Here are the new guidelines on what to do if you haven’t received your Annabhagya payment yet.
ಅನ್ನಭಾಗ್ಯ ಪೇಮೆಂಟ್ ನಿಮಗೆ ಇನ್ನು ಬಂದಿಲ್ಲ ಅಂದರೆ ಏನು ಮಾಡುವುದು ಇಲ್ಲಿದೆ ಹೊಸ ಮಾರ್ಗಸೂಚಿ.
ನಾಡಿನ ಸಮಸ್ತ ಜನತೆಗೆ ನಮಸ್ಕಾರ. ಇವತ್ತಿನ ವರದಿಯಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. ಈಗಾಗಲೇ ಹಣ ಬಿಡುಗಡೆ ಆಗಿದ್ದು ಅದು ನಿಮ್ಮ ಖಾತೆಗೆ ಬಂದಿಲ್ಲವಾದರೆ ಮುಂದಿನ ತಿಂಗಳು ಹಣ ಪಡೆಯಲು ಏನು ಮಾಡಬೇಕು ಎಂಬುದು ತಿಳಿದುಕೊಳ್ಳೋಣ ಬನ್ನಿ.
ಅಕ್ಕಿ ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲಿಗೆ ಪಲಾನುಬವಿಗಳ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ನಿರ್ಧಾರ ಮಾಡಿತ್ತು. ಈ ಯೋಜನೆಯನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮಕ್ಕೆ ಚಾಲನೆ ನೀಡಿ, ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಿದರು. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಅಂತ ಅಂತವಾಗಿ ಹಣ ವರ್ಗಾವಣೆ ಆಗುತ್ತದೆ, ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆ ಅಥವಾ ಇಲ್ಲವಾ ಎಷ್ಟು ಹಣ ಹಾಗಿದೆ ಯಾರ ಅಕೌಂಟಿಗೆ ಹಣ ಕ್ರೆಡಿಟ್ ಆಗಿದೆ ಎಂಬುದನ್ನು ತಿಳಿಯಲು ಸರ್ಕಾರ ಒಂದು ಅಧಿಕೃತ ಜಾಲತಾಣ ವೆಬ್ಸೈಟ್ ಅನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿದೆ.
ಒಂದು ಕೋಟಿ ಕುಟುಂಬಕ್ಕೆ 566 ಕೋಟಿ ಹಣ ವರ್ಗಾವಣೆ.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇದುವರೆಗೆ ಒಂದು ಕೋಟಿ ಕುಟುಂಬಗಳಿಗೆ 56 ಕೋಟಿ ಹಣ ಫಲಾನುಭವಿಗಳ ಅಕೌಂಟಿಗೆ ವರ್ಗಾವಣೆ ಮಾಡಲಾಗಿದೆ, ಅಂತ ಹಾರ ಸಚಿವ K H ಮುನಿಯಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿ, ಅಂದರೆ, ರೇಷನ್ ಕಾರ್ಡ್ ಕುಟುಂಬಗಳಲ್ಲಿ 4.42 ಕೋಟಿ ಫಲಾನುಭವಿಗಳು ಇದ್ದಾರೆ. ಇದುವರೆಗೆ ಒಂದು ಕೋಟಿ ಕುಟುಂಬಗಳಿಗೆ 566 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ, ಆದುದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ಮಾಹಿತಿ ನೀಡಿದರು.
ಹಣ ಬಿಡುಗಡೆ ಆಗಿದೆ, ಆದರೆ ನಿಮ್ಮ ಅಕೌಂಟಿಗೆ ದುಡ್ಡು ಬಂದಿಲ್ಲವಾ? ಹಾಗಾದರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
28 ಲಕ್ಷದ ಕುಟುಂಬಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳು ಪಡಿತರ ಪಡೆದಿಲ್ಲ. 5,32,349 ಫಲಾನುಭವಿಗಳು ಮೂರು ಸದಸ್ಯರಿಗಿಂತ ಕಡಿಮೆ ಸದಸ್ಯರು ಇದ್ದಾರೆ; 3,40,425 ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲ; 19,27,225 ಪಡಿತರ ಚೀಟಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ; ಮತ್ತು ಅನರ್ಹ ಪಡಿತರ ಚೀಟಿ ಆಗಿವೆ, ಇವರಿಗೆ ಹಣ ಖಾತೆಗೆ ಹಾಕಿಲ್ಲ, ಅಂತ ಮಾಹಿತಿ ನೀಡಿದರು. ಇನ್ನೂ ಕೆಲವರ ಖಾತೆಗೆ ಮಾತ್ರ ಈ ಹಣ ಬಂದಿಲ್ಲ. ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ – ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಲಿಂಕ್ ಆಗಿದ್ದರು ಸಹಾ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಎಂದು ಆತಂಕ ಕೆಲವರಿಗೆ ಸೃಷ್ಟಿಯಾಗುತ್ತದೆ.
ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಮೂಲಕ ಅನ್ನ ಭಾಗ್ಯದ ಹಣ ಸ್ಥಿತಿ ಏನಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ಕೊಡಲಾಗಿದೆ. ದಯವಿಟ್ಟು ಒಮ್ಮೆ ನೋಡಿ. ಅಕಸ್ಮಾತ್ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ, ಬ್ಯಾಂಕಿಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಅಕೌಂಟ್ ಖಾತೆಗೆ ಲಿಂಕ್ ಮಾಡಿಕೊಳ್ಳಿ. ನಿಮ್ಮ ಬ್ಯಾಂಕ್ ಖಾತೆ ಅಥವಾ ಆಧಾರ್ ಕಾರ್ಡಿಗೆ ನಿಮ್ಮ ಅಕೌಂಟಿಗೆ ದುಡ್ಡು ಬಾರದೆ ಇದ್ದರೆ, ನಿಮ್ಮ ರೇಷನ್ ಕಾರ್ಡ್ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು, ಅಂದರೆ ಇ ಇಕೆ.ವೈ.ಸಿ ಆಗಿರಬೇಕು. ಅದರಿಂದ ನಿಮ್ಮ ಆಹಾರ ಇಲಾಖೆಯ ಸೇವಾ ಕೇಂದ್ರಕ್ಕೆ ಹೋಗಿ ನಿಮ್ಮ ರೇಷನ್ ಕಾರ್ಡ್ ಮತ್ತು ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿ.
ಸ್ನೇಹಿತರೆ, ನಿಮಗೆ ನೆನಪಿರಲಿ, ಸರ್ಕಾರ ಈ ಮುಂಚೆ ತಿಳಿಸಿರುವಂತೆ ನಿಮ್ಮ ಬಿಪಿಎಲ್ ಹಾಗೂ ಅಂತೋದಯ ರೇಷನ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಇರುವ ಆಧಾರ್ ಜೋಡಣೆ ಆಗಿ ಆಗದೆ ಇರುವ ಪಕ್ಷದಲ್ಲಿ ನಿಮಗೆ ದುಡ್ಡು ಬರಲು ಸಾಧ್ಯವೇ ಇಲ್ಲ. ಆದರಿಂದ, ಅನ್ನಭಾಗ್ಯ ಸ್ಟೇಟಸ್ ತಿಳಿದುಕೊಂಡು, ಇವಾಗಲೆ ಏನಾದರೂ (updates) ಮಾಡಿಸುವುದೆನಾದರು ಇದ್ದರೆ ಅಥವಾ ಲಿಂಕ್ ಮಾಡುವುದು ಬಾಕಿ ಉಳಿದಿದ್ದರೆ, ಇವತ್ತೇ ಎಲ್ಲಾ ಕೆಲಸವನ್ನು ಮುಗಿಸಿಕೊಂಡು, ಮುಂದಿನ ತಿಂಗಳು ಹಣವನ್ನು ನೀವು ಪಡೆಯಬಹುದು.
ಅನ್ನ ಭಾಗ್ಯದ ಹಣದ ಸ್ಥಿತಿಯನ್ನು ಹೇಗೆ check ಮಾಡುವುದು ಎಂಬುದನ್ನು ಇಲ್ಲಿ ಪೂರ್ತಿಯಾಗಿ ಕೊಡಲಾಗಿದೆ ಓದಿ ತಿಳಿದುಕೊಳ್ಳಿ.
ಅನ್ನಭಾಗ್ಯ, ಈ ಯೋಜನೆಯ ಹಣ ಪಡೆಯಲು ಈ ಮೂರು ಕೆಲಸಗಳನ್ನು ಕಡ್ಡಾಯವಾಗಿ ಮಾಡಲೇಬೇಕು.
• ಪಡಿತರ ಚೀಟಿಯಲ್ಲಿ ಇರುವಂತಹ ಮುಖ್ಯಸ್ಥಾನ ಹೆಸರಲ್ಲಿ ಅಂದರೆ ಯಜಮಾನಿಯ ಬ್ಯಾಂಕ್ ಅಕೌಂಟ್ ಇರಬೇಕು.
• ನಿಮ್ಮ ಅಕೌಂಟಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಲೇಬೇಕು.
• ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು.
ಅನ್ನ ಭಾಗ್ಯದ ದುಡ್ಡು ಜಮಾ ಆಗಿದೆ ಎಂಬುದನ್ನು ನೋಡುವ ವಿಧಾನ:
ಮೊದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಾಲತಾಣಕ್ಕೆ, ಅಂದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ನಂತರ, ಮುಖಪುಟದ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಬೇಕು. ಆನಂತರ, ಮುಖಪುಟ ತೆರೆಯುತ್ತದೆ. ಅದರಲ್ಲಿ e-States ಅನ್ನು ಆಯ್ಕೆಯನ್ನು ಮಾಡಬೇಕು, ನಂತರ DBT ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.
ಆಮೇಲೆ ನಿಮ್ಮ ಜಿಲ್ಲೆಯ ಮೇಲೆ ಅಂದರೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಮುಂದಿನ ಭಾಗ ಕೆಳಗಿನ ಭಾಗದಲ್ಲಿರುವ DBT ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಮುಂದುವರೆದು ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ, ನಂತರ ಗೊ ಎಂಬುದನ್ನು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಮತ್ತು ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿ ನೀವು ಇಲ್ಲಿ ನೋಡಬಹುದು. ಹೀಗೆ ನೀವು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿನ ಹಣವನ್ನು ನಿಮಗೆ ಜಮಾ ಆಗಿದೆಯಾ ಅಥವಾ ಅದರ ಸ್ಥಿತಿ ಹೇಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.
ಹಣ ಬಂದ ಕೂಡಲೇ ಮೆಸೇಜ್ ಕೂಡ ಬರುತ್ತದೆ.
ಅನ್ನಭಾಗ್ಯ ಯೋಜನೆಯ ದುಡ್ಡು ನಿಮ್ಮ ಖಾತೆಗೆ ಜಮಾ ಆಗಿದ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇರುವಂತಹ ಮೊಬೈಲ್ ಸಂಖ್ಯೆಗೆ ಹಣ ಜಮಾ ಆಗಿರುವುದರ ಬಗ್ಗೆ ಮೆಸೇಜ್ ಸಹ ಬರುತ್ತೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಮೈಸೂರು ಜಿಲ್ಲೆಯ ಜನರಿಗೆ ಅನ್ನ ಭಾಗ್ಯದ ಯೋಜನೆಯ ಹಣ ದೊರೆತಿದೆ.
ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ Kannadatrending.com ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ.