IPL 2025: Bowlers need psychologists: R Ashwin
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಐದು ಆಟಗಳಲ್ಲಿ 6 ತಂಡಗಳು ಇನ್ನೂರಕ್ಕೂ ಹೆಚ್ಚು ರನ್ ಕಲೆಹಾಕಿವೆ. ಅಂದರೆ ಈ ಸಾರಿ ಐಪಿಎಲ್ನಲ್ಲೂ ಬ್ಯಾಟ್ಸ್ಮನ್ಗಳ ಅಬ್ಬರ ಜೋರಾಗಿದೆ. ಟಿ ಟ್ವೆಂಟಿ ಕ್ರಿಕೆಟ್ ಪೂರ್ತಿಯಾಗಿ ಬ್ಯಾಟ್ಸ್ಮನ್ಗಳ ಗಳ ಆಟವಾಗಿ ಪರವಾಗಿ ಮಾರ್ಪಡುತ್ತದೆ ಎಂದು ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದರು.
ರವಿಚಂದ್ರನ್ ಅಶ್ವಿನ್, ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್, ಇವರು ಕ್ರಿಕೆಟ್ಗೆ ಸಂಬಂಧಪಡುವ ಏನಾದರೂ ವಿಷಯ ಹೇಳಿದರೂ ಅದು ಚರ್ಚೆ ಆಗುತ್ತದೆ. ಈಗ ಐಪಿಎಲ್ ಬಗ್ಗೆ ಹೇಳಿರುವ ಮಾತೋಂದು ಚರ್ಚೆಗೆ ಗುರಿಯಾಗಿದೆ. ಚರ್ಚೆಗೆ ಚರ್ಚೆಗೀಡಾಗಲು ಮುಖ್ಯ ಕಾರಣ, ಬೌಲರ್ಗಳ ಮಾನಸಿಕ ಸ್ಥಿತಿ ಬಗ್ಗೆ ಮಾತನಾಡಿರುವುದು.
.
ಐಪಿಎಲ್ 2025ರ ಆರಂಭದಲ್ಲೇ ಬ್ಯಾಟರ್ಗಳ ಅಬ್ಬರ ತುಂಬ ಜೋರಾಗಿದೆ. ಈ ವಿಷಯ ಪ್ರಸ್ತಾಪಿಸಿರುವ ಅಶ್ವಿನ್, ಐಪಿಎಲ್ನಲ್ಲಿ ಬ್ಯಾಟಿಂಗ್ ನಡೆಯುತ್ತಿರುವ ರೀತಿ ನೋಡಿದರೆ, ಪ್ರತಿಯೊಬ್ಬ ಬೌಲರ್ಗಳು ವೈಯಕ್ತಿಕ ಮನಃಶಾಸ್ತ್ರಜ್ಞರನ್ನು ನೇಮಿಸಿಕೊಳ್ಳಬೇಕಾಗಿ ಬರಬಹುದು ಎಂದು ಹೇಳಿದ್ದಾರೆ.
ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳು ಸ್ಫೋಟಕ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಟಿ ಟ್ವೆಂಟಿ ಲೀಗ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವಾರು ರೀತಿಯ ನಿಯಮಗಳು ಬಂದಿವೆ. ಆದರೆ ಈ ನಿಯಮಗಳೆಲ್ಲವು ಬ್ಯಾಟ್ಸ್ಮನ್ಗಳಿಗೆ ಸಹಾಯಕವಾಗುತಿವೆ. ವಿಶೇಷವಾಗಿ ಐಪಿಎಲ್ನಲ್ಲಿ, ಕಳೆದ ಸೀಸನ್ ಇಂದ ಸ್ಕೋರ್ಗಳ ಸುರಿಮಳೆ ಆಗಿದೆ.
ಐಪಿಎಲ್ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 277 ಮತ್ತು 287 ರನ್ ಗಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ ಸೀಸನ್ನ ಎರಡನೇ ಆಟದಲ್ಲಿ ಎಸ್ಆರ್ಹೆಚ್ ತಂಡ 286 ರನ್ ಗಳಿಸುವ ಮೂಲಕ ಮತ್ತೊಮ್ಮೆ ಅಚ್ಚರಿಗೊಳಿಸಿದೆ. ಇವಾಗ ಐಪಿಎಲ್ನಲ್ಲಿ 300 ರನ್ಗಳ ಗುರಿ ಮುಟ್ಟುವ ಟಿಮ್ ಯಾವುದು ಎಂಬುದರ ಚರ್ಚೆ ನಡೆಯುತ್ತಿದೆ. ಆಕಡೆ
ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್ಗಳು, ನಮ್ಮ ಮುಂದಿನ ಗುರಿ 300 ರನ್ಗಳು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅದನ್ನು ಸಾಧಿಸಿ ತೋರಿಸುವ ಉತ್ಸಾಹದಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಸರತಿ ಐಪಿಎಲ್ನ ಮೊದಲ ಪಂದ್ಯದಲ್ಲೇ 286 ರನ್ ದೂಳೆಬ್ಬಿಸಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ಬೌಲರ್ಗಳು.
ಬೌಲರ್ಗಳ ಗಳ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ:
ಐಪಿಎಲ್ ಸೇರಿದಂತೆ ಟಿ ಟ್ವೆಂಟಿ ಕ್ರಿಕೆಟ್ನಲ್ಲಿಯು ಕೂಡ ಬ್ಯಾಟ್ಸ್ಮನ್ ಗಳ ಪರಾಕ್ರಮ ಬೌಲರ್ಗಳ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿಯಾಗುತದೆ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನಡೆದ ಸಂದರ್ಶನದಲ್ಲಿ ಮಾತನಾಡಿದ ಅಶ್ವಿನ್, ಟಿ ಟ್ವೆಂಟಿ ಕ್ರಿಕೆಟ್ ಬದಲಾಗಿರುವ ರೀತಿಯ ಬಗ್ಗೆ ಮಾತನಾಡಲು ನಾನು ಬಯಸುತ್ತೇನೆ. ಏಕೆಂದರೆ ಬೌಲರ್ಗಳಿಗೆ ರನ್ಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇದು ಅವರನ್ನು ಮಾನಸಿಕವಾಗಿ ಒತ್ತಡಕ್ಕೀಡು ಮಾಡುತ್ತಿದೆ.
ಇಂತಹ ಒತ್ತಡಗಳಿಂದಾಗಿ ಬೌಲರ್ಗಳಿಗೆ ಶೀಘ್ರದಲ್ಲಿಯೇ ವೈಯಕ್ತಿಕ ಮನಃಶಾಸ್ತ್ರಜ್ಞರು ಬೇಕಾಗಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಈಗ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಬೌಲಿಂಗ್ ಅಕ್ಷರಶಃ ಸಾದ್ಯವಿಲ್ಲ. ಕೆಲವು ಪಿಚ್ಗಳು ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿ ಬದಲಾಗಿವೆ. ಅದ್ದರಿಂದ ಬೌಲರ್ಗಳು ನಿರಾಶೆ, ನಿಷ್ಪ್ರಯೋಜಕರಾಗಿದ್ದಾರೆ. ಇದು ನನ್ನ ಅನಿಸಿಕೆ. ಹಾಗಾಗಿ ಬೌಲರ್ಗಳ ಪಾಲಿಗೆ ಮನಃಶಾಸ್ತ್ರಜ್ಞರ ಅಗತ್ಯವಿದೆ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ. ಸೌತ್ ಆಫ್ರಿಕಾ ಕಗಿಸೊ ರಬಾಡ ಕೂಡ
ಇದಕ್ಕೂ ಮುನ್ನ, ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಐಪಿಎಲ್ನಲ್ಲಿ ಬಳಸಲಾಗುತ್ತಿರುವ ಫ್ಲಾಟ್ ಪಿಚ್ಗಳ ಬಗ್ಗೆ ಧ್ವನಿಯೆತ್ತಿದ್ದರು. ಕೇವಲ ಬ್ಯಾಟ್ಸ್ಮನ್ ಗಳಿಗೆ ಸಹಾಯ ಆಗುವ ಪಿಚ್ ನಿರ್ಮಿಸಿ ಆಡಿಸಿದರೆ ಹೇಗೆ, ರಬಾಡ ರವರು ಕ್ರಿಕೆಟ್ ಎಂದು ಕರೆಯುವದಿಲ್ಲ. ಬದಲಾಗಿ ಬ್ಯಾಟಿಂಗ್ ಎನ್ನಬೇಕಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದರು. ಈಗ ರವಿಚಂದ್ರನ್ ಅಶ್ವಿನ್ ಕೂಡ ಟಿ ಟ್ವೆಂಟಿ ಕ್ರಿಕೆಟ್ ಬ್ಯಾಟಿಂಗ್ ಪರವಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.