ಆಪರೇಷನ್​ ಸಿಂಧೂರ, ಉಗ್ರ ಸಂಹಾರ: ರಾಜ್ಯದ ಹಲವೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ,

ಆಪರೇಷನ್​ ಸಿಂಧೂರ, ಉಗ್ರ ಸಂಹಾರ: ರಾಜ್ಯದ ಹಲವೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ,

ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಾಕ್​ ವಿರುದ್ಧ ಆಪರೇಷನ್ ಸಿಂಧೂರ ದಾಳಿಯನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಮಾಡಿತು.

ಬೆಳಗಾವಿ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತದ ಸೇನೆ ದಾಳಿ ಮಾಡಿ ಉಗ್ರರನ್ನು ಸಂಹಾರ ಮಾಡಿರುವ ಹಿನ್ನೆಲೆ, ಮಾಜಿ ಸೈನಿಕರ ಸಂಘ, ಬಿಜೆಪಿ ಯುವ ಮೋರ್ಚಾ ಸೇರಿ ವಿವಿಧ ಸಂಘಟನೆಗಳು ಬೆಳಗಾವಿಯಲ್ಲಿ ವಿಜಯೋತ್ಸವದ ಸಂಭ್ರಮವನ್ನು ಆಚರಿಸಲಾಯಿತು.

ಬೆಳಗಾವಿ ಜಿ.ಪಂ ಕಚೇರಿ ಮುಂದೆ ಮಾಜಿ ಸೈನಿಕರು, ಸ್ಥಳಿಯರು ಕೈಯಲ್ಲಿ ಭಾರತದ ಬಾವುಟ ಹಿಡಿದು ಸಿಹಿ ಹಂಚಿ ಸಂಭ್ರಮಿಸಿದರು, ನಗರದ ಸಂಭಾಜಿ ಮಹಾರಾಜ ವೃತ್ತದಲ್ಲಿ ಬಿಜೆಪಿ‌ ಯುವ ಮೋರ್ಚಾ ಪದಾಧಿಕಾರಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಸಾರ್ವಜನಿಕರಿಗೆ ಸಿಹಿ‌ ಹಂಚಿದರು. ಇದೆ ಸಮಯದಲ್ಲಿ ತಾಯಿ ಭಾರತಾಂಬೆ ಮತ್ತು ಭಾರತೀಯ ಸೈನಿಕರಿಗೆ ಜೈಕಾರ ಕೂಗಿ ಅಭಿಮಾನ ಪ್ರದರ್ಶಿಸಿದರು.

ಇದೇ ವೇಳೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಯಿರಾಮ ಜಹಗೀರದಾರ್ ರವರು “ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಪ್ರತಿ ಸಾರಿ ಉಗ್ರರ ದಾಳಿ ಆದಾಗೆಲ್ಲ ನಮ್ಮ‌ ಭಾರತೀಯ ಸೇನೆ ಅವರಿಗೆ ತಕ್ಕ ಸರಿಯಾದ ಉತ್ತರ ಕೊಟ್ಟಿದೆ. ಇನ್ಮುಂದೆ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ ನೂರು ಸಲ ವಿಚಾರ ಮಾಡುವಂತೆ ಪಾಠ ಕಲಿಸಿದ್ದಾರೆ” ಎಂದು ಹರ್ಷ ವ್ಯಕ್ತಡಿಸಿ ಸಂಭ್ರಮಪಟ್ಟರು.

“ಇಂದು ದೇಶಾದ್ಯಂತ ಮಾಕ್ ಡ್ರಿಲ್ ಮಾಡುತ್ತಾರೆ ಎಂದು ಹೇಳಲಾಗಿತ್ತು.‌ ಆದರೆ, ಇಂದು ನಮ್ಮ‌ ಭಾರತೀಯ ಸೇನೆ ಪಾಕ್ ಡ್ರಿಲ್ ಮಾಡಿದೆ. ನೂರಾರು ಉಗ್ರರನ್ನು ನಮ್ಮ ಸೈನಿಕರು ಸಂಹಾರ ಮಾಡಿದ್ದಾರೆ. ಹಾಗಾಗಿ, ನಮ್ಮ ಸೈನಿಕರಿಗೆ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ” ಎಂದು ಎನ್ನುತ್ತಾರೆ ಸ್ನೇಹಿತ ಶೆಟ್ಟಿ.

WhatsApp Group Join Now
Telegram Group Join Now       

ಸೌರಭ್​ ಸಾವಂತ ಮಾತನಾಡಿ, “ಪಾಕಿಸ್ತಾನಿ ಉಗ್ರರು ಪಹಲ್ಗಾಮ್​ನಲ್ಲಿ 26 ಮಂದಿಯನ್ನು ಹತ್ಯೆ ಮಾಡಿದ್ದಕ್ಕೆ ನಾವು ಇಂದು ಪ್ರತೀಕಾರ ತೀರಿಸಿಕೊಂಡೆವು. ಉಗ್ರರು ನಮ್ಮ ಮೇಲೆ ಪದೇಪದೇ ದಾಳಿ ಮಾಡುತ್ತಿದ್ದಾರೆ. ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದೇ ಬಾರಿ ಎಲ್ಲಾ ಉಗ್ರರನ್ನು ಸರ್ವನಾಶ ಮಾಡಬೇಕು‌” ಎಂದು ಆಗ್ರಹಿಸಿದರು.

ಹಾವೇರಿಯಲ್ಲಿ ಬಿಜೆಪಿ ವಿಶೇಷ

ಅಭಿಯಾನ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಹಿನ್ನೆಲೆ ಹಾವೇರಿಯಲ್ಲಿ ಬಿಜೆಪಿ ವಿಶೇಷ ಅಭಿಯಾನ ಮಾಡಿತು. ಹೊಸಮನಿ ಸಿದ್ದಪ್ಪಿ ವೃತ್ತದಲ್ಲಿ ಸೇರಿದ ಕಾರ್ಯಕರ್ತರಿಗೆ ಸಿಂಧೂರ ತಿಲಕವಿಟ್ಟು ಬಿಜೆಪಿ ವಿಜಯೀಭವ ಆಚರಣೆ ಮಾಡಿದರು.

WhatsApp Group Join Now
Telegram Group Join Now       

ಬಿಜೆಪಿ ಮಹಿಳಾ ಕಾರ್ಯಕರ್ತೆಯರು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪುರುಷರಿಗೆ ತಿಲಕ ಇಟ್ಟು ವಿಶೇಷವಾದ ಅಭಿಯಾನ ಮಾಡಿದರು. ಭಾರತ ಸರ್ಕಾರ ಉಗ್ರರರ ಸಂಹಾರದ ಕೆಲಸ ಮಾಡುತ್ತಿದೆ. ಆಪರೇಷನ್ ಸಿಂಧೂರ ಯಶಸ್ವಿಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಶುಭ ಹಾರೈಸಿ ಸಂಭ್ರಮಿಸಿದರು.

ಪಾಕ್ ಪ್ರಜೆಗಳನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯದಿಂದ ಹೊರ ಹಾಕಬೇಕು ಎಂದು ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಈ ಕುರಿತಂತೆ ಬಿಜೆಪಿ ಕಾರ್ಯಕರ್ತರು ಸಿಹಿ ಅಭಿಯಾನ ಮಾಡಿದರು. ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಇಂಡಿಯನ್ ಆಯಿಲ್ ಕಂಪನಿಯ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ. ಅಪ್ಲೈ ಮಾಡಿ.

ಭಾರತೀಯ ಯೋಧರ ಯೋಗಕ್ಷೇಮಕ್ಕಾಗಿ ಶಿವಮೊಗ್ಗದಲ್ಲಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪಾಕಿಸ್ತಾನ ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತೀಯ ಯೋಧರು ಸುರಕ್ಷಿತವಾಗಿರಬೇಕು ಎಂದು ರಾಷ್ಟ್ರಭಕ್ತರ ಬಳಗ ರವೀಂದ್ರನಗರ ಬಲಮುರಿ ಗಣಪತಿ‌ ದೇವಾಲಯದಲ್ಲಿ ಸೈನಿಕರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದರು.

ದೇಶದ ಸೈನಿಕರಿಗೆ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ವಿಘ್ನ ವಿನಾಯಕ ಇನ್ನಷ್ಟು ಶಕ್ತಿ ಕೊಡಲಿ ಎಂದು ಬೇಡಿಕೊಂಡು ವಿಶೇಷ ಪೂಜಾ ಮಾಡಿದರು. ದೇವಾಲಯದ ಹೊರಗಡೆ ಪಟಾಕಿ ಹಚ್ಚಿ, ಸಿಹಿ ಹಂಚಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.

ಬಳಗದ ಕೆ.ಈ.ಕಾಂತೇಶ್ ಮಾತನಾಡಿ, “ಭಾರತ ಮಾತೆಯ ಸಿಂಧೂರ ಜಮ್ಮು ಮತ್ತು ಕಾಶ್ಮೀರ ಎಂಬ ಘೋಷಣೆಯನ್ನು ನಾವು ಪ್ರತಿ ಬಾರಿ ಕೂಗುತ್ತಾ ಬರುತ್ತಿದ್ದೇವೆ ಇಂದಿಗೂ ಕೂಗುತ್ತಾ ಇದ್ದೆವೆ. ಕಾಶ್ಮೀರ ಭಾರತ ಮಾತೆಯ ಕಿರೀಟ. ಪಹಲ್ಗಾಮ್​ನಲ್ಲಿ 25 ಜನ ಸಹೋದರಿಯರ ಸಿಂಧೂರವನ್ನು ಅಳಿಸುವಂತಹ ಹೀನ ಹೇಡಿ ಕೆಲಸವನ್ನು ಮಾಡಿದ್ದಾರೆ. ದೇಶದ ಹೆಮ್ಮೆಯ ಪುತ್ರರು ಅದಕ್ಕೆ ಪ್ರತ್ಯುತ್ತರವಾಗಿ ಕೊಟ್ಟಿದ್ದಾರೆ. ಅಖಂಡ ಭಾರತದ ಕನಸು ನನಸಾಗುವ ಸಂದರ್ಭ ಎದುರು ನೋಡುತ್ತಿದ್ದೇವೆ. ನರೇಂದ್ರ ಮೋದಿ, ಭಾರತೀಯ ಸೈನಿಕರಿಗೆ ಹೆಚ್ಚಿನ ಶಕ್ತಿ ನೀಡಲಿ” ಎಂದು ಜೈಕಾರ ಕೂಗಿದರು.

ಸ್ನೇಹಿತರೆ ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment