ಕರ್ನಾಟಕ ರಾಜ್ಯದಲ್ಲಿ 17000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಇನ್ನೇನು ಪ್ರಕಟವಾಗಲಿದೆ,

ಕರ್ನಾಟಕ ರಾಜ್ಯದಲ್ಲಿ 17000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಇನ್ನೇನು ಪ್ರಕಟವಾಗಲಿದೆ,

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 17000 ಕ್ಕಿಂತಲೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಶೀಘ್ರದಲ್ಲಿ ಚಾಲನೆ ನೀಡಲಿದೆ. ಈ ಕುರಿತು ಶಿಕ್ಷಣ ಸಚಿವ ಮಧುಬಂಗಾರಪ್ಪ ನೀಡಿದ ಮಾಹಿತಿ ಪ್ರಕಾರ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿ ಗೊಳಿಸುವತ್ತ ಸರ್ಕಾರ ಗಮನ ಸೆಳೆದಿದೆ.

ಸ್ನೇಹಿತರೆ, ಈ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.

ಈ ನೇಮಕಾತಿಯ ವಿವರಗಳು.

• ಸರಕಾರಿ ಶಾಲೆಗಳಲ್ಲಿ ಸುಮಾರು 11,000 ಸಾವಿರ ಶಿಕ್ಷಕರ ನೇಮಕಾತಿ.

• ಅನುದಾನಿತ ಶಾಲೆಗಳಿಗೆ, 6,500 ಶಿಕ್ಷಕರ ನೇಮಕಾತಿ.

WhatsApp Group Join Now
Telegram Group Join Now       

ಇನ್ನು ಕೆಲವು ಪ್ರಕ್ರಿಯೆಯಲ್ಲಿ ಇರುವ ನೇಮಕಾತಿಗಳನ್ನು ಸೇರಿಸಿದರೆ ಒಟ್ಟು 17000 ದಿಂದ 18 ಸಾವಿರದವರೆಗೆ ಹೊಸ ಶಿಕ್ಷಕರ ನೇಮಕಾತಿ ಆಗುವ ಸಾಧ್ಯತೆ ಇರುವುದು.

ಈ ಶಿಕ್ಷಕರ ನೇಮಕಾತಿ ರಾಜ್ಯದ ಹಲವೆಡೆ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶ ಇದಾಗಿದೆ. ವಿಶೇಷವಾಗಿ ಹಿಂದಿನಿಂದಲೂ ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಫಲಿತಾಂಶದ ಸುಧಾರಣೆಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

WhatsApp Group Join Now
Telegram Group Join Now       

ಇದು ಅರ್ಥಪೂರ್ಣ ಹೆಜ್ಜೆಯಾಗಿದೆ.

ಇದು ಕೇವಲ ಹುದ್ದೆಗಳ ಬರ್ತಿ ಅಷ್ಟೇ ಅಲ್ಲದೆ, ಇದೊಂದು ಶೈಕ್ಷಣಿಕ ಪವಾಡ ಎಂದು ಹೇಳಬಹುದು; ಈಗ ಮೊದಲ ಹೆಜ್ಜೆ ಎಂಬಂತೆ ಪರಿಗಣಿಸಬಹುದು. ಹೊಸ ಶಿಕ್ಷಕರ ನೇಮಕಾತಿಯಿಂದ ಶಾಲೆಗಳ ಪ್ರಭಾವ ಪಲಿತಾಂಶ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟಕ್ಕೆ ನೇರವಾಗಿ ಸಕರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದಾಗಿದೆ.

ಸಾಮಾಜಿಕ ಪ್ರಭಾವೆನು?

• ಇದರಿಂದ ಯುವಕ ಮತ್ತು ಯುವತಿಯರಿಗೆ ಉದ್ಯೋಗದ ಅವಕಾಶ ದೊರೆತಂತಾಗುತ್ತದೆ.

• ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಿದಂತಾಗುತ್ತದೆ ಮತ್ತು ಉದ್ಯೋಗ ದೊರಕಿದಂತಾಗುತ್ತದೆ.

• ಶಿಕ್ಷಕರ ಅಭಾವದಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ ಆಗುತ್ತದೆ.

ಇದನ್ನೂ ಓದಿ: ಸ್ ಎಸ್ ಎಲ್ ಸಿ ಮುಗಿದ ನಂತರ ಈ ಸರ್ಕಾರಿ ಕೆಲಸಗಳಿಗೆ ಅಪ್ಲೈ ಮಾಡಿ.

ನಿಗವಹಿಸಬೇಕಾದ ಅಂಶಗಳೆನು?

• ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ನಿಗವಹಿಸುವುದು.

• ಪ್ರಾದೇಶಿಕ ಪ್ರಾಮುಖ್ಯತೆಗೆ ಸೂಕ್ತ ಒತ್ತು ಕೊಡುವುದು.

• ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರ ಅನುಸರಣೆ ಹಾಗೂ ಪುನರ್ ಮೌಲ್ಯಮಾಪನ.

ಈ ಶಿಕ್ಷಕರ ನೇಮಕಾತಿ ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಅಷ್ಟೆ ಅಲ್ಲ; ಇಡೀ ಸಮಾಜದ ವಿಕಾಸಕ್ಕಾಗಿ ಮಾಡಿದ ಬುದ್ಧಿ ಪೂರ್ಣ ಕಾರ್ಯ ಎಂದರೆ ತಪ್ಪಾಗಲಾರದು. ಇದರ ಯಶಸ್ಸು ಸರ್ಕಾರದ ನಿರ್ಧಾರಗಳ ಪರಿಣಾಮಕಾರಿ ಅಳವಡಿಕೆಗೆ ಮತ್ತು ಸಾಮಾಜಿಕ ಸಹಕಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗೂ ಯಾವುದೇ ತಪ್ಪು ಮಾಹಿತಿಗೆ ಒಳಗಾಗದೆ ಎಚ್ಚರಿಕೆಯಿಂದ ಇರಿ ಮತ್ತು ಇಂತಹ ಉತ್ತಮವಾದ ಮಾಹಿತಿ ತಿಳಿದಿರುವ ತಾವುಗಳು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಮತ್ತು ಬಂದು ಬಳಗದವರೊಂದಿಗೆ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಿ, ನಮಸ್ಕಾರಗಳು.

ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment