ಪಡಿತರ ಬಿಪಿಎಲ್ ರೇಷನ ಕಾರ್ಡ್ ಇದ್ದವರಿಗೆ ಶಾಕ್,
ವಾಹನ ಇವರಿಗೆ, ಕೃಷಿ ಭೂಮಿ ಇದ್ದವರಿಗೆ, ಇಂದಿನಿಂದ ದತ್ತಾಂಶ ಯೋಜನೆ ಕಾರ್ಡ್ ರದ್ದು ಇಲ್ಲಿದೆ ಹೊಸ ನೇಮದ ಸಂಪೂರ್ಣ ಮಾಹಿತಿ.
ಕರ್ನಾಟಕ ಸರ್ಕಾರವು ಬಿಪಿಎಲ್ ಕಾರ್ಡ್ ಅರ್ಹರರನ್ನು ಗುರುತಿಸಲು ಹೊಸ ನಿಯಮಗಳನ್ನು ಜಾರಿಗೆ ಮಾಡಲಿದೆ. ಆಡಳಿತ ಸುಧಾರಣಾ ಆಯೋಗ 2 ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಂಟನೇ ಆಡಳಿತ ಸುಧಾರಣಾ ಅವಧಿಯನ್ನು ಸಲ್ಲಿಸಿದರೆ ಈ ಅವಧಿಯಲ್ಲಿ ಬಿಪಿಎಲ್ ಕಾರ್ಡ್ ಅಕ್ರಮವಾಗಿ ಬಳಕೆಯಾಗುತಿರುವುದನ್ನು ತಡೆಗಟ್ಟಲು 189 ಹೊಸ ಶಿಫಾರಸ್ಸುಗಳನ್ನು ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಅನರ್ಹರಿಗೆ ಅವರಿಗೆ ದೊಡ್ಡ ಆಘಾತ ಸರ್ಕಾರದ ಹೊಸ ನಿಯಮಗಳು ಮತ್ತು ದತ್ತಾಂಶ ಯೋಜನೆ.
ದತ್ತಾಂಶ ಸಂಯೋಜನೆಯ ಮೂಲಕ ಅಕ್ರಮ ತಡೆಗಟ್ಟುವ ಪ್ರಯತ್ನ.
ಅನರ್ಹರು ಬಿಪಿಎಲ್ ಕಾರ್ಡ್ ಪಡೆಯುವುದನ್ನು ತಡೆಯಲು ಸರ್ಕಾರವು ಎಲ್ಲಾ ವಿವಿಧ ಸರಕಾರದ ಡೇಟಾ ಬೇಸ್ಗಳನ್ನು ಒಂದಾಗಿ ಸೇರಿಸಲು ಯೋಜಿಸಿದೆ. ಪಡಿತರ ಚೀಟಿ ದತ್ತಾಂಶವನ್ನು ಜನನ ಮರಣ ನೋಂದಣಿ, ವಾಹನ ನೊಂದಣಿ, ಸರಕಾರಿ ನೌಕರರ ಎಚ್ ಆರ್ ಎಮ್ ಎಸ್ ವಿವರಗಳು ಮತ್ತು ಆಸ್ತಿ ನೋಂದಣಿ ಡೇಟಾ ಗಳೊಂದಿಗೆ ಲಿಂಕ್ ಮಾಡಲಾಗುವುದು. ಇದರಿಂದ ಯಾರು ನಿಜವಾಗಿ ಬಿಪಿಎಲ್ ಕಾರ್ಡಿಗೆ ಅರ್ಹರು ಆಗಿರುತ್ತಾರೆ ಎಂಬುದನ್ನು ತುಂಬ ಸುಲಭವಾಗಿ ಕಂಡು ಹಿಡಿಯಬಹುದು.
ಕೃಷಿ ಭೂಮಿ ಇದ್ದವರಿಗೆ ಬಿಪಿಎಲ್ ಕಾರ್ಡ್ಗೆ ಅನರ್ಹರು.
ಹೊಸ ನೇಮಗಳ ಪ್ರಕಾರ, 3 ಹೆಕ್ಟೇರ್ ಅಂದರೆ 7.5 ಎಕರೆಗಿಂತ ಗಿಂತ ಹೆಚ್ಚು ಕೃಷಿ ಭೂಮಿ ಇದ್ದರೆ, ಅಂತವರಿಗೆ ಬಿಪಿಎಲ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ; ಇವರು ಅರ್ಹರಾಗಿರುತ್ತಾರೆ. ಕೃಷಿ ಭೂಮಿಯ ದತ್ತಾಂಶವನ್ನು ಪಡಿತರ ಚೀಟಿ ಡೇಟಾದೊಂದಿಗೆ ದೊಂದಿಗೆ ಹೋಲಿಸಿದರೆ, ಅನರ್ಹರನ್ನು ಸುಲಭವಾಗಿ ಕಂಡು ಹಿಡಿಯಬಹುದು.
ಇದನ್ನು ಒಮ್ಮೆ ಓದಿ: ಮನಸ್ಸು ಮಾಡಿ ಮೇಲೆದ್ದ ಬಿಎಸ್ಎನ್ಎಲ್, BSNL ಅಬ್ಬರಕ್ಕೆ ಅಂಬಾನಿ, ಏರ್ಟೆಲ್ ಫುಲ್ ನಡುಕ!
ಗ್ರಾಮ ಮತ್ತು ವಾರ್ಡ್ ಸಭೆಗಳಲ್ಲಿ ಪರಿಶೀಲನೆ.
ಬಿಪಿಎಲ್ ಕುಟುಂಬಗಳ ಪಟ್ಟಿಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಪರಿಶೀಲಿಸಿ ಅಂತಿಮವಾಗಿ ಅನುಮೋದನೆ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಖಚಿತ ಪಡಿಸಲು ಸಾಧ್ಯವಾಗುತ್ತದೆ.
ಎಚ್ ಆರ್ ಎಮ್ ಎಸ್ ವಾಹನ ಮತ್ತು ಆಸ್ತಿ ದತ್ತಾಂಶಗಳ ಸಂಯೋಜನೆ.
ಸರಕಾರಿ ನೌಕರರು ವಾಹನ ಮಾಲೀಕರು ಹಾಗೂ ಆಸ್ತಿ ಹೊಂದಿದವರು ಬಿಪಿಎಲ್ ಸೌಲಭ್ಯಗಳನ್ನು ದುರ್ಬಳಕೆ ಮಾಡುವುದನ್ನು ತಡೆಯಲು ಎಚ್ ಆರ್ ಎಮ್ ಎಸ್ ವಾಹನ ನೊಂದಣಿ ಮತ್ತು ಆಸ್ತಿ ದತ್ತಾಂಶವನ್ನು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಪಡಿತರ ವ್ಯವಸ್ಥೆಗೆ ಜೋಡಿಸಲಾಗುವುದು.
ಈ ಹೊಸ ನೀತಿಗಳು ಬಿಪಿಎಲ್ ಕಾರ್ಡ್ ಅಕ್ರಮ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಲ್ಲದು. ದತ್ತಾಂಶ ತಂತ್ರಜ್ಞಾನ ಮತ್ತು ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆಯ ಮೂಲಕ ಸರಕಾರಿ ಯೋಜನೆಗಳು ನಿಜವಾದ ಅಗತ್ಯ ಇರುವವರಿಗೆ ತಲುಪುವಂತೆ ಮಾಡಲು ಸರ್ಕಾರ ತೀವ್ರವಾಗಿ ಕೆಲಸ ಮಾಡುತ ಮಾಡುತ್ತಿದೆ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.