳಗಡೆ ಕೊಡಲಾಗಿದೆ ಇದನ್ನು ಸಂಪೂರ್ಣವಾಗಿ ಓದಿ ಇದರ ಸದುಪಯೋಗ ಪಡೆದುಕೊಳ್ಳಿ.
ಪಿ ಎಂ ಕುಸುಮ್ ಸಿ ಯೋಜನೆ ಅಂದರೆ ಏನು?
ಕೇಂದ್ರ ಸರ್ಕಾರದಿಂದ ಕಿಸಾನ್ ಉರ್ಜಾ ಸುರಕ್ಷಾ ಹಾಗೂ ಉತ್ಥಾನ್ ಮಹಾಭೀಯಾನ್ ಯೋಜನೆಯ ಭಾಗವಾಗಿರುವ ಈ “ಸಿ” ಘಟಕವು ಹಗಲು ವೇಳೆಯಲ್ಲಿ ರೈತರಿಗೆ ಸ್ಥಿರ ವಿದ್ಯುತ್ ಪೂರೈಕೆ ಮಾಡುವುದು ಇದಾಗಿದೆ
ಪಿಎಂ ಕುಸುಮ್ ಸಿ ಯೋಜನೆಯ ವಿಶೇಷತೆಗಳೆನ್ನು?
• 60 ಎಕರೆ ಖಾಸಗಿ ಭೂಮಿಯಲ್ಲಿ 20 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ಘಟಕ ಸ್ಥಾಪನೆ ಮಾಡುವುದು.
• ಕರ್ನಾಟಕ ಶಕ್ತಿ ನಿಯಂತ್ರಣ ಆಯೋಗ ಪ್ರತಿ ಯೂನಿಟ್ ಗೆ ₹3.7 ದರ ನಿಗದಿ ಮಾಡುವುದು.
• ಪ್ರತಿ ಘಟಕಕ್ಕೆ ₹3.5 ಇಂದ ₹4 ಕೋಟಿ ವೆಚ್ಚ ಕೇಂದ್ರದಿಂದ ₹1 ಕೋಟಿ ಸಬ್ಸಿಡಿ ನೀಡಲಾಗುತ್ತದೆ.
• ಈಗಾಗಲೇ 200 ಮೆಗಾ ವ್ಯಾಟ್ ಕಾರ್ಯ ನಿರ್ವಹಣೆಯಲ್ಲಿದ್ದು 545 ಮೆಗಾ ವ್ಯಾಟ್ ಘಟಕಗಳು ನಿರ್ಮಾಣದ ಹಂತದಲ್ಲಿವೆ
• 2025ರ ಡಿಸೆಂಬರ್ ಒಳಗಡೆ 2,400 ಮೆಗಾ ವ್ಯಾಟ್ ಸಾಮರ್ಥ್ಯದ ಘಟಕಗಳ ಗುರಿ ಒಂದಿದೆ.
ಇದನ್ನೂ ಓದಿ: ಅಂಚೆ ಕಚೇರಿಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ಸಿಗುತ್ತೆ 2.25 ಲಕ್ಷ ಬಡ್ಡಿ.
2,400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಕೆ ಜೆ ಜಾರ್ಜ್.
ವಿದ್ಯುತ್ ಪೀಡರ್ ಗಳ ಹತ್ತಿರ ಸೌರ ವಿದ್ಯುತ್ ಉತ್ಪಾದನೆ ಮಾಡಿ ಕೃಷಿಗಳಿಗೆ ಹೊದಗಿಸುವ ಕುಸುಮ್ ಸಿ ಯೋಜನೆಯ ಅಡಿಯಲ್ಲಿ ಮೊಟ್ಟಮೊದಲ ಹಂತದಲ್ಲಿ ಈ ವರ್ಷದ ಡಿಸೆಂಬರ್ ಅಂತ್ಯದ ಒಳಗಡೆ 2,400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಇಂಧನ ಸಚಿವರಾದ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಪಿಎಂ ಕುಸುಮ್ ಸಿ ಯೋಜನೆಯ ರೂಪರೇಷೆಗಳೆನು?
ಈ ಯೋಜನೆ ಪೂರ್ಣಗೊಂಡ ನಂತರ ಡಿಸೆಂಬರ್ ಕೊನೆಯ ಹಂತದಲ್ಲಿ ಒಟ್ಟು 2,400 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಇದರಿಂದ 389 ಉಪ ಕೇಂದ್ರ, 1,555 ಕೃಷಿ ಫೀಲ್ಡರ್ ಗಳಿಗೆ ಹಾಗೂ 6,32,794 ಕೃಷಿ ಐಪಿ ಸೆಟ್ ಗಳಿಗೆ ಹಗಲಿನ ಸಮಯದಲ್ಲಿ ವಿದ್ಯುತ್ ಪೂರೈಕೆ ಒದಗಿಸಲು ಸಾಧ್ಯವಾಗಲಿದೆ.
ಪಿಎಂ ಕುಸುಮ್ ಸಿ ಯೋಜನೆಯ ಉದ್ದೇಶಗಳೇನು ಹಾಗೂ ಗುರಿಗಳೇನು?
• ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಭೀಯಾನ್ ಕಂಪೋನೆಂಟ್ ಸಿ ರೈತರ ಕೃಷಿ ಪಂಪ್ಸೆಟ್ಗಳಿಗೆ ಸುಸ್ಥಿರ ವಿದ್ಯುತ್ ಪೂರೈಕೆ.
• ಈ ಯೋಜನೆ ಅಡಿಯಲ್ಲಿ ವೀಕೆಂದ್ರಿತ ಸೌರ ಘಟಕಗಳನ್ನು ಸ್ಥಾಪಿಸಿ ಕೃಷಿಗಳಿಗೆ ವಿದ್ಯುತ್ ಪೂರೈಸಲಾಗುವುದು ಹಾಗೂ ಈ ಮೂಲಕ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯಲ್ಲಿ ಇಳಿಕೆ ಆಗುವುದು.
• ಈ ಯೋಜನೆ ಹಗಲಿನ ವೇಳೆಯಲ್ಲಿ ಸುಸ್ಥಿರ ವಿದ್ಯುತ್ತನ್ನು ಕೃಷಿ ಪಂಸೆಟ್ಟುಗಳಿಗೆ ಪೂರೈಸಲು ಸಹಾಯವಾಗುತ್ತದೆ.
• ಪಿಎಂ ಕುಸುಮ್ ಸಿ ಈ ಯೋಜನೆಯ ಅಡಿಯಲ್ಲಿ ಸೋಲಾರ್ ಘಟಕಗಳ ಸ್ಥಾಪನೆಯೂ ಭಾರತದ ಸೋಲಾರ್ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚು ಮಾಡುವ ಹಾಗೂ ಕಾರ್ಬನ್ ಎಮಿಷನ್ ಇದರಿಂದ ಕಡಿಮೆಯಾಗಲು ಸಹಾಯವಾಗುತ್ತದೆ.
ಪಿಎಂ ಕುಸುಮ್ ಸಿ ಈ ಯೋಜನೆ ಜಾರಿಯಿಂದ ಆಗುವ ಲಾಭಗಳೇನು?
• ಸ್ಥಳೀಯ ಉತ್ಪಾದನೆ ಅಂದರೆ ಪಂಪ್ಸೆಟ್ಟುಗಳಿಗೆ ವಿದ್ಯುತ್ ನೇರವಾಗಿ ಸ್ಥಳೀಯ ಘಟಕಗಳಿಂದ ಪೂರೈಕೆ ಆಗುತ್ತದೆ.
• ರೈತರ ಹೊರೆ ಕಡಿಮೆಯಾಗುತ್ತಿದೆ ಅಂದರೆ ಈಗ ರೈತರು ರಾತ್ರಿ ನಿದ್ದೆಗೆಡುವದು ಇರುವುದಿಲ್ಲ. ಕತ್ತಲಿನಲ್ಲಿ ಕಷ್ಟ ಅನುಭವಿಸುವ ಅಗತ್ಯವಿಲ್ಲ.
• ಟ್ರಾನ್ಸ್ಮಿಷನ್ ನಷ್ಟ ಕಡಿಮೆ ಆಗುತ್ತದೆ ಅಂದರೆ ದೂರದ ಜಾಲವಲ್ಲದ ಕಾರಣ ವ್ಯತ್ಯಾಸಗಳು ಕಡಿಮೆಯಾಗುತ್ತವೆ.
• ವಿದ್ಯುತ್ ಪೂರೈಕೆ ದಕ್ಷತೆ ಅಂದರೆ ಘಟಕಗಳ ನೇರ ಸಂಪರ್ಕದಿಂದ ವ್ಯವಸ್ಥೆ ಸ್ಥಿರವಾಗುತ್ತದೆ.
• ಖಾಸಗಿ ಹಂಚಿಕೆದಾರರೊಂದಿಗೆ ಯೋಜನೆ ಜಾರಿಯಾಗುತ್ತಿರುವ ಕಾರಣ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಾಗಲು ಸಂಜೆಯವಿಲ್ಲ.
• ರೈತರಿಗೆ ಸತತವಾಗಿ ವಿದ್ಯುತ್ ದೊರೆಯುವುದರಿಂದ ಬೇಳೆ ನಾಶದ ಅಪಾಯ ಕಡಿಮೆಯಾಗುತ್ತದೆ ಇಳುವರಿ ಕೂಡ ಚೆನ್ನಾಗಿ ಬರಲು ಖಾತರಿ ಆಗುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮಿ 20ನೇ ಕಂತು 2000 ರೂಪಾಯಿ ಹಣ ಈ ಜಿಲ್ಲೆಯ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ
ಪಿಎಂ ಕುಸುಮ್ ವಯಕ್ತಿಕ ಘಟಕ ಸ್ಥಾಪನೆಗೂ ಅವಕಾಶ ಮತ್ತು ಸಬ್ಸಿಡಿ ದೊರೆಯುತ್ತದೆ.
ಪಿ.ಎಂ ಕುಸುಮ್ ಯೋಜನೆ ಅಡಿಯಲ್ಲಿ ರೈತರು ಸಬ್ಸಿಡಿಯನ್ನು ಪಡೆದು ತಮ್ಮ ಜಮೀನಿನಲ್ಲಿ ಕೃಷಿ ಪಂಪ್ಸೆಟ್ಟುಗಳಿಗೆ ವಿದ್ಯುತ್ ಅನ್ನು ಸ್ವತಃ ಉತ್ಪಾದನೆ ಮಾಡಿಕೊಳ್ಳಲು ಮತ್ತು ಹೆಚ್ಚುವರಿ ವಿದ್ಯುತ್ತನ್ನು ಸರ್ಕಾರಕ್ಕೆ ಮಾರಾಟ ಮಾಡಲು ಸೋಲಾರ್ ಘಟಕವನ್ನು ಸ್ಥಾಪಿಸಲು ಈ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಅಂದರೆ ಸಬ್ಸಿಡಿಯನ್ನು ಪಡೆಯಲು ಅವಕಾಶ ಇದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಕೆಇಬಿ ಕಚೇರಿಗೆ ಭೇಟಿ ನೀಡಿ. ಇದರ ಬಗ್ಗೆ ನಿಮಗೆ ಇರುವ ಡೌಟನ್ನು ಸರಿಪಡಿಸಿಕೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ಸ್ನೇಹಿತರೆ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.