ಕೇಂದ್ರ ಸರ್ಕಾರದಿಂದ ಈ ಯೋಜನೆಯಲ್ಲಿ ರೈತರಿಗೆ ಸಿಗಲಿದೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ. ಅಪ್ಲೈ ಮಾಡಿ.
ಭಾರತದ ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಪಾಲು ಅಪಾರವಾಗಿದೆ. ಅವರು ದೇಶದ ಬೆನ್ನೆಲುಬು, ಅನ್ನದಾತರು, ಇವರು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪರಿಚಯಿಸಿರುವ ಪಿಎಂ ಕಿಸಾನ್ ಮಾನ್ ಧನ್ ಯೋಜನೆ ರೈತರಿಗೆ ಒಂದು ನಿಜವಾದ ಆರ್ಥಿಕತೆಯ ಆಶಾಕಿರಣವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಈ ಯೋಜನೆಯ ಉದ್ದೇಶಗಳೇನು?
ಈ ಯೋಜನೆಯ ಮುಖ್ಯ ವಿದ್ಯೆ ಉದ್ದೇಶಗಳು ಏನೆಂದರೆ ರೈತರು ವೃದ್ಧಾಪ್ಯದಲ್ಲಿ ಯಾವುದೇ ತರದ ಆರ್ಥಿಕ ಒತ್ತಡ ಇಲ್ಲದೆ ಜೀವನ ನಡೆಸಲು ಸಹಾಯ ಮಾಡುತ್ತದೆ. ತಿಂಗಳಿಗೆ 3 ಸಾವಿರ ರೂಪಾಯಿ ಪಿಂಚಣಿ ಎಂಬುದು ರೈತರ ಜೀವನೋಪಾಯಕ್ಕೆ ಒಂದು ಸ್ಥಿರ ಆಧಾರವಾಗಬಲ್ಲದು.
ಈ ಯೋಜನೆಗೆ ಅರ್ಹತೆಗಳು ಏನು?
ಈ ಯೋಜನೆಯ ಸವಲತ್ತುಗಳನ್ನು ಪಡೆಯಲು ಕೆಲವು ನಿರ್ದಿಷ್ಟ ಅರ್ಹತೆಗಳು ಅನಿವಾರ್ಯವಾಗಿವೆ. ಅವುಗಳೆಂದರೆ,
• 60 ವರ್ಷಕ್ಕಿಂತ ಮೇಲ್ಪಟ್ಟ ರೈತರ ಈ ಪಿಂಚಣಿಯನ್ನು ಪಡೆಯಬಹುದು.
• ಅವರ ಜಮೀನು ಐದು ಎಕರೆಗಿಂತ ಕಡಿಮೆ ಇರಬೇಕು.
• ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳು ಈ ಪಿಂಚಣಿಗೆ ಅರ್ಜಿ ಸಲ್ಲಿಸಬಹುದಾಗಿದೆ.
• ಆದಾಯ ತೆರಿಗೆ ಪಾವತಿಸುವವರು ಬಡ್ಡಿದಾರ ಪದವೀಧರರು ಅಥವಾ ಇತರ ಸರ್ಕಾರದ ಭದ್ರತಾ ಯೋಜನೆಗಳ ಲಾಭದಾಯಕರು ಈ ಯೋಜನೆಗೆ ಅನರ್ಹರು.
ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ 17000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಇನ್ನೇನು ಪ್ರಕಟವಾಗಲಿದೆ,
ಪ್ರೀಮಿಯಂ ಪಾವತಿ ಹಾಗೂ ಸರ್ಕಾರದ ಪಾಲು.
ವಯಸ್ಸಿನ ಆಧಾರದ ಮೇಲೆ ರೈತರು ಪ್ರತಿ ತಿಂಗಳು 55 ರೂಪಾಯಿಯಿಂದ ಎರಡು ನೂರು ರೂಪಾಯಿಗಳವರೆಗೆ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಈ ಪಾವತಿಯೊಂದಿಗೆ ಸಮಾನ ಪ್ರಮಾಣದ ಹಣವನ್ನು ಕೇಂದ್ರ ಸರಕಾರ ಸಹ ಪಾವತಿಸುತ್ತದೆ. ಉದಾರಣೆಗೆ, 20 ವರ್ಷದ ರೈತನು 60 ರೂಪಾಯಿ ಪಾವತಿಸಬೇಕು. ಮೂವತ್ತು ವರ್ಷದ ರೈತರು 150 ರೂಪಾಯಿಗಳನ್ನು ಪಾವತಿಸಬೇಕು, 40 ವರ್ಷದ ರೈತರು 200 ರೂಪಾಯಿಗಳನ್ನು ಪಾವತಿಸಬೇಕು. ಇದು ಒಂದು ಸಾಮಾನ್ಯ ರೈತನಿಗೆ ಹೂಡಿಕೆ ಆಗಿದೆ; ಇದು ಬಡತನವನ್ನು ದೂರವಿಡುವ ಮಾರ್ಗ ಇದಾಗಿದೆ.
ಈ ಪಿಂಚಣಿಯ ಮರಣೋತ್ತರ ಲಾಭಗಳೇನು?
ರೈತನು 60 ವರ್ಷಗಳ ನಂತರ ನಿಧನರಾಗಿದ್ದರೆ ಅವರ ಪತ್ನಿಗೆ 1,100 ಪಿಂಚಣಿಯನ್ನು ಜೀವನ ಪರ್ಯಂತ ಕೊಡಲಾಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಖುಷಿಯದಂತೆ ತಡೆಗಟ್ಟುವ ಒಂದು ಒಳ್ಳೆಯ ವ್ಯವಸ್ಥೆ ಇದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ.
ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿರುವ ರೈತರು ಸಿ ಎಸ್ ಸಿ ಅಂದರೆ ಕಾಮನ್ ಸರ್ವಿಸ್ ಸೆಂಟರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕುಬೇಕು. ಆಧಾರ್ ನೋಂದಣಿ ನಾಮಿನಿಯ ವಿವರ ಸಹಿ ಮಾಡಿದ ಅರ್ಜಿ ಡೌನ್ಲೋಡ್ ಮತ್ತು ಅಪ್ಲೋಡ್ ಪ್ರಕ್ರಿಯೆ ಮೂಲಕ ರೈತರಿಗೆ ಪಿಂಚಣಿ ಕಾರ್ಡ್ ನೀಡಲಾಗುತ್ತದೆ. ಪಿಎಂ ಕಿಸಾನ್ ಖಾತೆಯಲ್ಲಿಯೇ ಪ್ರೀಮಿಯಂ ಕಟ್ಟುತ್ತದೆ.
ಪಿಎಂ ಕಿಸನ್ ಫಲಾನುಭವಿ ಇಲ್ಲದವರು ಸಹ ಸಿ ಎಸ್ ಸಿ ಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಯ ತಾತ್ಪರ್ಯವಿಲ್ಲದಂತೆ ರಾಜಕೀಯ ಜಾಲ ಅಥವಾ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗೆ ಲಾಭ ಒದಗಿಸುವುದು ಇದರ ವಿಶೇಷ ಉದ್ದೇಶ ಆಗಿದೆ.
ಸ್ನೇಹಿತರೆ, ತಮಗೆ ಕೊನೆಯದಾಗಿ ಹೇಳುವುದೇನೆಂದರೆ, ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಭಾರತದ ಲಕ್ಷಾಂತರ ಸಣ್ಣ ರೈತರ ಬದುಕಿಗೆ ಬರವಸೆಯ ಬೆಳಕು ತರಲಿದೆ. ಇದು ಕೇವಲ ಪಿಂಚಣಿಯ ಯೋಜನೆ ಅಲ್ಲ; ಇದು ರಾಷ್ಟ್ರದ ಆರ್ಥಿಕ ನೆಲೆಯ ಬಲವನ್ನೇ ಬಲಪಡಿಸುವ ಹೆಜ್ಜೆ ಇದಾಗಿದೆ. ಪ್ರತಿ ಅರ್ಹ ರೈತರು ಈ ಯೋಜನೆಯ ಲಾಭವನ್ನು ಪಡೆದು ತಮ್ಮ ವೃದ್ಧಾಪ್ಯವನ್ನು ಗೌರವದ ಬದುಕಾಗಿ ರೂಪಿಸಿಕೊಳ್ಳಬೇಕು, ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದ ಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧು ಬಳಗದವರೊಂದಿಗೆ ಶೇರ್ ಮಾಡಿ, ಸಪೋರ್ಟ್ ಮಾಡಿ. ಧನ್ಯವಾದಗಳು.
ಸ್ನೇಹಿತರೆ ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.