Karnataka Band:ಇಂದು ಮರಾಠಿ ಪುಂಡಾಟದ ವಿರುದ್ಧ ಕನ್ನಡ ಪರ ಸಂಘಟನೆಗಳ ಹೋರಾಟ,ಇಂದು ಮಾರ್ಚ್ 22 ಬಂದ್ಗೆ ಕರೆ ನಿಡಲಾಗಿದೆ.
ಕರ್ನಾಟಕ ಮಾರ್ಚ್ 21: ಬೆಳಗಾವಿ ಗಡಿಯಲ್ಲಿ ಮರಾಠಿ ಸಂಘಟನೆಗಳ ಅಹಿತಕರ ಚಟುವಟಿಕೆಗಳನ್ನು ಖಂಡಿಸಿ ಮತ್ತು ರಾಜ್ಯದ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸಲು ಕನ್ನಡ ಪರ ಸಂಘಟನೆಗಳು ಮಾರ್ಚ್ 22ರಂದು ಅಂದರೆ ಇಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಬಂದ್ ಕೆಲವು ಜಿಲ್ಲೆಗಳಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಬೆಂಬಲ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರ ಮತ್ತು ಸಾರ್ವಜನಿಕ ಸೇವೆಗಳ ಕಾರ್ಯನಿರ್ವಹಣೆ ಇಂದು ಹೇಗಿರಲಿದೆ ಎಂಬುದರ ಕುರಿತಾದ ಎಲ್ಲಾ ಮಾಹಿತಿ ಇಲ್ಲಿ ಕೊಡಲಾಗಿದೆ.
ಬಂದ್ಗೆ ಕೈ ಜೋಡಿಸುವವರು
- ಓಲಾ, ಉಬರ್, ಏರ್ಪೋರ್ಟ್ ಟ್ಯಾಕ್ಸಿ ಸೇವೆಗಳು
- ಆಟೋ ಚಾಲಕರ ಸಂಘಟನೆಗಳು
- ಖಾಸಗಿ ಸಾರಿಗೆ ಒಕ್ಕೂಟ
- ಎಪಿಎಂಸಿ ಸಂಘಟನೆ
- ಕಾರ್ಮಿಕ ಪರಿಷತ್
ಯಾವ ಯಾವ ಸೇವೆಗಳು ಬಂದ್ ಗೆ ಬೆಂಬಲ ನೀಡಿವೆ?
ಥಿಯೇಟರ್ – ಬೆಳಗಿನ ಪ್ರದರ್ಶನ ಮಾತ್ರ ಸ್ಥಗಿತ
ಬೀದಿ ವ್ಯಾಪಾರ – ನೈತಿಕ ಬೆಂಬಲ, ಆದರೆ ಸಾಮಾನ್ಯ ವ್ಯಾಪಾರ ನಡೆಯಲಿದೆ
ಖಾಸಗಿ ಸಾರಿಗೆ – ಶಾಲಾ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸಾರಿಗೆ ಸೇವೆಗಳು ಸ್ಥಗಿತ.
ಯಾವ ಜಿಲ್ಲೆಗಳಲ್ಲಿ ಬಂದ್ ಪ್ರಭಾವ ಬರಲಿದೆ?
ಚಿಕ್ಕಮಗಳೂರು – 50ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ವ್ಯಾಪಕ ಬಂದ್ ನಿರೀಕ್ಷೆ ಇದೆ.
ಚಿತ್ರದುರ್ಗ – ಕನ್ನಡ ಪರ ಸಂಘಟನೆಗಳು ಬಂದ್ಗೆ ಕೈ ಜೋಡಿಸಿವೆ.
ಯಾವ ಜಿಲ್ಲೆಗಳಲ್ಲಿ ಬೆಂಬಲ ಇರುವುದಿಲ್ಲ?
- ಕೋಲಾರ
- ದಕ್ಷಿಣ ಕನ್ನಡ
- ಹುಬ್ಬಳ್ಳಿ
- ಕಲಬುರಗಿ
- ಕೊಪ್ಪಳ
ಬಂದ್ ಸಂದರ್ಭದಲ್ಲಿ ಯಾವ ಯಾವ ಸೇವೆಗಳು ನಡೆಯಲಿವೆ?
ಆಸ್ಪತ್ರೆ, ವೈದ್ಯಕೀಯ ಸೇವೆಗಳು, ಔಷಧೀಯ ಅಂಗಡಿಗಳು
ಹಾಲು ಮತ್ತು ದಿನನಿತ್ಯದ ಅವಶ್ಯಕ ವಸ್ತುಗಳ ಪೂರೈಕೆ
ನಮ್ಮ ಮೆಟ್ರೋ ಸೇವೆ (ದಿನನಿತ್ಯದಂತೆ ಕಾರ್ಯನಿರ್ವಹಿಸಲಿದೆ)
ಶಾಲಾ ಕಾಲೇಜುಗಳು ಮತ್ತು ಪರೀಕ್ಷೆಗಳ ಸ್ಥಿತಿ
ಮಾರ್ಚ್ 22 ಇಂದು SSLC ಪರೀಕ್ಷೆ ಇರುವುದಿಲ್ಲ, ಆದ್ದರಿಂದ SSLC ತರಗತಿ ವಿದ್ಯಾರ್ಥಿಗಳಿಗೆ ಯಾವ ಸಮಸ್ಯೆಯು ಇಲ್ಲ.
1ರಿಂದ 9ನೇ ತರಗತಿ ವರೆಗಿನ ಕೆಲವು ತರಗತಿಗಳ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಮುಂದೂಡಬೇಕ ಅಥವಾ ನಿರ್ಧಾರ ಏನಾಗಬೇಕು ಎಂಬುವದರ ಬಗ್ಗೆ ಸರ್ಕಾರ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆ ಇದೆ.
ಇಂದು ಸಾರ್ವಜನಿಕ ಸಾರಿಗೆ:
ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ, KSRTC, BMTC ನೌಕರರು ಬಂದ್ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಬಸ್ ಸಂಚಾರ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ.
ನಿಮ್ಮ ಪ್ರದೇಶದಲ್ಲಿ ಬಂದ್ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ನಿಗಾ ಇರಿಸಿ ಮತ್ತು ಪ್ರಯಾಣದ ಯೋಜನೆಗಳನ್ನು ಬದಲಿಸಿಕೊಳ್ಳಿ ಮಾಡಿಕೊಳ್ಳಿ.