ರೈಲ್ವೆ ಪರೀಕ್ಷೆ ಆರ್ ಆರ್ ಬಿ ಅಧಿಕಾರಿಗಳಿಗೆ ಪ್ರವೇಶದಲ್ಲಿ ಧಾರ್ಮಿಕ ಸಂಕೇತಗಳನ್ನು ನಿಷದಿಸಬೇಡಿ.

ರೈಲ್ವೆ ಪರೀಕ್ಷೆ ಆರ್ ಆರ್ ಬಿ ಅಧಿಕಾರಿಗಳಿಗೆ ಪ್ರವೇಶದಲ್ಲಿ ಧಾರ್ಮಿಕ ಸಂಕೇತಗಳನ್ನು ನಿಷದಿಸಬೇಡಿ ಎಂದು ಕೇಂದ್ರ ಸಚಿವ ಸೋಮಣ್ಣ ಸೂಚಿಸಿದ್ದಾರೆ.

ರೈಲ್ವೆ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ [ತಾಳಿ] ಮತ್ತು ಇನ್ನಿತರ ಧಾರ್ಮಿಕ ಸಂಕೇತವಾಗಿರುವವಿಗಳನ್ನು ನಿಷೇಧಿಸಬೇಡಿ ಎಂದು ಕೇಂದ್ರ ಸಚಿವ ಸೋಮಣ್ಣನವರು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.

ರೈಲ್ವೆ ನೇಮಕಾತಿ ಮಂಡಳಿ ಆರ್ ಆರ್ ಬಿ ನಡೆಸುವ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಸೂಚಿಸುವ ಮಂಗಳಸೂತ್ರ [ತಾಳಿ] ಜನಿವಾರ ಹಾಗೂ ಇನ್ನಿತರ ಧಾರ್ಮಿಕ ಸಂಕೇತಗಳನ್ನು ಸೂಚಿಸುತ್ತಿರುವವುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಈ ನಿರ್ಣಯಕ್ಕೆ ಹಿಂದೂ ಧರ್ಮದ ಸಂಘಟನೆಗಳು ಆಕ್ರೋಶಗೊಂಡು ವಿರುದ್ಧ ವ್ಯಕ್ತಪಡಿಸಿದವು. ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣನವರು ಪರೀಕ್ಷಾರ್ಥಿಗಳು ಧಾರ್ಮಿಕ ಚಿಹ್ನೆಗಳನ್ನು ಧರಿಸಬಹುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪರೀಕ್ಷಾ ಪ್ರವೇಶ ಪತ್ರದಲ್ಲಿ ಇದ್ದ ನಿಷೇಧಗಳೆನು?

ಪರೀಕ್ಷೆ ಪ್ರವೇಶ ಪತ್ರದಲ್ಲಿ ರೈಲ್ವೆ ಇಲಾಖೆಯು ಮಂಗಳವಾರ ಅಂದರೆ ಜೂನ್ 14 ವಿದೇಶಾಂಗ ನರ್ಸಿಂಗ್ ಸೂಪರಿಂಟೆಂಡೆಂಟ್ ಉದ್ಯೋಗಗಳಿಗಾಗಿ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಗಳಿಗಾಗಿ ನೀಡಲಾದ ಪ್ರವೇಶ ಪತ್ರದ ಎರಡನೇ ನಿಯಮಗಳಲ್ಲಿ ಈ ಕೆಳಗಿನ ನಿಬಂಧನೆ ಇದ್ದವು.

ಪರೀಕ್ಷಾ ಪ್ರವೇಶಕ್ಕೆ ಸೂಚಿಸಲಾದ ನೇಮದ ನಿಬಂಧನೆಗಳೇನು?

ಪರೀಕ್ಷಾ ಕೇಂದ್ರದ ಒಳಗಡೆ ಯಾವುದೇ ಧಾರ್ಮಿಕ ವಸ್ತುಗಳು, ಅಂದರೆ ಮಂಗಳಸೂತ್ರ [ತಾಳಿ], ಜನಿವಾರ, ಕ್ರಾಸ್, ತಾವೀಜು ಇತ್ಯಾದಿ ಮುಂತಾದವುಗಳನ್ನು ಅನುಮತಿಸಲಾಗುವುದಿಲ್ಲ ಎಂದು ಸೂಚಿಸಲಾಗಿತ್ತು.

ಈ ನೇಮವು ವಿವಾದಕ್ಕೆ ಕಾರಣವನುಂಟು ಮಾಡಿದ್ದು, ಹಿಂದೂ ಸಂಘಟನೆಗಳು ಇದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದು ಎಂದು ಟೀಕೆ ಮಾಡಿದವು.

WhatsApp Group Join Now
Telegram Group Join Now       

ಸಂಸದ ಬ್ರಿಜೇಶ ಚೌಟರ್ ಹಸ್ತಕ್ಷೇಪವೇನು?

ಕೇಂದ್ರ ಸಂಸದ ಮತ್ತು ಬಿಜೆಪಿ ನಾಯಕ ಕ್ಯಾಪ್ಟನ್ ಬ್ರಿಜೇಶ್ ರವರು ಈ ವಿಷಯವನ್ನು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ರವರ ಗಮನಕ್ಕೆ ತಂದರು. ಇದಾದ ಬಳಿಕ ಸಚಿವ ಆರ್ ಆರ್ ಬಿ ಅಧಿಕಾರಿಗಳಿಗೆ ಮಂಗಳಸೂತ್ರ, ಜನಿವಾರ ಅಥವಾ ಇತರ ಧಾರ್ಮಿಕ ಸಂಕೇತಗಳನ್ನು ನಿಷೇಧಿಸಬೇಡಿ ಎಂದು ಸೂಚನೆ ನೀಡಿದರು.

ಸಚಿವ ಸೋಮಣ್ಣ ರವರ ಹೇಳಿಕೆ ಏನಾಗಿತ್ತು?

ಸಚಿವ ಸೋಮಣ್ಣನವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಭಾರತ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ, ರೈಲ್ವೆ ಪರೀಕ್ಷೆಗಳಲ್ಲಿ ಧಾರ್ಮಿಕ ಚಿನ್ನೆಯುಳ್ಳವುಗಳನ್ನು ಧರಿಸುವುದನ್ನು ನಿಷೇಧಿಸಿರುವದು ಇದು ಸರಿಯಲ್ಲ. ಅಧಿಕಾರಿಗಳು ಈ ನೇಮವನ್ನು ತಿದ್ದುಪಡಿ ಮಾಡಲು ನಿರ್ದೇಶನ ನೀಡಿದರು.

WhatsApp Group Join Now
Telegram Group Join Now       
ಇದನ್ನೂ ಓದಿಪಿ ಎಮ್ ಕಿಸಾನ್ ಯೋಜನೆ 20ನೇ ಕಂತು ಬಿಡುಗಡೆ ಆಗುವುದರ ಬಗ್ಗೆ ಇಲ್ಲಿದೆ ಮಾಹಿತಿ

ಹಿಂದೂ ಸಂಘಟನೆಗಳ ಪ್ರತಿಕ್ರಿಯೆಗಳೇನು?

ಆರ್ ಆರ್ ಬಿ ಅಧಿಕಾರಿಗಳು ಭದ್ರತಾ ಕಾರಣಗಳಿಂದ ಈ ನಿಯಮವನ್ನು ಮಾಡಲಾಗಿತ್ತು ಎಂದು ವಿವರಿಸಿದ್ದಾರೆ, ಆದರೆ ಸಚಿವ ಸೋಮಣ್ಣನವರು ಸೂಚನೆಯ ನಂತರ ಪರೀಕ್ಷಾ ಕೇಂದ್ರಗಳಲ್ಲಿ ಮಂಗಳಸೂತ್ರ ಮತ್ತು ಜನಿವಾರಗಳನ್ನು ಅನುಮತಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ನಡವಳಿಕೆಯಿಂದ ಸರಕಾರವು ಧಾರ್ಮಿಕ ಸಂವೇದನೆಗಳಿಗೆ ಪ್ರಾಮುಖ್ಯತೆ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ತಮ್ಮ ಧಾರ್ಮಿಕ ಸಂಕೇತಗಳನ್ನು ಧರಿಸಿ ಪರಿಕ್ಷೆಗೆ ಹಾಜರಾಗಬಹುದು ಎಂದು ಖಚಿತಪಡಿಸಿದ್ದಾರೆ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment