ಗೃಹಲಕ್ಷ್ಮಿಯ ಪೆಂಡಿಂಗ್ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ತಪ್ಪದೇ ಹೀಗೆ ಮಾಡಿ.
ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳಿಗೆ 2000 ನೆರವು ನೀಡಲಾಗುತ್ತಿದೆ. ಇತ್ತೀಚಿಗೆ 19 ಮೇ 2025 ರಂದು ಒಂದು ಕಂತಿನ ಹಣ ಮಾತ್ರ ರಾಜ್ಯದ ಮಹಿಳೆಯರ ಖಾತೆಗೆ ಜಮಾ ಆಗಿದೆ. ಎರಡು ತಿಂಗಳ ಬಾಕಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇದು ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ತೊಂದರೆಯನುಂಟು ಮಾಡಿದೆ. ಕಳೆದ ಆಗಸ್ಟ್ 2025 ರಲ್ಲಿ ರಾಜ್ಯದ 1.25 ಕೋಟಿ ಮಹಿಳೆಯರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ, ಪಡೆಯುತ್ತಾ ಇದ್ದಾರೆ. ಇದುವರೆಗೆ ಸರ್ಕಾರ 50,000 ಕೋಟಿ ಧನ ಸಹಾಯವನ್ನು ವಿತರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಹಣದ ಪಾವತಿಯಲ್ಲಿ ನಿಯಮಿತತೆ ಕೊರತೆಯು ಮಹಿಳೆಯರಿಗೆ ಕಿರಿಕಿರಿಯನುಂಟುಮಾಡಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ 50,000 ಕೋಟಿ ವಿತರಣೆ – ಇದರ ಬಗ್ಗೆ ಮಾಹಿತಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮೂರು ತಿಂಗಳಿಂದ ಇರುವ ಬಾಕಿ ಹಣವನ್ನು ಒಂದೇ ಸಾರಿಗೆ ಜಮಾ ಮಾಡಲು ಮುಖ್ಯಮಂತ್ರಿಗಳಿಂದ ಅನುಮತಿ ಪಡೆದಿದ್ದಾರೆ ಎಂದು ಹೇಳಿದರು. ಉತ್ತರಿಸುವುದಾಗಿ ಭರವಸೆ ನೀಡಿದರು, ಆದರೆ ಪ್ರಸ್ತುತ ಒಂದೇ ಕಂತಿನ ಹಣ ಮಾತ್ರ ಫಲಾನುಭವಿಗಳ ಖಾತೆಗೆ ಬಿಡುಗಡೆ ಆಗಿದೆ.
ಕರ್ನಾಟಕ ಸರ್ಕಾರ ಆಗಸ್ಟ್ 2025 ರಿಂದ ರಾಜ್ಯದ ಸುಮಾರು 1.25 ಕೋಟಿ ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿ ನೆರವು ನೀಡುತ್ತಿದೆ. ಇದುವರೆಗೆ ಈ ಯೋಜನೆ ಅಡಿಯಲ್ಲಿ 50,000 ಕೋಟಿಗಳಷ್ಟು ಧನ ಸಹಾಯವನ್ನು ವಿತರಿಸಲಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳಿವೆ. ಆದರೆ ಈ ನೆರವು ನಿಗದಿತ ಸಮಯದಲ್ಲಿ ಫಲಾನುಭವಿಗಳ ಖಾತೆಗೆ ತಲುಪದೆ ಇರುವುದು ಪ್ರಮುಖ ಸವಾಲಾಗಿ ಕಾಣುತ್ತಿದೆ. ಸಚಿವೆ ಹೆಬ್ಬಲ್ಕರ್ ಅವರು ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹಣದ ವಿತರಣೆಯಲ್ಲಿ ಉಂಟಾಗುವ ವಿಳಂಬಗಳಿಗೆ ಗಳಿಗೆ ತಾಂತ್ರಿಕ ಸಮಸ್ಯೆಗಳು ಹಾಗೂ ಆರ್ಥಿಕ ನಿರ್ವಹಣೆಯ ಸವಾಲುಗಳು ಕಾರಣವಾಗಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಈ ವರ್ಷದ ಉಳಿದ ಕಂತುಗಳನ್ನು ತ್ವರಿತವಾಗಿ, ಆದಷ್ಟು ಬೇಗ ಬಿಡುಗಡೆ ಮಾಡಲು ಸಂಬಂಧಿತ ಅಧಿಕಾರಿಗಳು ಇಲಾಖೆಗಳು ಕಾರ್ಯ ನಿರತರಾಗಿದ್ದಾರೆ.
ಇದನ್ನು ಓದಿ: ಕನ್ನಡದ ಕಿರೀಟದ ಕಂಠಿ: ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮಿಷ್ತಾಕ್
ಹಣ ಬಾಕಿ ಇದ್ದರೆ ಈ ಕ್ರಮವನ್ನು ತೆಗೆದುಕೊಳ್ಳಿ.
e-KYC ಮತ್ತು ಆಧಾರ್ ಲಿಂಕ್ ಮಾಡಿಸಿಕೊಳ್ಳಿ.
ಎನ್ ಪಿ ಸಿ ಐ ನಿಯಮಗಳ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಇ-ಕೆವೈಸಿ ಮತ್ತು ಆಧಾರ್ ಲಿಂಕ್ ಅಗತ್ಯವಿದೆ. ಇದನ್ನು ಗ್ರಾಮ್ ಒನ್ ಕೇಂದ್ರಗಳು ಅಥವಾ ಬ್ಯಾಂಕ್ ಶಾಖೆಗಳಲ್ಲಿ ಪೂರ್ಣಗೊಳಿಸಬಹುದು.
ರೇಷನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಿಸಿ.
ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪರಸ್ಪರ ಲಿಂಕ್ ಆಗಿಲ್ಲದಿದ್ದರೆ ಹಣ ಜಮಾ ಆಗುವುದಿಲ್ಲ. ಇದನ್ನು ನಿಮ್ಮ ಸಮೀಪದ ಸಾರ್ವಜನಿಕ ವಿತರಣಾ ಕೇಂದ್ರಗಳಲ್ಲಿ ಪೂರ್ಣಗೊಳಿಸಬೇಕು.
ಬ್ಯಾಂಕ್ ಪಾಸ್ ಪಾಸ್ಬುಕ್ಕನ್ನು ಪರಿಶೀಲಿಸಿ.
ಎಸ್ಎಂಎಸ್ ಅಲರ್ಟ್ ಬರದೆ ಇರಬಹುದು. ಹಣ ಖಾತೆಗೆ ಬಂದಿರಬಹುದು. ಆದ್ದರಿಂದ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅನ್ನು ಬ್ಯಾಲೆನ್ಸ್ ಅನ್ನು ಎಟಿಎಂ ಅಥವಾ ಬ್ಯಾಂಕಿಗೆ ಹೋಗಿ ಬ್ಯಾಲೆನ್ಸ್ ಅನ್ನು ಚೆಕ್ ಮಾಡಿ.
ಸಹಾಯಕ್ಕಾಗಿ ಅಧಿಕಾರಿಗಳನ್ನು ಸಂಪರ್ಕಿಸಿ.
ಹಣ ಬಾಕಿ ಇದ್ದರೆ ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಅಥವಾ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ದೂರು ಕೊಡಿ.
ಹಣದ ವಿಳಂಬಕ್ಕೆ ಕಾರಣಗಳೇನು?
• ಆರ್ಥಿಕ ನಿರ್ಬಂಧನೆಗಳು.
• ತಾಂತ್ರಿಕ ಸಮಸ್ಯೆಗಳು.
• e-KYC ಅಥವಾ ಆಧಾರ್ ಲಿಂಕ್ ಆಗದಿರುವುದು.
• ಬ್ಯಾಂಕ್ ಖಾತೆ ವಿವರಗಳಲ್ಲಿ ತಪ್ಪು ಇರುವದು.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ತಕ್ಷಣವೇ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.