Karnataka ರಾಜ್ಯದ senior citizen ಆರ್ಥಿಕ ಸುರಕ್ಷತೆಗಾಗಿ ಪ್ರತಿ ತಿಂಗಳು 1,200 ಪಿಂಚಣಿ ರಾಜ್ಯ ಸರ್ಕಾರದಿಂದ ಘೋಷಣೆಯಾಗಿದೆ. ಈ ಯೋಜನೆಗೆ ಇವತ್ತೇ ಅರ್ಜಿ ಸಲ್ಲಿಸಿ.
ಈ ಯೋಜನೆಯ ಅಡಿಯಲ್ಲಿ 65 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಪ್ರತಿ ತಿಂಗಳು 1,200 ರೂಪಾಯಿ ಪಿಂಚಣಿ, ವೈದ್ಯಕೀಯ ಸೌಲಭ್ಯಗಳು ಹಾಗೂ ಸಾರಿಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಲೇಖನದಲ್ಲಿ ಯೋಜನೆಯ ಪ್ರಯೋಜನಗಳು, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಇತರ ಮುಖ್ಯ ವಿವರಗಳನ್ನು ಸಂಪೂರ್ಣವಾಗಿ ವಿವರಣಾತ್ಮಕವಾಗಿ ಕೊಡಲಾಗಿದೆ. ಇದನ್ನು ಓದಿ ತಿಳಿದುಕೊಳ್ಳಿ.
ಸಂಧ್ಯಾ ಸುರಕ್ಷಾ ಯೋಜನೆ ಅಂದರೆ ಏನು?
• [year and date] 2 ಜುಲೈ 2007. ಸಂಧ್ಯಾ ಸುರಕ್ಷೆ ಜಾರಿಗೆ ಬಂದ
• ಆರ್ಥಿಕವಾಗಿ ದುರ್ಬಲವಾದ ಹಿರಿಯ ನಾಗರಿಕರಿಗೆ ನೆರವು ನೀಡುವುದು ಇದರ ಉದ್ದೇಶವಾಗಿದೆ.
• ಪ್ರತಿ ತಿಂಗಳು 1,200 ರೂಪಾಯಿಗಳು ಪಿಂಚಣಿ ದೊರೆಯುತ್ತದೆ.
• ಇದರಿಂದ ದೊರೆಯುವ ಸೌಲಭ್ಯಗಳು, ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ರಿಯಾಯಿತಿ NGO ಗಳ ಮೂಲಕ ಉಚಿತ ವೈದ್ಯಕೀಯ ಸಹಾಯ ಮತ್ತು ವೃದ್ಧಾಶ್ರಮಗಳು ಮತ್ತು ಡೇ ಕೇರ್ ಸೆಂಟರ್ ಗಳಲ್ಲಿ ಹಾರೈಕೆ.
ಈ ಯೋಜನೆಯನ್ನು ಪಡೆಯಲು ಯಾರೆಲ್ಲ ಅರ್ಹತೆಯನ್ನು ಹೊಂದಿರುತ್ತಾರೆ?
• ಈ ಯೋಜನೆ ಪಡೆಯಲು 65 ವಶಕ್ಕಿಂತ ಹೆಚ್ಚಾಗಿರಬೇಕು.
• ವೈಯಕ್ತಿಕ ವಾರ್ಷಿಕ ಆದಾಯ 20,000 ಕ್ಕಿಂತ ಕಡಿಮೆ ಇರಬೇಕು.
• ದಂಪತಿಗಳ ಒಟ್ಟು ವಾರ್ಷಿಕ ಆದಾಯ 32,000ಕ್ಕಿಂತ ಕಡಿಮೆ ಇರಬೇಕು.
• ಬ್ಯಾಂಕ್ ಖಾತೆಯಲ್ಲಿ 10,000 ಕ್ಕಿಂತ ಹೆಚ್ಚು ಠೇವಣಿ ಇರಬಾರದು.
• ಇತರೆ ಖಾಸಗಿ ಅಥವಾ ಸರ್ಕಾರಿ ಪಿಂಚಣಿ ಪಡೆಯುತ್ತಿರಬಾರದು.
ಕೆಳಕಂಡ ವ್ಯಕ್ತಿಗಳು ಈ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.
• ಸಣ್ಣ ರೈತರು, ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು ಮತ್ತು ಅಸಂಘಟಿತ ವಲಯದ ಕಾರ್ಮಿಕರು, ಆದರೆ ಇದು ಬಿಲ್ಡಿಂಗ್ ಅಂಡ್ ಕನ್ಸ್ಟ್ರಕ್ಷನ್ ವರ್ಕರ್ಸ್, ರೆಗುಲರ್ಸ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಕಂಡಿಶನ್ ಆಫ್ ಸರ್ವಿಸಸ್ ಯಾಕ್ 1996 ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಮತ್ತು ಅದರ ಅಡಿ ಮಾಸಾಶನ ಪಡೆಯುವವರು ಈ ಯೋಜನೆಗೆ ಇರುವುದಿಲ್ಲ.
ಈ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತಾ ಮಾನದಂಡಗಳು.
• ಪತಿ ಪತ್ನಿಯ ಸಂಯೋಜನ ವಾರ್ಷಿಕ ಆದಾಯ 32,000 ಕ್ಕಿಂತ ಹೆಚ್ಚಿಗೆ ಇರಬಾರದು.
• ಫಲಾನುಭವಿಗಳು ಪತಿ ಅಥವಾ ಪತ್ನಿಯ ಸಂಯೋಜಿತ ಠೇವಣಿ ಮೌಲ್ಯ 10,000 ಕ್ಕಿಂತ ಹೆಚ್ಚಿಗೆ ಇರಬಾರದು.
• ಯಾವುದೇ ರೀತಿಯ ಪಿಂಚಣಿಯನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲದಿಂದ ಪಡೆದುಕೊಳ್ಳುತ್ತಿರಬಾರದು.
• ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಸಹ ಇವರುಗಳು ಫಲಾನು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಯೋಜನೆ ಅಡಿ ಮಾಸಶನಕ್ಕೆ ಅರ್ಹತೆಯುಳ್ಳವರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು.
• ಆಧಾರ್ ಕಾರ್ಡ್ ಜನನ ಪ್ರಮಾಣ ಪತ್ರ ಪಾಸ್ಪೋರ್ಟ್ ಯುವ ವಯಸ್ಸಿನ ಪುರಾವೆಗಾಗಿ.
• ವಸಸ್ಥಳದ ಪುರಾವೆಗಾಗಿ ವಿದ್ಯುತ್ ಬಿಲ್ ಐದು ವರ್ಷದ ನಿವಾಸ ಪ್ರಮಾಣ ಪತ್ರ.
• ಆದಾಯದ ಪುರಾವೆಗಾಗಿ ತಹಸಿಲ್ದಾರರಿಂದ ದೃಢೀಕರಿಸಲ್ಪಟ್ಟ ಆದಾಯ ಪ್ರಮಾಣ ಪತ್ರ.
• ಬ್ಯಾಂಕ್ ಖಾತೆಯ ವಿವರಗಳಿಗಾಗಿ ಬ್ಯಾಂಕ್ ಪಾಸ್ ಪಾಸ್ಬುಕ್ ಜೆರಾಕ್ಸ್ ಬೇಕಾಗುತ್ತದೆ.
ಇದನ್ನು ಓದಿ: ಶಿಕ್ಷಣ ಸಾಲ ಬರಬರಿ 10 ಲಕ್ಷ ರೂಪಾಯಿ, ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ.
ಅರ್ಜಿ ಸಲ್ಲಿಸುವ ವಿಧಾನ
ವಿಧಾನ,ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ.
• ಕರ್ನಾಟಕ ನಾಡಕಚೇರಿ ವೆಬ್ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
• ಸಂಧ್ಯಾ ಸುರಕ್ಷಾ ಯೋಜನೆ ಹುಡುಕಿ ಆಯ್ಕೆ ಮಾಡಿ.
• ಆನ್ಲೈನ್ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ.
• ಓಟಿಪಿ ದೃಢೀಕರಿಸಿ, ದಾಖಲೆಯನ್ನು ಅಪ್ಲೋಡ್ ಮಾಡಿ, ಎಲ್ಲಾ ಪರಿಶೀಲನೆ ಮಾಡಿದ ಬಳಿಕ, ಸಬ್ಮಿಟ್ ಮಾಡಿ, ಅರ್ಜಿಯನ್ನು ಪೂರ್ಣಗೊಳಿಸಿ.
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ.
• ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಪುರಸಭೆ ಕಚೇರಿಯಿಂದ ಅರ್ಜಿ ಫಾರಂ ಪಡಿಯಿರಿ.
• ಇಲ್ಲಿ ಕೊಡಲಾದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
ಪಿಂಚಣಿ ಪಾವತಿ ಮತ್ತು ಟ್ರ್ಯಾಕಿಂಗ್ ಮಾಡುವುದು ಹೇಗೆ?
• ಪಿಂಚಣಿಯನ್ನು ನೇರ ನಿಮ್ಮ ಬ್ಯಾಂಕ್ ಖಾತೆಗೆ ಜಿಲ್ಲಾ ಕಂದಾಯ ಇಲಾಖೆ ಹಂಚಿಕೆ ಮಾಡುತ್ತದೆ.
• ಸ್ಥಿತಿಯನ್ನು ನಾಡಕಚೇರಿ ಪೋರ್ಟರಲ್ಲಿ ಟ್ರ್ಯಾಕ್ ಮಾಡಬಹುದು.
ನಿಮ್ಮ ಮನಸ್ಸಲ್ಲಿ ಕಾಡುವ ಪ್ರಶ್ನೆಗೆ ನಮ್ಮ ಉತ್ತರ.
ಯಾರೆಲ್ಲ ಈ ಯೋಜನೆಗೆ ಅರ್ಹತೆಯುಳ್ಳವರು ಆಗಿರುವುದಿಲ್ಲ?
ಉತ್ತರ: ಇತರ ಪಿಂಚಣಿ ಪಡೆಯುವವರು ಅಥವಾ 10,000 ಗಿಂತ ಜಾಸ್ತಿ ಠೇವಣಿ ಹೊಂದಿದವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಪಿಂಚಣಿ ನಿಲ್ಲಿಸಿದರೆ ಮುಂದೆ ಏನು ಮಾಡಬೇಕು?
ಉತ್ತರ: ಪಿಂಚಣಿ ನಿಲ್ಲಿಸಿದರೆ ದಾಖಲೆಗಳನ್ನು ಪುನಸಲ್ಲಿಸಿ ಅಥವಾ ನಾಡಕಚೇರಿಗೆ ಭೇಟಿ ನೀಡಿ.
ಬಿಪಿಎಲ್ ಕಾರ್ಡ್ ಇದ್ದವರಿಗೆ ಪ್ರಯೋಜನ ಇರುವುದೇ?
ಉತ್ತರ: ಹೌದು, ಆದರೆ ಎಪಿಎಲ್ ಕಾರ್ಡ್ದಾರರು ಕೂಡ ಅರ್ಹರಾಗಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆಯು ಹಿರಿಯರ ಜೀವನವನ್ನು ಸುಗಮಗೊಳಿಸುತ್ತದೆ, ಮತ್ತು ಅರ್ಹತೆ ಹೊಂದಿದವರು ಆನ್ಲೈನ್ ಅಥವಾ ಆಫ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಿ ಪ್ರತಿ ತಿಂಗಳ 1200 ಪಿಂಚಣಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಸರಕಾರದ ಅಧಿಕೃತ ವೆಬ್ಸೈಟ್ ಅಥವಾ ಸ್ಥಳೀಯ ಆಡಳಿತ ಕಚೇರಿಗಳಿಗೆ ಭೇಟಿ ನೀಡಿ.
ಪಿಂಚಣಿ ಮೊತ್ತ 1200, ಅರ್ಜಿದಾರರು ವಾಸಸ್ಥಳ ವ್ಯಾಪ್ತಿಯ ಅಟಲ್ ಜಿ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು
ಸ್ನೇಹಿತರೆ, ಇದೇ ರೀತಿಯ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.