ಹೊಸ ಬಿಪಿಎಲ್ ರೇಷನ್ ಕಾರ್ಡ್ನ ಅರ್ಜಿದಾರರೇ, ಇಲ್ಲಿ ಗಮನಿಸಿ: ಶೀಘ್ರವೇ ರೇಷನ್ ಕಾರ್ಡ್ ವಿತರಣೆ, ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಸಿಹಿ ಸುದ್ದಿ: ಹೊಸ ಪಡಿತರ ಚೀಟಿಗಾಗಿ ಕಾಯುತ್ತಿರುವವರಿಗೆ ಮುಂಬರುವ ದಿನಗಳು ಸಂತಸ ತರಲಿವೆ. ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ರವರು ಶೀಘ್ರದಲ್ಲೇ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಓದಿ, ತಿಳಿದುಕೊಳ್ಳಿ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪಡಿತರ ಚೀಟಿ ಪ್ರಮುಖವಾಗಿ ತುಂಬಾ ಸಹಾಯವಾಗಿದೆ. ಇದರಿಂದ ಸರ್ಕಾರದ ಅನೇಕ ಸಬ್ಸಿಡಿ ಯೋಜನೆಗಳು ಸೌಲಭ್ಯವಾಗುತ್ತವೆ. ಇತ್ತೀಚಿಗೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಅತಿ ಶೀಘ್ರದಲ್ಲಿ ಅವರು ತಮ್ಮ ಹೊಸ ಪಡಿತರ ಚೀಟಿಯನ್ನು ಪಡೆಯಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್. ಮುನಿಯಪ್ಪ ರವರು ತಿಳಿಸಿದ್ದಾರೆ.
2023ರ ಮಾರ್ಚ್ ಅಂತ್ಯದವರೆಗೆ ಸಲ್ಲಿಸಿದ ಅರ್ಜಿಗಳ ಮರು ಪರಿಶೀಲನೆಗೆ ಆರಂಭ.
ವಿಧಾನಸೌಧದಲ್ಲಿ ಆಹಾರ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವರು 2023ರ ಮಾರ್ಚ್ ತಿಂಗಳ ಒಳಗಡೆ ಸಲ್ಲಿಸಲಾದ ಹೊಸ ಪಡಿತರ ಚೀಟಿಗಳ ಅರ್ಜಿಯನ್ನು ಪರಿಶೀಲಿಸಿ ಹಲವರಿಗೆ ಶೀಘ್ರದಲ್ಲಿ ಪಡಿತರ ಚೀಟಿ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ಮಾಡಿದ್ದಾರೆ. ಸರಕಾರದ ಅನುಮತಿ ದೊರೆತ ನಂತರ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಅನ್ನ ಸುವಿಧಾ ಯೋಜನೆಗೆ ವಿಸ್ತರಣೆ, 3,30,000 ಜನರಿಗೆ ಸದುಪಯೋಗವಾಗಲಿದೆ.
ಈ ಸಂದರ್ಭದಲ್ಲಿ ಸಚಿವರು ಮತ್ತೊಂದು ಮಹತ್ವದ ವಿಷಯವನ್ನು ಹೇಳಿಕೊಂಡಿದ್ದಾರೆ. ಅನ್ನ ಸುವಿಧಾ ಯೋಜನೆಯ ಅಡಿಯಲ್ಲಿ ಆಹಾರ ಧಾನ್ಯವನ್ನು ನೇರವಾಗಿ ಫಲಾನುಭವಿಗಳ ಮನೆಗೆ ತಲುಪಿಸುವ ವ್ಯವಸ್ಥೆ ಆರಂಭವಾಗಲಿದೆ. ಪ್ರಾಥಮಿಕ ಹಂತದಲ್ಲಿ 2 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ವಿಶೇಷವಾಗಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೆ ಈ ವ್ಯವಸ್ಥೆ ಮಾಡಿಕೊಡಲಾಗುವುದು. ಇದರಿಂದ ಒಟ್ಟು 3,30,000 ಫಲಾನುಭವಿಗಳಿಗೆ ಮನೆಮಟ್ಟದ ಆಹಾರ ಧಾನ್ಯ ವಿತರಣೆಯಿಂದ ಪ್ರಯೋಜನವಾಗಲಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಈ ಯೋಜನೆಯಲ್ಲಿ ರೈತರಿಗೆ ಸಿಗಲಿದೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ.
ಹೊಸ ಅರ್ಜಿಗಳ ಆಹ್ವಾನ ಇಲ್ಲದ ಕಾರಣ ಏನು?
ಸದ್ಯ, ಇವಾಗ ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದಿಲ್ಲ. ಈ ನಿರ್ಣಯದ ಹಿಂದೆ ಯೋಜನೆಯ ಪರಿಣಾಮಕಾರಿತ್ವ ಮತ್ತು ಬಜೆಟ್ ವಿತರಣೆ ನಿರ್ವಹಣೆ ಇದಕ್ಕೆ ಕಾರಣವಾಗಿರುತ್ತದೆ, ಆದರೂ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸರ್ಕಾರದಿಂದ ಸ್ಪಂದನೆ ದೊರೆಯುವುದು ಎಂದು ಹೇಳಿದ್ದಾರೆ.
ಈ ಹೊಸ ಕ್ರಮದಿಂದ ಅನೇಕ ಕುಟುಂಬಗಳು ನಿರೀಕ್ಷಿಸುತ್ತಿದ್ದ ಪಡಿತರ ಚೀಟಿಯನ್ನು ಪಡೆದು ತಮ್ಮ ದಿನನಿತ್ಯದ ಜೀವನದಲ್ಲಿ ಸಬ್ಸಿಡಿಯ ಅನೇಕ ಯೋಜನೆಗಳನ್ನು ಬಳಸಿಕೊಳ್ಳುವಂತಾಗುತ್ತದೆ, ಮತ್ತು ಮನೆ ಮನೆಗೆ ಪಡಿತರ ಪದಾರ್ಥಗಳನ್ನು ತಲುಪಿಸುವ ಕ್ರಮವು ಸಹ ಹಿರಿಯ ನಾಗರಿಕರಿಗೆ ಸಮರ್ಥವಾದ ಸೇವೆ ಇದಾಗಿದೆ, ಸರ್ಕಾರದ ಈ ಪ್ರಗತಿಪರ ಕೆಲಸಕ್ಕೆ ಜನಸಾಮಾನ್ಯರಿಗೆ ಹೆಚ್ಚಿನ ನಂಬಿಕೆಯನ್ನು ನೀಡಲಿದೆ.
ಸ್ನೇಹಿತರೆ, ಇದೇ ರೀತಿಯ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.