Another big shock for Rajat. Police preparing to open rowdy sheeter; What is the reason,
ರಜತ್ಗೆ ಮತ್ತೊಂದು ಬಿಗ್ ಶಾಕ್. ರೌಡಿಶೀಟರ್ ಓಪನ್ ಮಾಡಲು ಪೊಲೀಸರ ತಯಾರಿ; ಕಾರಣವೇನು,
ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ರವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿರುವ ಕೇಸ್ನಲ್ಲಿ ನಿನ್ನೆ ರಜತ್ ಜೈಲಿನಿಂದ ಬಿಡುಗಡೆಯಾಗಿ ಆಗ ತಾನೆ ಹೊರಗಡೆ ಬಂದಿದ್ದಾರೆ. ಈಗ ಆರೋಪಿ ರಜತ್ ಅವರ ಕ್ರಿಮಿನಲ್ ಹಿನ್ನೆಲೆಯ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ರೀಲ್ಸ್ ಕೇಸ್ನಲ್ಲಿ ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ರಜತ್ ಮತ್ತು ವಿನಯ್ ಗೌಡ ಇವರಿಬ್ಬರನ್ನೂ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಆರೋಪಿ ವಿನಯ್ ರವರು, ಮಚ್ಚು ಹಿಡಿದು ರೀಲ್ಸ್ ಮಾಡಿರುವ ಪ್ರಕರಣದಲ್ಲಿ ಬಿಡುಗಡೆಯಾಗುತ್ತಿದ್ದಂತೆ ಎಲ್ಲರಲ್ಲೂ ಕ್ಷಮೆ ಕೇಳಿದರು. ಈ ಬಗ್ಗೆ ವಿಡಿಯೋ ಮಾಡಿ ಈ ಪ್ರಕರಣದಲ್ಲಿ ಪೊಲೀಸರು ಅವರ ತನಿಖೆಯನ್ನು ಮಾಡಿದ್ದಾರೆ. ನಾನೊಬ್ಬ ಸೆಲೆಬ್ರಿಟಿ ಎಂದು ಟ್ರೀಟ್ ಮಾಡಲಿಲ್ಲ. ನಮ್ಮನ್ನು ಕಾಮನ್ ಮ್ಯಾನ್ ರೀತಿ ನೋಡಿ ವರ್ತಿಸಿದ್ದಾರೆ. ದಯವಿಟ್ಟು ಪೊಲೀಸರ ಮೇಲೆ ಯಾವುದೇ ಆರೋಪವನ್ನು ಮಾಡಬೇಡಿ ಎಂದು ವಿನಯ್ ಅವರು ಅಭಿಮಾನಿಗಳಿಗೆ ಮನವಿ ಮಾಡಿಕೊಂಡರು. ಆದರೆ ರಜತ್ ಅವರು ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಜತ್ಗೆ ಸದ್ಯದಲ್ಲೇ ನೋಟಿಸ್!
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದ ನಂತರ ಆರೋಪಿ ರಜತ್ಗೆ ಮತ್ತೊಂದು ತಲೆನೋವು ಶುರುವಾಗಿದೆ. ಬಸವೇಶ್ವರ ನಗರ ಪೊಲೀಸರು ರೀಲ್ಸ್ ಮಾಡಿದ ರಜತ್ ವಿರುದ್ಧ ರೌಡಿಶೀಟರ್ ಪಟ್ಟಿ ತೆರೆಯಲು ಯೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಆರೋಪಿ ರಜತ್ ಅವರ ಬ್ಯಾಗ್ರೌಂಡ್ ಚೆಕ್ ಮಾಡುತ್ತಿದ್ದಾರೆ. ರಜತ್ ಚಲನವಲನ, ಕ್ರಿಮಿನಲ್ ಹಿಸ್ಟ್ರಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ರಜತ್ ಮೇಲೆ ಯಾಕೆ ರೌಡಿಶೀಟರ್ ಪಟ್ಟಿ ಓಪನ್ ಮಾಡಬಾರದು ಎಂಬ ಬಗ್ಗೆ ಸದ್ಯದಲ್ಲೇ ಪೊಲೀಸರು ರಜತ್ ಗೆ ನೊಟೀಸ್ ನೀಡುವ ಸಾಧ್ಯತೆ ಎದ್ದು ಕಾಣುತಿದೆ.