Agricultural loans for farmers have been increased to Rs 2 lakh, without any collateral.
ರೈತರಿಗೆ ಕೃಷಿಯ ಸಾಲ 2 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ, ಅದು ಯಾವುದೇ ಶೂರೂಟಿ ಇಲ್ಲದೆ.
ಹೆಚ್ಚಿನ ಕೃಷಿ ಸಾಲ: ರೈತರ ಭರವಸೆಗೆ ಹೊಸ ಧೈರ್ಯ.
ಭಾರತದಲ್ಲಿ ಕೃಷಿ ಕ್ಷೇತ್ರವು ದೇಶದ ಆರ್ಥಿಕ ಬೇಸ್ಮೆಂಟ್ ಆಗಿದೆ. ರೈತರೆ, ಭಾರತದ ಬೆನ್ನೆಲುಬು, ದೊಡ್ಡ ಸಂಖ್ಯೆಗಳ ನಡುವೆ ಇನ್ನೂ ಸಾವಿರಾರು ಕುಟುಂಬಗಳು ಕೃಷಿಯ ಮೇಲೆ ಅವಲಂಬಿತರಾಗಿ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ರೈತರ ಆರ್ಥಿಕ ಮತ್ತು ಭದ್ರತೆಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ರೈತರಿಗೆ ಕೃಷಿ ಸಾಲ 2 ಲಕ್ಷಕ್ಕೆ ಹೆಚ್ಚಿಗೆ ಮಾಡಲಾಗಿದೆ.
2025ರ ಜನವರಿ ಒಂದರಿಂದ ಜಾರಿಗೆ ಮಾಡುವಂತೆ ಇತ್ತೀಚಿಗಿನ ಆದೇಶದ ಮೂಲಕ RBI ರೈತರಿಗೆ ಯಾವುದೇ ಮೇಲೆ ಆಧಾರ ಇಲ್ಲದ ಕೃಷಿ ಸಾಲ ಮಿತಿಯನ್ನು ಇಷ್ಟು ದಿನ ಇದ್ದಂತ ಒಂದು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚು 2 ಲಕ್ಷಕ್ಕೆ ಏರಿಸಿದೆ. ಸಾಲ ಹೆಚ್ಚಿಗೆ ಏರುಸಿರುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ನೆರವು ಹೆಚ್ಚಾಗಿ ದೊರಕುತ್ತದೆ. ರೈತರು ತಮ್ಮ ರೈತರಿಗೆ ತಮ್ಮ ಜಮೀನಿನಲ್ಲಿ ಕೆಲಸವಿಲ್ಲದ ಅಂದರೆ ಆರ್ಥಿಕವಾಗಿ ಬಲವಿಲ್ಲದ ಸಮಯದಲ್ಲಿ ಈ ಸಾಲ ಸಹಾಯವಾಗುತ್ತದೆ.
ಸಾಲದ ಮಿತಿ 1,60000 ಇಂದ ಎರಡು ಲಕ್ಷ ರೂಪಾಯಿಗೆ ಜಾಸ್ತಿ ಮಾಡಲು ಉದ್ದೇಶಗಳೇನು? ಮತ್ತು ಇದರಿಂದ ರೈತರಿಗೆ ಆಗುವ ಉಪಯೋಗಗಳೇನು?
ರೈತರಿಗೆ ಆರ್ಥಿಕವಾಗಿ ಒತ್ತಡ ಕಡಿಮೆಯಾಗುತ್ತಿದೆ:
ರೈತರು ಇವಾಗಿನ ಕಾಲದಲ್ಲಿ ತುಂಬಾ ಎದುರಿಸಿತ್ತಿರುವ ರಸಗೊಬ್ಬರ ಬೀಜ ನೀರಾವರಿ ಕಾರ್ಮಿಕರಿಗೆ ಕೊಡುವ ಕೂಲಿ ಮತ್ತು ವೆಚ್ಚದ ಬಡಾವಣೆ, ಹಾಗೂ ಇನ್ನೂ ಮುಂತಾದವುಗಳಿಗೆ ರೈತನ ಖರ್ಚು ವೆಚ್ಚಗಳಿಗೆ ಸಹಾಯವಾಗುತ್ತದೆ.
ಆದರಿಂದ ಇವುಗಳನ್ನು ನಿಭಾಯಿಸಲು ರೈತನಿಗೆ ಸಾಲದ ಅಗತ್ಯ ಹೆಚ್ಚಾಗಿದೆ.
ರೈತನಿಗೆ ಮತ್ತು ಇನ್ನಷ್ಟು ವಿವಿಧ ಚಟುವಟಿಕೆಗಳಿಗೆ ಸಹಾಯವಾಗಲಿದೆ:
ಹೊಸ ಸಾಲದ ಮಿತಿಯು ಅಂದರೆ, ಎರಡು ಲಕ್ಷ ರೂಪಾಯಿ ಹೆಚ್ಚಿಗೆ ಮಾಡಿರುವ ಕೃಷಿಯ ಜೊತೆಗಿನ ಹಾಲಿನ ಉತ್ಪಾದನೆ, ಮೀನು ಸಾಕಾಣಿಕೆ, ಇನ್ನು ಮುಂತಾದ ಅನೇಕ ಗ್ರಾಮೀಣಾಧಾರಿತ ರೈತ ಚಟುವಟಿಕೆಗಳಿಗೆ ವಿಸ್ತರಿಸಲಾಗಿದೆ.
ಮೇಲಾದರೂ ಬೇಡ ಈ ಹೊಸ ಸಾಲದ ಮಿತಿಯ ಒಳಗಿನ ಸಾಲಗಳಿಗೆ ಯಾವುದೇ ಕಾತರಿ ಅಥವಾ ಮಾರ್ಜಿನ್ ಅಗತ್ಯವಿಲ್ಲ ಎಂಬುದು ರೈತರಿಗೆ ವಿಶ್ವಾಸವನ್ನು ಹೆಚ್ಚಿಸುವ ಬಲವಾದ ಅಂಶ ಇದಾಗಿದೆ.
ಬ್ಯಾಂಕುಗಳ ಪಾತ್ರವೇನು?
ರೈತರಿಗೆ ಈ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಉದ್ದೇಶದಿಂದ, ಬ್ಯಾಂಕುಗಳು ಹಳ್ಳಿಹಳ್ಳಿಗಳಿಗೆ ಗಳಿಗೆ ಹೋಗಿ ಸ್ಥಳೀಯ ಮಟ್ಟದಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಿದೆ. ಇದರ ಅಡಿಯಲ್ಲಿ ಈ ಕೆಳಗಿನ ಬದಲಾವಣೆಗಳನ್ನು ನೀವು ನಿರೀಕ್ಷಿಸಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಪ್ರೋತ್ಸಾಹಿಸಲಾಗಿದೆ. ರೈತರಿಗೆ ಸುಲಭವಾಗಿ ಸಾಲ ಸಿಗಲು ಈ ಕ್ರೆಡಿಟ್ ಕಾರ್ಡ್ ರೈತರಿಗೆ ತುಂಬಾ ಉಪಯುಕ್ತವಾಗಿದೆ.
ಎಂ ಐ ಎಸ್ ಎಸ್ ಈ ಯೋಜನೆಗೆ ಅನುಗುಣವಾಗಿ ತಕ್ಷಣದ ಪಾವತಿದಾರರಿಗೆ ಶೇಕಡ ನಾಲ್ಕರ ಬಡ್ಡಿಯಲ್ಲಿ ಮೂರು ಲಕ್ಷದವರೆಗೆ ಸಾಲ ಸಾಲ ಲಭ್ಯವಿರುವ ಮಾರ್ಪಡಿಸಿದ ಬಡ್ಡಿ ಸಬ್ಸಿಡಿ ಯೋಜನೆಗಳೊಂದಿಗೆ ಈ ಕ್ರಮವನ್ನು ಆಯೋಜಿಸಲಾಗಿದೆ.
ಇಲ್ಲಿ ವಿಶೇಷ ಮಾತುಗಳು:
ಕೃಷಿ ಕ್ಷೇತ್ರದಲ್ಲಿ ಅನುಭವಸ್ಥರು, ತಜ್ಞರು ಈ ಕ್ರಮವನ್ನು ಅನುಸರಿಸುತ್ತಿದ್ದಾರೆ. ಕೃಷಿ ಎಂಎಸ್ಪಿ ಸಮಿತಿಯ ಸದಸ್ಯ ವಿನೋದ್ ಆನಂದ್ ಹೇಳುವಂತೆ, ಮೇಲಾದಾರ ಇಲ್ಲದೇನೆ ಸಾಲ ಸಿಗುವುದು ಒಂದು ಪರಿವರ್ತನೆಗೆ ಸಾಧನೆಯ ಹೆಜ್ಜೆ.
ಆದ್ದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಪ್ರಜ್ಞೆ, ವಿಶ್ವಾಸ ಮತ್ತು ಹೂಡಿಕೆಗೆ ಉತ್ತೇಜನ ಸಿಗುತ್ತದೆ.
ಈ ಕ್ರಮಗಳನ್ನು ಸ್ವಾಭಿಮಾನಿ ರೈತರ ನಿರ್ಮಾಣಕ್ಕೆ ಸಹಾಯ ಮಾಡಲಿದ್ದು, ಆರ್ಥಿಕ ಸೇರ್ಪಡೆಯತ್ತ ಮುನ್ನಡೆಯುವ ಮಹತ್ವದ ಹೆಜ್ಜೆ ಇದಾಗಿದೆ.