Karnataka: ಕರ್ನಾಟಕ ರಾಜ್ಯದ ರೈತರಿಗೆ ಕೃಷಿ ಪೈಪ್ ಪರಿಕರ ಸಾಧನೆಗಳ ಖರೀದಿಗೆ 90% ಸಬ್ಸಿಡಿ ಸಿಗಲಿದೆ.

Karnataka: ರಾಜ್ಯದ ರೈತರಿಗೆ ಕೃಷಿ ಪೈಪ್ ಪರಿಕರ ಸಾಧನೆಗಳ ಖರೀದಿಗೆ 90% ಸಬ್ಸಿಡಿ ಸಿಗಲಿದೆ.

ಕರ್ನಾಟಕ ರಾಜ್ಯದ ರೈತರಿಗೆ ಸುವರ್ಣ ಅವಕಾಶ ರೈತರು ಹಣ್ಣು ತರಕಾರಿ ಬೆಳೆಗಳನ್ನು ಬೆಳೆಯಲು ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ರೈತರಿಗೆ ಸಿಗಲಿದೆ ಸಹಾಯಧನ. ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ಉತ್ತೇಜನ ನೀಡಲು ಮತ್ತು ನೀರಾವರಿ ಸೌಲಭ್ಯವನ್ನು ಸುಲಭವಾಗಿ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ ಇದಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಬೆಳೆಗಾರರಿಗೆ ಶೇಕಡ 90ರಷ್ಟು ಸಹಾಯಧನದೊಂದಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ರೈತರು ನೀರಿನ ಉಳಿತಾಯದೊಂದಿಗೆ ತಮ್ಮ ಕೃಷಿ ಉತ್ಪಾದನೆಯನ್ನು ಉತ್ತಮ ರೀತಿಯಲ್ಲಿ ಹೆಚ್ಚಿಸಿಕೊಳ್ಳಬಹುದು. ಹಾಗಾದರೆ ಈ ಯೋಜನೆಯ ಉದ್ದೇಶಗಳು ಏನೂ? ಅರ್ಜಿಸಲ್ಲಿಸಲು ಬೇಕಾಗುವ ಅರ್ಹತೆಗಳೇನು? ಸಹಾಯಧನ ವಿವರದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಬನ್ನಿ ತಿಳಿದುಕೊಳ್ಳೋಣ.

ಈ ಯೋಜನೆಯು ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಅನುಷ್ಠಾನ ಅನುಷ್ಠಾನಗೊಳ್ಳುತ್ತಿದೆ. ಹೂವಿನ ಬೆಳೆಗಳು ಹಣ್ಣು, ತರಕಾರಿ, ಔಷಧಿ ಹಾಗೂ ಸುಗಂಧ ಸಸ್ಯಗಳು ಮತ್ತು ಪ್ಲಾಂಟೇಶನ್ ಗಳು ಸಾಂಬಾರ್ ಪದಾರ್ಥ ಬೆಳೆಗಳಂತ ತೋಟಗಾರಿಕೆ ಬೆಳೆಗಳಿಗೆ ಈ ಯೋಜನೆ ಅನುಕೂಲವಾಗಿರುತ್ತದೆ. ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವ ರೈತರಿಗೆ, ಅವರಿಗೆ ಸೇರಿದ ಜಮೀನಲ್ಲಿ ನೇರವಾಗಿ ಈ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ ಬಂಡವಾಳ ಸಹಾಯಧನ ದೊರೆಯುತ್ತದೆ.

ಈ ಯೋಜನೆಯ ಉದ್ದೇಶಗಳೇನು?

• ಈ ಯೋಜನೆಯ ಮುಖ್ಯ ಉದ್ದೇಶಗಳೇನೆಂದರೆ, ಕೃಷಿ ಕ್ಷೇತ್ರದಲ್ಲಿ ನೀರಿನ ಬಳಕೆಯನ್ನು ಪರಿಣಾಮಕಾರಿಯಾಗಿ ಉತ್ತಮ ರೀತಿಯಲ್ಲಿ ನಿರ್ವಹಿಸುವುದು.

• ಕೃಷಿ ಉತ್ಪಾದಕತೆ ಹೆಚ್ಚಿಸುವುದು ಮತ್ತು ಬೆಳೆ ಚೆನ್ನಾಗಿ ಬೆಳೆಯುವ ಉದ್ದೇಶವಾಗಿದೆ.

WhatsApp Group Join Now
Telegram Group Join Now       

• ಸಮರ್ಪಕ ನೀರಾವರಿ ವ್ಯವಸ್ಥೆ ಒದಗಿಸುವ ಮೂಲಕ ರೈತರು ಹನಿ ನೀರಾವರಿ ಪದ್ಧತಿಗೆ ತಿರುಗಿಸುವುದು ಇದರ ಉದ್ದೇಶವಾಗಿದೆ.

• ಮೌಲ್ಯವರ್ತಿತ ಬೆಳೆಗಳಿಗೆ ಉತ್ತೇಜನ ನೀಡುವುದು ಇದರ ಮೂಲ ಉದ್ದೇಶವಾಗಿದೆ.

WhatsApp Group Join Now
Telegram Group Join Now       

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೇನು?

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ರೈತರು ಅರ್ಹತಾ ಮಾನದಂಡಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮೊದಲಿಗೆ ತಮ್ಮ ಹೆಸರಿನಲ್ಲಿ ಭೂಮಿ ಇರುವ ರೈತರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪರಿಶಿಷ್ಟ ಜಾತಿ ಅಂದರೆ ಎಸ್ಸಿ ಮತ್ತು ಪರಿಶಿಷ್ಟ ಪಂಗಡ ಅಂದರೆ ಎಷ್ಟು ರೈತರು ತಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ರೈತರು ಅರ್ಜಿ ಸಲ್ಲಿಸಿದ ಬಳಿಕ ಅನುಮೋದನೆಗೊಂಡ ಕಂಪನಿ ಅಥವಾ ಡೀಲರ್ಗಳಿಂದ ಹನಿ ನೀರಾವರಿ ಘಟಕವನ್ನು ಅಳವಡಿಸಿಕೊಳ್ಳಬೇಕು.

ಈ ಯೋಜನೆ ಅಡಿಯಲ್ಲಿ ರೈತರಿಗೆ ಸಿಗುವ ಸಹಾಯಧನವೆಷ್ಟು?

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ರೈತರಿಗೆ ಮೊದಲನೇದಾಗಿ ಎರಡು ಎಕರೆಗೆ ಶೇಕಡ 90ರಷ್ಟು ಸಹಾಯಧನ ದೊರೆಯುತ್ತದೆ.

ಸಾಮಾನ್ಯ ವರ್ಗದ ರೈತರಿಗೆ ಪ್ರಥಮ 2 ಎಕರೆಗೆ ಗೆ ಶೇಕಡ 75 ರಷ್ಟು ಸಹಾಯಧನ ದೊರೆಯುತ್ತದೆ.

2 ಎಕ್ರೆನ ಮೇಲ್ಪಟ್ಟಾದ ಭಾಗ ಅತಿ ಹೆಚ್ಚು ಅಂದರೆ ಐದು ಎಕ್ಟರ್ ವರೆಗೆ ಶೇಕಡಾ 45ರಷ್ಟು ಸಹಾಯಧನ ಬರೆಯುತ್ತದೆ.

ತರಕಾರಿ ಮತ್ತು ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಠ 2 ಎಕರೆ ವರೆಗೆ ಮಾತ್ರ ಸಹಾಯಧನ ದೊರೆಯುತ್ತದೆ. ಒಟ್ಟಿನಲ್ಲಿ ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಒಟ್ಟು ಐದು ಎಕರೆವರೆಗೆ ಸಹಾಯಧನ ದೊರೆಯುತ್ತದೆ.

  ಇದನ್ನು ಓದಿ: ಹಿರಿಯ ನಾಗರಿಕರಿಗೆ ಪೋಸ್ಟ್ ಆಫೀಸ್ನಲ್ಲಿದೆ ಬಂಪರ್ ಆಫರ್ ಈ ಯೋಜನೆಯಲ್ಲಿ ಸಿಗುತ್ತೆ ತಿಂಗಳಿಗೆ 20 ಸಾವಿರ ರೂಪಾಯಿ.

ಯಾವ ಯಾವ ಬೆಳೆಗಳಿಗೆ ಈ ಯೋಜನೆಯ ಅಡಿಯಲ್ಲಿ ಸಹಾಯಧನ ದೊರೆಯುತ್ತದೆ?

ಹಣ್ಣು, ತರಕಾರಿ, ಪ್ಲಾಂಟೇಶನ್ ಬೆಳೆಗಳು, ಔಷಧಿ ಸಸ್ಯಗಳು, ಸಾಂಬರ್ ಪದಾರ್ಥಗಳು, ಸುಗಂಧ ಸಸ್ಯಗಳು ಮತ್ತು ತರಕಾರಿ ಇನ್ನೂ ಮುಂತಾದ ಬೆಳೆಗಳಿಗೆ ಈ ಯೋಜನೆ ಅಡಿಯಲ್ಲಿ ಸಹಾಯಧನ ದೊರೆಯುತ್ತದೆ. ಈ ಯೋಜನೆಯನ್ನು ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ತಾಲೂಕುಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ರೈತರು ಈ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಲು ಯೋಚನೆ ಇದ್ದರೆ ಹೋಬಳಿ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ತೋಟಗಾರಿಕೆ ಇಲಾಖೆಯ ಕಚೇರಿ ಅಥವಾ ಅಧಿಕಾರಿಗಳನ್ನು ಭೇಟಿ ಮಾಡಿ ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ. ಈ ಯೋಜನೆಯ ಸದುಪಯೋಗ ಪಡೆದು ಕೃಷಿಯಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳುವುದು ರೈತರ ಕೈಯಲ್ಲಿದೆ.

ರೈತರಿಗೆ ಸೂಚನೆ: ಈ ಯೋಜನೆಗೆ ಸಂಬಂಧಪಟ್ಟ ಪ್ರಕ್ರಿಯೆ, ಸಹಾಯಧನಾದ ಪ್ರಮಾಣಗಳು ಮತ್ತು ಅರ್ಜಿ ಸಲ್ಲಿಸುವ ಅವಧಿ ಕುರಿತು ಯಾವುದೇ ಬದಲಾವಣೆಗಳ ಮಾಹಿತಿಗಾಗಿ ಅಧಿಕೃತ ತೋಟಗಾರಿಕೆ ಇಲಾಖೆಯ ಮೂಲಗಳಿಂದ ಮಾಹಿತಿ ಪಡೆದು ಅರ್ಜಿ ಸಲ್ಲಿಸುವುದು ಸೂಕ್ತವಾದದ್ದು ಎಂದು ತಿಳಿಸುತ್ತೇವೆ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment