ಪಂಜಾಬ್- ಕೋಲ್ಕತ್ತಾ ನಡುವಿನ ಪಂದ್ಯ ರದ್ದುಮಾಡಲು ಕಾರಣವೇನು?

Spread the love

ಮೊದಲ ಬ್ಯಾಟಿಂಗ್ ಮುಗಿದ ಬೆನ್ನಲ್ಲೇ ಪಂಜಾಬ್- ಕೋಲ್ಕತ್ತಾ ನಡುವಿನ ಪಂದ್ಯ ರದ್ದುಮಾಡಲು ಕಾರಣವೇನು?

ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಸೂರುವಾದ ಐಪಿಎಲ್ ಪಂದ್ಯ ರದ್ದು.

ಒಂದೆ ಓವರ್​​ನಲ್ಲಿ 7 ರನ್​ ಗಳಿಸಿದ್ದ ಕೋಲ್ಕತ್ತಾ.

 ನೈಟ್​ ರೈಡರ್ಸ್​ ಬ್ಯಾಟಿಂಗ್ ಅಬ್ಬರದಿಂದ ಅರ್ಧಶತಕ ಸಿಡಿಸಿದ್ದ ಪ್ರಭಸಿಮ್ರಾನ್.

ಮಳೆ ಬಂದಿರುವ ಕಾರಣದಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಪಂಜಾಬ್​ ಕಿಂಗ್ಸ್ ನಡುವೆ ನಡೆದ 44ನೇ ಐಪಿಎಲ್​ ಪಂದ್ಯವನ್ನು ನಿಲ್ಲಿಸಲಾಯಿತು. ಈ ವರ್ಷದ ಅಂದರೆ 2025ರ ಸೀಸನ್​ನಲ್ಲಿ ಇದೇ ಮೊದಲ ಬಾರಿಗೆ ಪಂದ್ಯ ಫಲಿತಾಂಶ ಇಲ್ಲದೆ ಅಂಕಗಳನ್ನು ಈ ಎರಡೂ ಕಡೆ ತಂಡಗಳಿಗೆ ನೀಡಲಾಗಿದೆ.

WhatsApp Group Join Now
Telegram Group Join Now       

ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ಮತ್ತು ಕೆಕೆಆರ್ ತಂಡಗಳು ನಿನ್ನೆ ಸಂಜೆ 7:30ಕ್ಕೆ ಗ್ರೌಂಡ್ ಗೆ ಇದವು. ಪಂಜಾಬ್​ ಕಿಂಗ್ಸ್​ ತಂಡದ ಕ್ಯಾಪ್ಟನ್ ಆದ ಶ್ರೇಯಸ್ ಅಯ್ಯರ್ (Tass) ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ತಮ್ಮ ಬ್ಯಾಟಿಂಗ್ ಆಟವನ್ನು ಪೂರ್ಣಗೊಳಿಸಿದ್ದರು. ಓಪನರ್ಸ್​ ಪ್ರಿಯಾಂಶ್ ಆರ್ಯ ಮತ್ತು ಪ್ರಭಾಸಿಮ್ರನ್ ಅವರ ಅರ್ಧಶತಕದಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ​ 202 ರನ್​ಗಳ ಬೃಹತ್ತಾದ ಮೊತ್ತದ ಗುರಿ ಕೊಡಲಾಯಿತು.

ಇದನ್ನೂ ಓದಿ: ಪಿ ಎಮ್ ಕಿಸಾನ್ ಯೋಜನೆ 20ನೇ ಕಂತು ಬಿಡುಗಡೆ ಆಗುವುದರ ಬಗ್ಗೆ

WhatsApp Group Join Now
Telegram Group Join Now       

ಓಪನರ್ ಪ್ರಿಯಾಂಶ್ ಆರ್ಯ ಆರಂಭದಲ್ಲಿ ವೇಗದ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕೆಕೆಆರ್​ ತಂಡಕ್ಕೆ ಕಾಟವಾಡರು. ಪಂದ್ಯದಲ್ಲಿ ಒಟ್ಟು 35 ಎಸೆತಗಳನ್ನು ಎದುರಿಸಿದ ಸ್ಫೋಟಕ ಬ್ಯಾಟರ್​ 8 ಬೌಂಡರಿ, 4 ಅಮೋಘವಾದ ಸಿಕ್ಸರ್​ಗಳಿಂದ 69 ರನ್‌ಗಳನ್ನು ಗಳಿಸಿದರು. ಇದು ಪಂಜಾಬ್ ತಂಡಕ್ಕೆ ತಂದು ಕೊಟ್ಟ ಕಾಣಿಕೆಯನ್ನಬಹುದು. ರಸೆಲ್​ ಬೌಲಿಂಗ್​ನಲ್ಲಿ ಕ್ಯಾಚ್​ ಕೊಟ್ಟು ಹೊರಗೆ ಹೊದರು.

ಪ್ರಿಯಾಂಶ್ ಆರ್ಯ ಜೊತೆ ಕ್ರೀಸ್​ಗೆ ಆಗಮಿಸಿದ್ದ ಓಪನರ್ ಪ್ರಭಾಸಿಮ್ರನ್ ಕೂಡ ಕೆಕೆಆರ್​ ಬೌಲರ್​ಗಳ ವಿರುದ್ಧ ರನ್ ಗಳ ಸುರಿಮಳೆ ತಂದು ಕೊಟ್ಟರು ಆರ್ಯಗಿಂತ ತುಸು ಜೋರಾಗಿಯೇ ಬ್ಯಾಟ್​ ಬೀಸಿದ ಪ್ರಭಾಸಿಮ್ರನ್ ಸ್ಫೋಟಕ 83 ರನ್​ಗಳನ್ನು ಬಾರಿಸಿದರು. ಕೇವಲ 49 ಬೌಲ್​ಗಳನ್ನು ಆಡಿದ ಪ್ರಭಾಸಿಮ್ರನ್ 6 ಬೌಂಡರಿ 6 ಆಕಾಶದ ಎತ್ತರಕ್ಕೆ ಸಿಕ್ಸರ್​ಗಳನ್ನು ಹೊಡೆದರು.

ಆದರೆ ಕೆಕೆಆರ್​​ನ 2ನೇ ಇನ್ನಿಂಗ್ಸ್​ನಲ್ಲಿ ಆರಂಭವಾಗಿ ಸುನಿಲ್ ನೈರನ್​​ ಮತ್ತು ರಹಮಾನುಲ್ಲಾ ಗುರ್ಬಾಜ್ ಬ್ಯಾಟಿಂಗ್ ಆರಂಭಿಸಿ ಒಂದು ಓವರ್​ ಆಡಿ 7 ರನ್​​ಗಳನ್ನು ಗಳಿಸಿದ್ದರು. ಇನ್ನೊಂದು ಓವರ್​ ಆರಂಭಿಸಬೇಕು ಎನ್ನುವಷ್ಟರಲ್ಲಿ ಈಡನ್​ ಗಾರ್ಡನ್ಸ್ ಮೈದಾನದಲ್ಲಿ ಜೋರಾಗಿ ಮಳೆಯ ಜೊತೆಗೆ ಕೆಟ್ಟದಾದ ವಾತಾವರಣ ಏರ್ಪಟ್ಟಿದೆ. ಇದರಿಂದ ಕೆಕೆಆರ್ ಮತ್ತು ಪಂಜಾಬ್​ ನಡುವಿನ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ತಲಾ ಒಂದೊಂದು ಅಂಕ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಮ್ಯಾಚ್ ನಡೆಯುವ ವೇಳೆಯಲ್ಲಿ ಮಳೆ ಬಂದಿರುವುದರಿಂದ ಮೈದಾನದಿಂದ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೂಮ್​​ನಕಡೆ ಓಡಿ ಹೋದರು. ಕೆಕೆಆರ್ ಸೆಕೆಂಡ್​ ಬ್ಯಾಟಿಂಗ್​ ಎನೋ ಆರಂಭಿಸಿತ್ತು. ಆದರೆ (bad atmosphere) ಹಾಗೂ ಮಳೆ ಇದ್ದಿದ್ದರಿಂದ ಪಂದ್ಯವನ್ನೇ ರದ್ದು ಎಂದು ಘೋಷಣೆ ಮಾಡಿ ಒಂದೊಂದು ಪಾಯಿಂಟ್ ಕೊಡಲಾಗಿದೆ. ಪಂದ್ಯದಲ್ಲಿ ಒಂದು ಓವರ್​ ಮಾತ್ರ ಆಡಿತು (kkr) ಇನ್ನಾ 19 ಓವರ್​ಗಳಲ್ಲಿ 195 ರನ್​ಗಳನ್ನು ಗಳಿಸಬೇಕಿತ್ತು. ಆದರೆ ಮಳೆಯ ಕಾರಣದಿಂದ ಮ್ಯಾಚ್ ಅನ್ನು ಸ್ಥಗಿತಗೊಳಿಸಲಾಯಿತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment